ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಭಾರತದ ನಾಗರಿಕರು ತಮ್ಮ ವಾಟ್ಸಾಪ್ ಮೂಲಕ ಡಿಜಿಲಾಕರ್ ಅನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಜನರು ಈಗ ತಮ್ಮ ಅಗತ್ಯ ದಾಖಲೆಗಳನ್ನು ಸುಲಭವಾಗಿ ವಾಟ್ಸಾಪ್ ಮೂಲಕವೇ ಡೌನ್ಲೋಡ್ ಮಾಡಬಹುದಾಗಿದೆ.
ಜನರು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು MyGov ಸಹಾಯವಾಣಿಯ ಮೂಲಕ ತಮ್ಮ ದಾಖಲೆಯ ಡಿಜಿಟಲ್ ಪ್ರತಿಯನ್ನು ಪಡೆಯಬಹುದು. ಈಗ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವರ್ ಲೈಸೆನ್ಸ್, ಎಸ್ಎಸ್ಎಲ್ಸಿ ಅಂಕ ಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ವಾಹನದ ಆರ್ಸಿಯಂತಹ ಅಗತ್ಯ ದಾಖಲೆಗಳನ್ನು ವಾಟ್ಸಾಪ್ ಬಳಸಿಕೊಂಡು ಡೌನ್ಲೋಡ್ ಮಾಡಬಹುದು.
ವಾಟ್ಸಾಪ್ ಡಿಜಿಲಾಕರ್ ಎಂದರೇನು: ಮೂಲತಃ ಮಾರ್ಚ್ 2020 ರಲ್ಲಿ ಭಾರತ ಸರ್ಕಾರ ಕೊರೊನಾ ಹೆಲ್ಪ್ ಡೆಸ್ಕ್ ಅನ್ನು ಆರಂಭ ಮಾಡಿತು. ಈ ಹೆಲ್ಪ್ ಡೆಸ್ಕ್ ಮೂಲಕ ಕೊರೊನಾ ಸಾಂಕ್ರಾಮಿಕ ಕುರಿತಾದ ಅಗತ್ಯ ಮಾಹಿತಿ ಲಭ್ಯವಾಗುತ್ತಿತ್ತು. ಹಾಗೆಯೇ ಕೋವಿಡ್ ಲಸಿಕೆ ಬುಕ್ಕಿಂಗ್, ಲಸಿಕೆ ಪ್ರಮಾಣ ಪತ್ರಗಳ ವಿತರಣೆ, ಸಹ ಈ ಸಹಾಯವಾಣಿಯ ಮೂಲಕ ಮಾಡಲಾಯಿತು.

ಆದರೆ ಇತ್ತೀಚೆಗೆ ಇತರೆ ಮಾಹಿತಿ ಪಡೆಯಲು ಕೂಡಾ ಈ ಹೆಲ್ಪ್ ಡೆಸ್ಕ್ ಅನ್ನು ಬಳಕೆ ಮಾಡಲು ಸರ್ಕಾರ ಅನುವು ಮಾಡಿಕೊಟ್ಟಿದೆ. ವರದಿಗಳ ಪ್ರಕಾರ, ಡಿಜಿಲಾಕರ್ 5 ಬಿಲಿಯನ್ ದಾಖಲೆಗಳನ್ನು ಹೊಂದಿದೆ ಮತ್ತು 100 ಮಿಲಿಯನ್ ಜನರು ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಹಾಗಾದರೆ ವಾಟ್ಸಾಪ್ ಬಳಸಿ ಅಗತ್ಯ ದಾಖಲೆ ಡೌನ್ಲೋಡ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...
ವಾಟ್ಸಾಪ್ ಮೂಲಕ ದಾಖಲೆ ಡೌನ್ಲೋಡ್ ಹೇಗೆ?
* ನಾಗರಿಕರಿಗೆ ಅಗತ್ಯ ದಾಖಲೆ ಪಡೆಯಲು ಸುಲಭವಾಗಿಸುವ ನಿಟ್ಟಿನಲ್ಲಿ ವಾಟ್ಸಾಪ್ನಲ್ಲಿ ಸರ್ಕಾರವು ಚಾಟ್ಬಾಟ್ ಅನ್ನು ಸಕ್ರಿಯಗೊಳಿಸಿದೆ
* ಮೊದಲು 91-9013151515 ಗೆ ಹೊಸ ಸಂದೇಶವನ್ನು ಕಳುಹಿಸಬೇಕು
* Namastey'/ 'Hi'/ 'Digilocker ಎಂದು ಟೈಪ್ ಮಾಡಿ ಸೆಂಡ್ ಮಾಡಬೇಕು
* ನೀವು ಈಗ ಬಾಟ್ನೊಂದಿಗೆ ಚಾಟ್ ಮಾಡಲು ಅವಕಾಶ ಲಭ್ಯವಾಗಲಿದೆ
* ಬಾಟ್ನೊಂದಿಗೆ ಚಾಟ್ ಮಾಡಿ ಡಿಜಿಲಾಕರ್ನಿಂದ ಅಗತ್ಯ ದಾಖಲೆಯನ್ನು ಪಡೆದುಕೊಳ್ಳಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications