ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿವೆ. ಚುನಾವಣೆಗೆ ಕೆಲವೇ ತಿಂಗಳುಗಳ ಮುನ್ನ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್ ಬಹುತೇಕ ಮಧ್ಯಂತರ ಬಜೆಟ್ ರೂಪದಲ್ಲಿರಲಿದೆ.
ಹಿಂದಿನ ಮಧ್ಯಂತರ ಬಜೆಟ್ ಸಂಪ್ರದಾಯದಂತೆ ಈ ಬಜೆಟ್ನಲ್ಲಿಯೂ ಸರಕಾರದ ಮುಖ್ಯ ನೀತಿಗಳಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗದಿರಬಹುದು.

ಈ ಸಂದರ್ಭದಲ್ಲಿ ದೇಶದ ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯ (SME - Small and Medium-sized Enterprises) ಜಿಎಸ್ಟಿ ಕಾನೂನಿನಲ್ಲಿ ಕೆಲ ಬದಲಾವಣೆಗಳನ್ನು ಬಯಸುತ್ತಿದೆ. 2018-19ರ ಬಜೆಟ್ ನಲ್ಲಿ ಕೇಂದ್ರ ಸರಕಾರ ಎಂಎಸ್ಇಗಳಿಗೆ ಬಂಡವಾಳ ಹರಿವಿನ ಬಗ್ಗೆ ನೀತಿಯನ್ನು ಪ್ರಕಟಿಸಿತ್ತು.
ಡಿಮಾನೆಟೈಸೇಷನ್ ಹಾಗೂ ಜಿಎಸ್ಟಿ ಜಾರಿಯ ನಂತರ ಎಂಎಸ್ಎಂಇ ವಲಯದ ಉದ್ಯಮಗಳ ಅಧಿಕೃತ ನೋಂದಣಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇದರಿಂದ ಎಂಎಸ್ಎಂಇಗಳ ಬಗ್ಗೆ ಬೃಹತ್ ಡೇಟಾಬೇಸ್ ಸಂಗ್ರಹವಾಗುತ್ತಿದ್ದು, ಇದು ಎಂಎಸ್ಎಂಇಗಳ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಲು ಹಾಗೂ ಬಂಡವಾಳ ಹೂಡಿಕೆಯ ಅವಶ್ಯಕತೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದು 2018-19 ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಹೇಳಿದ್ದರು.
ಮುದ್ರಾ ಸಾಲ ಯೋಜನೆಯಡಿ ಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಆಗ ಅರುಣ್ ಜೇಟ್ಲಿ ತಿಳಿಸಿದ್ದರು. ಆದರೂ ಈಗಿನ ಮಧ್ಯಂತರ ಬಜೆಟ್ನಲ್ಲಿ ಎಸ್ಎಂಇ ವಲಯಕ್ಕೆ ತೀರಾ ದೊಡ್ಡ ಕೊಡುಗೆಯನ್ನು ನಿರೀಕ್ಷಿಸುವಂತಿಲ್ಲ. ಒಟ್ಟಾರೆಯಾಗಿ ಎಸ್ಎಂಇ ವಲಯಕ್ಕೆ ಹೆಚ್ಚಿನ ಹಣಕಾಸು ಹರಿವಿನ ನೀತಿಯ ಬಗ್ಗೆ ನಿರ್ಧಾರ ಪ್ರಕಟವಾಗುವಿಕೆಯನ್ನು ಸದ್ಯಕ್ಕೆ ನಿರೀಕ್ಷಿಸಬಹುದಾಗಿದೆ.

ಈಗ ಹಲವಾರು ವರ್ಷಗಳಿಂದ ಎಸ್ಎಂಇ ವಲಯ ಬಂಡವಾಳ ಕೊರತೆಯಿಂದ ನಲುಗುತ್ತಿದೆ. ಇದರ ಜೊತೆಗೆ ವಸೂಲಾಗದ ಸಾಲಗಳ ಪ್ರಕರಣಗಳನ್ನು ಆರ್ಬಿಐ ತನಿಖೆ ನಡೆಸುತ್ತಿದೆ. ತೆರಿಗೆ ಸಂಬಂಧಿತ ಬಹುತೇಕ ಎಲ್ಲ ವಿಷಯಗಳು ಈಗ ಜಿಎಸ್ಟಿ ಅಡಿಯಲ್ಲಿ ಬರುವುದರಿಂದ ಎಸ್ಎಂಇ ವಲಯಕ್ಕಾಗಿ ವಿಶೇಷ ಕೊಡುಗೆಗಳು ಸಿಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಜಿಎಸ್ಟಿ ದರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಜಿಎಸ್ಟಿ ಕೌನ್ಸಿಲ್ಗೆ ಮಾತ್ರ ಇರುವುದರಿಂದ ಬಜೆಟ್ನಲ್ಲಿ ಜಿಎಸ್ಟಿ ದರಗಳನ್ನು ಸರಕಾರ ಬದಲಾಯಿಸುವ ಸಾಧ್ಯತೆಗಳಿಲ್ಲ.
ಹೀಗಾಗಿ ಹೆಚ್ಚೆಂದರೆ ಎಸ್ಎಂಇಗಳ ಉತ್ತೇಜನಕ್ಕಾಗಿ ಕೆಲ ನೀತಿ ಹಾಗೂ ಕಾರ್ಯಕ್ರಮಗಳನ್ನು ಸರಕಾರ ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಘೋಷಿಸಬಹುದಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications