ಎಐಎಡಿಎಂಕೆ ಸಂಸ್ಥಾಪಕ ಆಗಿರುವ ಎಂ.ಜಿ. ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ರೂ.100 ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ರೂ. 2000, 500, 200 ಮುಖಬೆಲೆಯ ಹೊಸ ನೋಟುಗಳ ನಂತರ ಇದೀಗ ರೂ. 100 ನಾಣ್ಯ ಬಿಡುಗಡೆ ಆಗಲಿದೆ!!
ಕೇಂದ್ರ ಸರ್ಕಾರ ರೂ. 200 ಮುಖಬೆಲೆಯ ಹೊಸ ನೋಟು ಚಲಾವಣೆಗೆ ತಂದ ನಂತರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲಿಯೇ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಿದೆ. 200 ಹೊಸ ನೋಟು ಚಲಾವಣೆಗೆ, ನೋಟಿನ ವೈಶಿಷ್ಟ್ಯತೆಗಳೇನು ಇಲ್ಲಿ ನೋಡಿ..
ಎಂ.ಜಿ.ಆರ್ ನೆನಪಾರ್ಥ
ಎಐಎಡಿಎಂಕೆ ಸಂಸ್ಥಾಪಕ ಆಗಿರುವ ಎಂ.ಜಿ. ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ರೂ.100 ನಾಣ್ಯಗಳನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ನಾಣ್ಯದ ವೈಶಿಷ್ಟ್ಯತೆ
100 ಮೌಲ್ಯದ ನಾಣ್ಯಗಳು 44 ಮಿಲಿ ಮೀಟರ್ ಸುತ್ತಳತೆ ಮತ್ತು 35 ಗ್ರಾಂ ತೂಕ ಹೊಂದಿರಲಿದೆ. ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರಲಾಂಛನ ಅಶೋಕಸ್ತಂಭದ ಚಿತ್ರವಿದ್ದು, ಕೆಳಗೆ ಸತ್ಯಮೇವ ಜಯತೆ ಇರಲಿದೆ. ಮತ್ತೊಂದು ಬದಿ ಎಂ.ಜಿ. ರಾಮಚಂದ್ರನ್ ಅವರ ಬಾವಚಿತ್ರ ಇರಲಿದೆ.
ತಮಿಳುನಾಡು ಸರ್ಕಾರ ಮನವಿ
ಖ್ಯಾತ ನಟ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್ ಅವರ ಜನ್ಮ ಶತಮಾನೋತ್ಸವದ ಸುಸಂದರ್ಭದಲ್ಲಿ ವಿಶೇಷ ನಾಣ್ಯ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು.
ಎಂ.ಎಸ್. ಸುಬ್ಬುಲಕ್ಷ್ಮಿ ಜನ್ಮ ಶತಮಾನೋತ್ಸವ
ಇದೇ ಸಂದರ್ಭದಲ್ಲಿ ಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಇವರ ಜನ್ಮ ಶತಮಾನೋತ್ಸವ ಕೂಡ ಇದೆ. ಸರ್ಕಾರ ಎಂ.ಜಿ.ಆರ್ ಮತ್ತು ಎಂ.ಎಸ್ ಸುಬ್ಬಲಕ್ಷ್ಮೀ ನೆನಪಾರ್ಥ ಈ ನಾಣ್ಯಗಳನ್ನು ಬಿಡುಗಡೆ ಮಾಡಲಿದೆ. ಒಂದು ನಾಣ್ಯದ ಹಿಂಭಾಗದಲ್ಲಿ ಸುಬ್ಬಲಕ್ಷ್ಮಿ ಹಾಗೂ ಇನ್ನೊಂದು ನಾಣ್ಯದ ಹಿಂಭಾಗದಲ್ಲಿ ಎಂ.ಜಿ. ರಾಮಚಂದ್ರನ್ ಅವರ ಭಾವಚಿತ್ರ ಮುದ್ರಣವಾಗಲಿದೆ.
ರೂ. 5, 10 ನಾಣ್ಯ ಬಿಡುಗಡೆ
ಇದೇ ಸಂದರ್ಭದಲ್ಲಿ 5 ಮತ್ತು 10 ರೂಪಾಯಿಯ ಹೊಸ ನಾಣ್ಯಗಳನ್ನು ಸರ್ಕಾರ ಬಿಡುಗಡೆ ಮಾಲು ನಿರ್ಧರಿಸಿದೆ. ಇನ್ನು 5 ರೂಪಾಯಿ ಹೊಸ ನಾಣ್ಯ 23 ಮಿಲಿಮೀಟರ್ ವ್ಯಾಸವಿರಲಿದೆ.
ರೂ. 5 ನಾಣ್ಯಗಳು ಡಾ.ಎಂ.ಜಿ. ರಾಮಚಂದ್ರನ್ ಜನ್ಮ ಶತಮಾನೋತ್ಸವದ ನೆನಪು ಮತ್ತು ರೂ. 10 ನಾಣ್ಯಗಳು ಡಾ ಎಂ.ಎಸ್. ಸುಬ್ಬುಲಕ್ಷ್ಮಿ ಜನ್ಮ ಶತಮಾನೋತ್ಸವದ ನೆನಪಿನ ಪ್ರತೀಕಗಳಾಗಿ ಹೊಮ್ಮಲಿವೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications