ಮುಂಬೈ ಮಾರುಕಟ್ಟೆ ಸೋಮವಾರ ಅಂತಿಮವಾಗಿ 1624 ಅಂಕಗಳ ಇಳಿಕೆ ಕಂಡು ತನ್ನ ವಹಿವಾಟು ಮುಗಿಸಿದೆ. ಚೀನಾ ಮಾರುಕಟ್ಟೆಯಲ್ಲಿನ ಬದಲಾವಣೆ ಕುಸಿತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸತ್ಯವಾದರೂ ಘಟನಾವಳಿಗಳನ್ನು ವಿಶ್ಲೇಷಣೆ ಮಾಡಿದಾಗ ಅನೇಕ ಅಂಶಗಳು ಸಿಗುತ್ತವೆ . ಅಸಲಿ ಕತೆ ಬೇರೆಯೇ ಇದೆ.
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ತೆಗೆದುಕೊಂಡ ಬದಲಾವಣೆಗಳು. ಮಿಡ್ ಕ್ಯಾಪ್ ಷೇರುಗಳಲ್ಲಾದ ಸ್ಥಿತ್ಯಂತರ ಎಲ್ಲವೂ ಷೇರು ಕುಸಿಯಲು ಒಂದೆಲ್ಲಾ ಒಂದು ರೀತಿಯಲ್ಲಿ ಕಾರಣವಾಯಿತು. ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.[ವಿಲ್ ನಲ್ಲಿ ಸೇರಿಸಲೇಬೇಕಾದ 7 ಅಂಶಗಳು ಯಾವವು?]
ಆದರೂ ಮಾರುಕಟ್ಟೆ ಏಕಾಏಕಿ ಈ ಪ್ರಮಾಣದ ಕುಸಿತ ಕಾಣಲು ಕಾರಣವೇನು ಎಂಬುದನ್ನು ಹುಡುಕಿಕೊಂಡು ಹೋದಾಗ ಅನೇಕ ಅಂಶಗಳು ಎದುರಾಗುತ್ತವೆ. ಅದೆಲ್ಲದರ ಮೇಲೆ ಒಂದು ನೋಟ ಇಲ್ಲಿದೆ. (ಗುಡ್ ರಿಟರ್ನ್ಸ,ಇನ್)
ಹೆಚ್ಚಿನ ಬೆಲೆ ಕಟ್ಟಿದರು
ನಿರ್ದಿಷ್ಟ ಮುಖಬೆಲೆಯ ಷೇರೊಂದು 18 ರಿಂದ 20 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಹಣ ಮಾಡುವ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಕಡಿಮೆ ಮುಖಬೆಲೆಗೆ ಖರೀದಿಸಿ ಹೆಚ್ಚಿನದಕ್ಕೆ ಮಾರಾಟ ಮಾಡುವ ಸಮುದಾಯವೇ ಹುಟ್ಟಿಕೊಂಡಿತ್ತು,. ವಾರಕ್ಕಿಂತ ಹೆಚ್ಚಿನ ಕಾಲ ಯಾರೂ ಷೇರು ಇಟ್ಟುಕೊಳ್ಳುತ್ತಿರಲಿಲ್ಲ.
ಸುಳ್ಳಾದ ಮೌಲ್ಯ
ಒಬ್ಬರ ಕೈಯಿಂದ ಒಬ್ಬರಿಗೆ ಸಂಚರಿಸುತ್ತ ಷೇರಿನ ಬೆಲೆ ಹೆಚ್ಚಾಯಿತೇ ವಿನಃ ಸಂಬಂಧಿಸಿದ ಕಂಪನಿ ಗಳಿಸಿಕೊಂಡಿದ್ದು ಅಷ್ಟಕಷ್ಟೆ. ಕಂಪನಿಗಳ ವರದಿಗಳನ್ನು ವಿಶ್ಲೇಷಣೆ ಮಾಡಿದರೆ ಈ ಅಂಶ ಕಾಣಸಿಗುತ್ತದೆ.
ಕಳಪೆ ತ್ರೈಮಾಸಿಕ ವರದಿಗಳು
ಹಲವಾರು ಪ್ರಮುಖ ಕಂಪನಿಗಳಿ ಕಳೆದ ಎರಡು ತ್ರೈಮಾಸಿಕ ವರದಿಗಳು ಕಳಪೆಯಾಗಿದ್ದವು. ಎಸ್ ಬಿಐ, ಇನ್ಫೋಸಿಸ್ ನಂತವುಗಳೇ ನಿರೀಕ್ಷಿತ ಸಾಧನೆ ಮಾಡಲು ಒದ್ದಾಡಿದ್ದರು.
ಚೀನಾ ಒಂದು ನೆಪ ಅಷ್ಟೆ
ಚೀನಾದಲ್ಲಿನ ಆರ್ಥಿಕ ಕುಸಿತ ಭಾರತದ ಮಾರುಕಟ್ಟೆ ಕುಸಿಯಲು ನೆಪವಾಯಿತು ಅಷ್ಟೆ. ಒಂದು ಹಂತಕ್ಕೆ ತಲುಪಿದ್ದ ಗೊಂದಲಗಳು ಸೋಮವಾರ ಆಸ್ಫೋಟಗೊಂಡವು ಎಂದು ಹೇಳಬಹುದು.
ಅಂತಾರಾಷ್ಟ್ರೀಯ ಮಾರುಕಟ್ಟೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾದ ಲಿಕ್ವಿಡಿಟಿ ಮೌಲ್ಯ ಜನರಿಗೆ ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳಿತು ಎಂಬ ಗೊಂದಲ ಹುಟ್ಟುಹಾಕಿತು. ದೇಶಿಯ ಮಾರುಕಟ್ಟೆಗಿಂತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಮನೋಭಾವವೂ ಎದುರಾಯಿತು.
ಕೊನೆ ಮಾತು
ಮಾರುಕಟ್ಟೆಯಲ್ಲಿನ ಏಕಾಏಕಿ ಕುಸಿತ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಈಗ ಹೂಡಿಕೆ ಮಾಡಲು ಮುಂದಾಗುವ ಬದಲು ಕಾದು ನೋಡುವ ತಂತ್ರ ಒಳ್ಳೆಯದು. ಯಾವ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications