ತೆರಿಗೆಯಿಂದ ತಪ್ಪಿಸಿಕೊಳ್ಳುವವರನ್ನು ತಡೆಯಲು ಮತ್ತು ತೆರಿಗೆದಾರರ ವ್ಯವಹಾರ ಸರಳೀಕರಿಸಲು ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ನಿಯಮಗಳನ್ನು ಬದಲಿಸಿದೆ.
ತೆರಿಗೆಯಿಂದ ತಪ್ಪಿಸಿಕೊಳ್ಳುವವರನ್ನು ತಡೆಯಲು ಮತ್ತು ತೆರಿಗೆದಾರರ ವ್ಯವಹಾರ ಸರಳೀಕರಿಸಲು ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ನಿಯಮಗಳನ್ನು ಬದಲಿಸಿದೆ.
ಡಿಸೆಂಬರ್ 5 ರಿಂದ ಜಾರಿಗೆ ಬರುವಂತೆ 1962ರ ಆದಾಯ ತೆರಿಗೆ ನಿಯಮಗಳನ್ವಯ ತಿದ್ದುಪಡಿ ಮಾಡಿದೆ ಎಂದು ಕೇಂದ್ರ ತೆರಿಗೆ ಮಂಡಳಿ (ಸಿಬಿಡಿಟಿ) ಘೋಷಿಸಿದೆ.
ಪ್ಯಾನ್ ಕಾರ್ಡ್ ಅರ್ಜಿ ನಮೂನೆ
ನೀವು ಹೊಸ ಪ್ಯಾನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದರೆ, ಹೊಸ ಅರ್ಜಿಯನ್ನು ನಿಮಗೆ ನೀಡಲಾಗುವುದು. ಅದರಲ್ಲಿ ತಂದೆ ಹೆಸರು ನಮೂದಿಸುವುದು ಕಡ್ಡಾಯವಾಗಿರುವುದಿಲ್ಲ. ಇಲ್ಲಿಯವರೆಗೆ ಪಾನ್ ಕಾರ್ಡ ನಲ್ಲಿ ಮುದ್ರಿಸಲಾದ ಹೆಸರನ್ನು ಒದಗಿಸುವುದು ಕಡ್ಡಾಯವಾಗಿತ್ತು. ಯಾರ ತಂದೆ, ತಾಯಿ ಸತ್ತರು ಕೂಡ ಅಂತವರ ಸಮಸ್ಯೆಗಳನ್ನು ನಿವಾರಿಸಲು ಪ್ಯಾನ್ ಕಾರ್ಡ್ ತಿದ್ದುಪಡಿ ಉದ್ದೇಶಿಸಿರುತ್ತದೆ.
ಹೆಸರು ನಮೂದಿಸುವ ಆಯ್ಕೆ
ಪ್ಯಾನ್ ಅರ್ಜಿದಾರರು ಕಾರ್ಡಿನಲ್ಲಿ ಯಾರ ಹೆಸರನ್ನು ಅವರು ಮುದ್ರಿಸಬೇಕೆಂಬುದನ್ನು ಆಯ್ಕೆ ಮಾಡಬಹುದು. ಯಾವುದೇ ಆಯ್ಕೆಯನ್ನು ಒದಗಿಸದಿದ್ದರೆ, ನಂತರ ತಂದೆಯ ಹೆಸರನ್ನು ಮಾತ್ರ ಬಳಸಲಾಗುತ್ತದೆ. ನೀವು ತಂದೆಯ ಹೆಸರನ್ನು ನೀಡಿದ್ದರೂ ಸಹ, ನಿಮ್ಮ ಪಾನ್ ಕಾರ್ಡ್ನಲ್ಲಿ ತಾಯಿಯ ಹೆಸರನ್ನು ನಮೂದಿಸುವ ಆಯ್ಕೆಯನ್ನು ಸಹ ನೀವು ಹೊಂದಿರುತ್ತೀರಿ.
ಈ ಘಟಕಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ
ಸಣ್ಣ ಉದ್ಯಮಗಳಿಂದ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಗಟ್ಟಲು ಆದಾಯ ತೆರಿಗೆ ಇಲಾಖೆಯು ಹಣಕಾಸು ವರ್ಷದಲ್ಲಿ ಕನಿಷ್ಟ 2.5 ಲಕ್ಷ ಮೌಲ್ಯದ ವಹಿವಾಟುಗಳನ್ನು ಮಾಡುವ ಎಲ್ಲಾ ಸಂಸ್ಥೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಮಾಡಿದೆ. ವ್ಯಕ್ತಿಯ ವಿಷಯದಲ್ಲಿ, ಒಂದು ವ್ಯಕ್ತಿಯ ಹೊರತುಪಡಿಸಿ, ಒಂದು ಹಣಕಾಸಿನ ವರ್ಷದಲ್ಲಿ ಎರಡು ಲಕ್ಷ ಐವತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಮೊತ್ತದ ಹಣಕಾಸಿನ ವಹಿವಾಟುಮಾಡುತ್ತಿದ್ದರೆ ಪ್ಯಾನ್ ಕಾರ್ಡ್ ಸಂಖ್ಯೆ ಹೊಂದಿರಬೇಕಾಗುತ್ತದೆ.
ಇವರಿಗೂ ಅನ್ವಯ
ಈ ನಿಯಮವು ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕ, ಪಾಲುದಾರ, ಟ್ರಸ್ಟೀ, ಲೇಖಕ, ಸಂಸ್ಥಾಪಕ, ಕರ್ತಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಅಂತಹ ಎಲ್ಲ ಸಂಸ್ಥೆಗಳ ಕಚೇರಿ-ಧಾರಕರಿಗೆ ಸಹ ಅನ್ವಯಿಸುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications