ನವದೆಹಲಿ, ಫೆಬ್ರವರಿ 01: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಶುಕ್ರವಾರ(ಫೆ.01) ಮಂಡಿಸಿದ್ದಾರೆ.
ಅನಾರೋಗ್ಯದಿಂದಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಖಾತೆಯ ಹೊಣೆಗಾರಿಕೆಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಕಳೆದ ವಾರವೇ ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು.
ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿದ್ದರಿಂದ, ಮಧ್ಯಮ ವರ್ಗದ ಜನರಿಗೆ ಭರಪೂರ ಕೊಡಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.ಅಂತೆಯೇ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷಕ್ಕೇರಿಸಿ ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ.
ಆದಾಯ ತೆರಿಗೆ ಸ್ಲ್ಯಾಬ್ , ಜಿಎಸ್ಟಿ ಸ್ಲ್ಯಾಬ್ ನಲ್ಲಿ ಮಹತ್ವದ ಬದಲಾವಣೆಯಾಗಬಹುದು ಎಂದು ಜನಸಾಮಾನ್ಯರು ಕಾತರದಿಂದ ಕಾಯುತ್ತಿದ್ದರು. ಆದರೆ ಅದರಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿರುವುದರಿಂದ ಮೋದಿ ಸರ್ಕಾರ ಈ ಬಜೆಟ್ ಅನ್ನು ಜನತೆಯ ಓಲೈಕೆಗೆ ಬಳಸಿದೆ ಎಂಬ ಮಾತು ಕೇಳಿಬಂದಿದೆ. ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಷೇರು ಪೇಟೆ ಸೂಚ್ಯಂಕವೂ ಏರಿದೆ!
ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಗುಡ್ ರಿಟರ್ನ್ಸ್ ಕನ್ನಡ ಮತ್ತು ಒನ್ ಇಂಡಿಯಾ ಕನ್ನಡ ನೀಡಲಿದೆ.
Feb 01, 2019, 12:52 pm IST
ಗೃಹ ಬಾಡಿಗೆಯ ಮೇಲಿನ ಸೆಸ್ ಇಳಿಕೆ
Feb 01, 2019, 12:46 pm IST
ಬಜೆಟ್ ಮಂಡನೆ ಪೂರ್ಣ: ಮಧ್ಯಮ ವರ್ಗದ ತೆರಿಗೆದಾರರಿಗೆ ಬೋನಸ್ ನೀಡಿದ ಮೋದಿ ಸರ್ಕಾರ
-ಪಿಯೂಶ್ ಗೋಯಲ್
Feb 01, 2019, 12:43 pm IST
ಪ್ರಸ್ತುತ ಸರ್ಕಾರಕ್ಕೆ ಅಭಿವೃದ್ಧಿಯೇ ಜನಾಂದೋಲನವಾಗಿದೆ-ಪಿಯೂಶ್ ಗೋಯಲ್
Feb 01, 2019, 12:41 pm IST
ಸ್ಟಾಂಡರ್ಡ್ ಟ್ಯಾಕ್ಸ್ ಡಿಡಕ್ಷನ್ 40,000 ಕ್ಕೆ ಏರಿಕೆ 50,000
Feb 01, 2019, 12:40 pm IST
2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ವಿನಾಯತಿ
Feb 01, 2019, 12:35 pm IST
1.5 ಲಕ್ಷ ವರೆಗೂ ಉಳಿತಾಯ ಸೇರಿ 6.5 ಲಕ್ಷದವರೆಗೂ ತೆರಿಗೆ ವಿನಾಯತಿ
Feb 01, 2019, 12:33 pm IST
ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ: 5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ.
Feb 01, 2019, 12:26 pm IST
ವಿಷನ್ 2030ಗೆ 10 ಮಹತ್ವದ ಆಯಾಮಗಳನ್ನು ಹೇಳಿದ ಹಣಕಾಸು ಸಚಿವ ಪಿಯೂಶ್ ಗೋಯಲ್
Feb 01, 2019, 12:19 pm IST
ಗಂಗಾ ಸೇರಿದಂತೆ ಎಲ್ಲಾ ನದಿಗಳ ಶುದ್ಧೀಕರಣ ಮತ್ತು ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವುದು ನಮ್ಮ ಆದ್ಯ ಜವಾಬ್ದಾರಿ -ಪಿಯೂಶ್ ಗೋಯಲ್
Feb 01, 2019, 12:18 pm IST
ಇಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಒತ್ತು. ಈ ಮೂಲಕ ಭಾರತವನ್ನು ಮಾಲಿನ್ಯಮುಕ್ತಗೊಳಿಸುವುದು-ಪಿಯೂಶ್ ಗೋಯಲ್
Feb 01, 2019, 12:14 pm IST
ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಕಾರ್ಯರೂಪಕ್ಕೆ, ಕಳೆದ ಐದು ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು. ಭಾರತ ಹೆದ್ದಾರಿ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ-ಪಿಯೂಶ್ ಗೋಯಲ್
Feb 01, 2019, 12:12 pm IST
ಜಿಎಸ್ಟಿ ಸಂಗ್ರಹ ಜನವರಿ 2019 ರಲ್ಲಿ 1 ಕೋಟಿ ರೂ-ಪಿಯೂಶ್ ಗೋಯಲ್
Feb 01, 2019, 12:09 pm IST
ದಿನಬಳಕೆಯ ಹಲವು ವಸ್ತುಗಳ ಜಿಎಸ್ಟಿ ದರದಲ್ಲಿ ನಿರಂತರವಾಗಿ ಬದಲಾವಣೆ ಮಾಡಲಾಗುತ್ತಿದೆ-
-ಪಿಯೂಶ್ ಗೋಯಲ್
Feb 01, 2019, 12:05 pm IST
ಉಜ್ವಲ ಯೋಜನೆಯಡಿ 6 ಕೋಟಿ ಜನರಿಗೆ ಉಚಿತ ಎಲ್ ಪಿಜಿ ಸೌಲಭ್ಯ -ಪಿಯೂಶ್ ಗೋಯಲ್
Feb 01, 2019, 12:03 pm IST
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 58,166 ಕೋಟಿ ರೂ. ಕಳೆದ ವರ್ಷಗಳಿಗಿಂತ 21 % ದಷ್ಟು ಹೆಚ್ಚಿಸಲಾಗಿದೆ.
Feb 01, 2019, 12:01 pm IST
ಐಟಿ ಇಲಾಖೆ ಸಂಪೂರ್ಣ ಡಿಜಿಟಲ್ ಆಗಿದ್ದು, ಕಳೆದ ವರ್ಷ ಶೇ.99 ರಷ್ಟು ತೆರಿಗೆ ಆನ್ ಲೈನ್ ನಲ್ಲೇ ಕಟ್ಟಲಾಗಿದೆ-ಪಿಯೂಶ್ ಗೋಯಲ್
Feb 01, 2019, 12:00 pm IST
ತೆರಿಗೆ ಸಂಗ್ರಹ ಹೆಚ್ಚಾಗಿದ್ದು, ಭಾರತದ ತೆರಿಗೆದಾರರಿಗೆ ಕೃತಜ್ಞತೆ-ಪಿಯೂಶ್ ಗೋಯಲ್
Feb 01, 2019, 11:59 am IST
ಸಿನಿಮಾ ಕ್ಷೇತ್ರಕ್ಕೆ ಏಕಗವಾಕ್ಷಿ ಯೋಜನೆ -ಪಿಯೂಶ್ ಗೋಯಲ್
Feb 01, 2019, 11:58 am IST
ಮೇಕ್ ಇನ್ ಇಂಡಿಯಾ ಯೋಜನೆಯಡಿ 12 ಲಕ್ಷ ಯುವಕರಿಗೆ ಉದ್ಯೋಗಾವಕಾಶ-ಪಿಯೂಶ್ ಗೋಯಲ್
Feb 01, 2019, 11:57 am IST
ಪಶುಸಂಗೋಪನೆಗೆ ಉತ್ತೇಜನ ನೀಡಲು 2 ಪ್ರತಿಶತ ಬಡ್ಡಿದರದಲ್ಲಿ ಸಾಲ ಸೌಲಭ್ಯ- -ಪಿಯೂಶ್ ಗೋಯಲ್
Feb 01, 2019, 11:54 am IST
One Rank One Pension ಯೋಜನೆಯಡಿ ಸೈನಿಕರಿಗೆ 35,000 ಕೋಟಿ ರೂಗಳನ್ನು ನೀಡಲಾಗಿದೆ-ಪಿಯೂಶ್ ಗೋಯಲ್
Feb 01, 2019, 11:51 am IST
ಮುದ್ರಾ ಯೋಜನೆಯಡಿ 7.23 ಲಕ್ಷ ಕೋಟಿ ರೂ. ಸಾಲ ಸೌಲಭ್ಯ-ಪಿಯೂಶ್ ಗೋಯಲ್
Feb 01, 2019, 11:50 am IST
ರಕ್ಷಣಾ ಇಲಾಖೆಯ ಬಜೆಟ್ ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗಳನ್ನು ದಾಟಿದೆ-ಪಿಯೂಶ್ ಗೋಯಲ್
Feb 01, 2019, 11:48 am IST
ಉದ್ಯೋಗ ಕಲ್ಪಿಸುವ ಸಣ್ಣ ಉದ್ದಿಮೆಗಳಿಗೆ ಶೇ.2 ರಷ್ಟು ಬಡ್ಡಿ ದರದಲ್ಲಿ ಸಾಲ-ಪಿಯೂಶ್ ಗೋಯಲ್
Feb 01, 2019, 11:48 am IST
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಉದ್ದಿಮೆಗಳ ಆರಂಭಕ್ಕೆ ಸುಲಭ ಸಾಲ-ಪಿಯೂಶ್ ಗೋಯಲ್
Feb 01, 2019, 11:46 am IST
ಆರ್ಟಿಫಿಶಲ್ ಇಂಟಲಿಜೆನ್ಸ್ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಲು ಒಂಬತ್ತು ಆದ್ಯ ರಂಗಗಳನ್ನು ಗುರುತಿಸಲಾಗಿದೆ- ಪಿಯೂಶ್ ಗೋಯಲ್
Feb 01, 2019, 11:44 am IST
ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯಡಿ 1 ಕೋಟಿ ಯುವಕರಿಗೆ ತರಬೇತಿ- -ಪಿಯೂಶ್ ಗೋಯಲ್
Feb 01, 2019, 11:43 am IST
ಪ್ರಧಾನಮಂತ್ರಿ ಮುದ್ರಾ ಯೋಜನದಿಂದ ಸಾಕಷ್ಟು ಮಹಿಳೆಯರು ಸಬಲೀಕರಣದತ್ತ ಹೆಜ್ಜೆಹಾಕಿದ್ದಾರೆ- -ಪಿಯೂಶ್ ಗೋಯಲ್
Feb 01, 2019, 11:42 am IST
ಪಿಂಚಣಿ ಮಿತಿಯನ್ನು 10 ಲಕ್ಷ ರೂ.ನಿಂದ 30 ಲಕ್ಷ ರೂ. ವರೆಗೆ ಏರಿಕೆ--ಪಿಯೂಶ್ ಗೋಯಲ್
Feb 01, 2019, 11:40 am IST
ಅಸಂಘಟಿತ ಕಾರ್ಮಿಕರಿಗೆ ನೆರವು. ಬೀದಿಬದಿ ವ್ಯಾಪಾರಿಗಳು, ರಿಕ್ಷಾವಾಲಾ ಮುಂತಾದ ಅಸಂಘಟಿತ ವಲಯಗಳಿಗೆ ಅರವತ್ತು ವರ್ಷಗಳ ನಂತರ 3 ಸಾವಿರ ರೂ.ಗಳ ಪೆನ್ಷನ್ ನೀಡುವ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಂಧನ ಯೋಜನೆ ಜಾರಿ-ಪಿಯೂಶ್ ಗೋಯಲ್
Feb 01, 2019, 11:39 am IST
7 ನೇ ವೇತನ ಆಯೋಗ ಶೀಫಾರಸ್ಸು ಶೀಘ್ರವೇ ಜಾರಿ-ಪಿಯೂಶ್ ಗೋಯಲ್
Feb 01, 2019, 11:36 am IST
ಕಾರ್ಮಿಕರ ಬೋನಸ್ 7 ಸಾವಿರಕ್ಕೆ ಏರಿಕೆ -ಪಿಯೂಶ್ ಗೋಯಲ್
Feb 01, 2019, 11:36 am IST
ಹೊಸ ಪೆನ್ಷನ್ ಸ್ಕೀಂ ನಿಯಮ ಸಡಲಿಕೆ-ಪಿಯೂಶ್ ಗೋಯಲ್
Feb 01, 2019, 11:30 am IST
2014-18 ರವರೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 1.53 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ-ಪಿಯೂಶ್ ಗೋಯಲ್
Feb 01, 2019, 11:29 am IST
ಎರಡು ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಖಾತೆಗೆ ನೇರವಾಗಿ ಆರು ಸಾವಿರ ರೂ. ಮಂಜೂರು ಮಾಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿ. ಈ ಹಣ ಮೂರು ಕಂತಿನಲ್ಲಿ ರೈತರ ಖಾತೆಗೆ ಜಮಾ ಆಗಲಿದೆ.ಇದನ್ನು ಬೆಳೆ ಕೊಯಲಿಗೂ ಮುನ್ನ ನೀಡುವುದರಿಂದ ರೈತರಿಗೆ ಉಪಯೋಗವಾಗಲಿದೆ-ಪಿಯೂಶ್ ಗೋಯಲ್
Feb 01, 2019, 11:27 am IST
ರೈತರ ಕಲ್ಯಾಣಕ್ಕಾಗಿ ಅವರ ಆದಾಯವನ್ನು ದ್ವಿಗುಣಗೊಳಿಸಿ ಮತ್ತು 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ- ಪಿಯೂಶ್ ಗೋಯಲ್
Feb 01, 2019, 11:24 am IST
2014-18 ರವರೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 1.53 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ-ಪಿಯೂಶ್ ಗೋಯಲ್
Feb 01, 2019, 11:23 am IST
ಹರ್ಯಾಣದಲ್ಲಿ 22 ನೇ ಏಮ್ಸ್ ಆಸ್ಪತ್ರೆ ನಿರ್ಮಾಣ: ಪಿಯೂಶ್ ಗೋಯಲ್
Feb 01, 2019, 11:21 am IST
ವಿಶ್ವದ ಅತೀ ದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಆಯುಷ್ಮಾನ್ ಭಾರತ ಹೆಸರಿನಲ್ಲಿ ಜಾರಿಗೊಳಿಸಿದ್ದೇವೆ. ಇದರಿಂದ ಹತ್ತು ಲಕ್ಷಕ್ಕೂ ಹೆಚ್ಚು ಬಡವರಿಗೆ ಉಪಯೋಗವಾಗುತ್ತಿದೆ- ಪಿಯೂಶ್ ಗೋಯಲ್
Feb 01, 2019, 11:20 am IST
"1,70,000 ಕೋಟಿ ರೂಗಳನ್ನು ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಲು ಬಳಸಲಾಗಿದೆ." -ಪಿಯೂಶ್ ಗೋಯಲ್
Feb 01, 2019, 11:18 am IST
ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡುವ ಮೂಲಕ ಅವರ ಸುಧಾರಣೆಗೆ ಮುಮದಾಗಿದ್ದೇವೆ- ಪಿಯೂಶ್ ಗೋಯಲ್
Feb 01, 2019, 11:16 am IST
ಸ್ವಚ್ಛಭಾರತ ಯೋಜೆ ಅಡಿಯಲ್ಲಿ 5.45 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಬಯಲು ಬಲ ವಿಸರ್ಜನೆ ಮುಕ್ತ ಹಳ್ಳಿಗಳನ್ನಾಗಿ ಘೋಷಿಸಲಾಗಿದೆ.
Feb 01, 2019, 11:15 am IST
ಬ್ಯಾಂಕಿಂಗ್ ವಲಯಗಳ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದೇವೆ- ಪಿಯೂಶ್ ಗೋಯಲ್
Feb 01, 2019, 11:14 am IST
ಸಣ್ಣ ಉದ್ಯಮಗಳಿಗೆ ನೆರವು ನೀಡಿ ಉದ್ಯೋಗಾವಕಾಶ ಹೆಚ್ಚಿಸಿದ್ದೇವೆ: ಪಿಯೂಶ್ ಗೋಯಲ್
Feb 01, 2019, 11:13 am IST
ಹಣಕಾಸಿನ ಕೊರತೆಯನ್ನು 3.4% ರಷ್ಟು ನಿಯಂತ್ರಣಕ್ಕೆ ಬಂದಿದೆ- ಪಿಯೂಶ್ ಗೋಯಲ್
Feb 01, 2019, 11:10 am IST
ಡಿಸೆಂಬರ್ 2018 ರಲ್ಲಿ ಹಣದುಬ್ಬರದ ದರ 2.1%- ಪಿಯೂಶ್ ಗೋಯಲ್
Feb 01, 2019, 11:09 am IST
ಹಣದುಬ್ಬರನ್ನು ಎರಡಂಕಿಯೊಳಗೆ ನಿಯಂತ್ರಿಸಲು ಯಶಸ್ವಿಯಾಗಿದ್ದೇವೆ- ಪಿಯೂಶ್ ಗೋಯಲ್
Feb 01, 2019, 11:08 am IST
ನಾವು ಕಳೆದ ಹತ್ತು ವರ್ಷಗಳಿಂದ ಯಾವ ಸರ್ಕಾರಕ್ಕೂ ಸಾಧ್ಯವಾಗದ ಮಟ್ಟಿಗೆ ಹಣದುಬ್ಬರನ್ನು ನಿಯಂತ್ರಿಸಿದ್ದೇವೆ.- ಪಿಯೂಶ್ ಗೋಯಲ್
Feb 01, 2019, 11:07 am IST
ನಾವು ಶೀಘ್ರವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ಆರ್ಥಿಕತೆಗಳಲ್ಲಿ ವಿಶ್ವದ ಆರನೇ ಸ್ಥಾನದಲ್ಲಿದ್ದೇವೆ-ಪಿಯೂಶ್ ಗೋಯಲ್
Feb 01, 2019, 11:04 am IST
ಅರುಣ್ ಜೇಟ್ಲಿ ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಬಜೆಟ್ ಮಂಡನೆಗೂ ಮುನ್ನ ಹಾರೈಸಿದ ಪಿಯೂಶ್ ಗೋಯಲ್
Feb 01, 2019, 11:02 am IST
ಕೇಂದ್ರ ಸಚಿವ ಸಂಪುಟದಿಂದ ಮಧ್ಯಂತರ ಬಜೆಟ್ ಗೆ ಅನುಮೋದನೆ
Feb 01, 2019, 10:39 am IST
ಬಜೆಟ್ ನಲ್ಲಿ ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕಪ್ಪು ಬಟ್ಟೆ ಧರಿಸಿ, ಸಂಸತ್ ಎದುರು ಪ್ರತಿಭಟನೆ ನಡೆಸುತ್ತಿರುವ ಟಿಡಿಪಿ ಸಂಸದರು.
Feb 01, 2019, 10:38 am IST
ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆಯಲಿರುವ ಪಿಯೂಶ್ ಗೋಯಲ್
Feb 01, 2019, 10:37 am IST
ಬಜೆಟ್ ಹಿನ್ನೆಲೆಯಲ್ಲಿ ಡಾಲರ್ ಎದುರು 9 ಪೈಸೆ ಕುಸಿತ ಕಂಡ ರೂಪಾಯಿ. ಪ್ರತಿ ಡಾಲರ್ ಗೆ 71.17 ರೂ.
Feb 01, 2019, 10:33 am IST
"ಇಂದಿನ ಬಜೆಟಿನಲ್ಲಿ ಕೇಂದ್ರ ಸರ್ಕಾರ ಜನಪ್ರಿಯ ಯೋಜನೆಗಳನ್ನು ಘೋಷಿಸಿ, ಜನರನ್ನು ಓಲೈಸುವ ಪ್ರಯತ್ನ ಮಾಡಲಿದೆ. ಲೋಸಕಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸ ಮಾಡಲಿರುವ ಸರ್ಕಾರ ಇದುವರೆಗೂ ನೀಡಿದ ಯಾವ ಬಜೆಟ್ ನಿಂದ ಜನಸಾಮಾನ್ಯನಿಗೆ ಉಪಯೋಗವಾಗಿದೆ? ಇಂದು ಕೇವಲ 'ಜುಮ್ಲಾ' ಮಾತ್ರ ಹೊರಬರಲಿದೆ. ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗ ಅವರು ಯೋಜನೆಗಳನ್ನು ಘೋಷಿಸಿದರೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವೇ?" ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ
Feb 01, 2019, 10:29 am IST
ಬಜೆಟ್ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ಆಗಮಿಸಿದ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್
Feb 01, 2019, 10:28 am IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ
Feb 01, 2019, 10:26 am IST
"ನಾವು ಕಳೆದ ಎಲ್ಲಾ ಬಜೆಟ್ ನಲ್ಲೂ ರೈತರಿಗೆ ಭರಪೂರ ಕೊಡುಗೆ ನೀಡಿದ್ದೇವೆ. ಈ ಬಾರಿಯ ಬಜೆಟ್ ಸಹ ರೈತರಿಗೆ ಲಾಭದಾಯಕವಾಗಲಿದೆ"- ರಾಧಾ ಮೋಹನ್ ಸಿಂಗ್, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ
Feb 01, 2019, 10:19 am IST
ಬಜೆಟ್ ಹಿನ್ನೆಲೆಯಲ್ಲಿ ಮೇಲಕ್ಕೆ ಜಿಗಿದ ಸೆನ್ಸೆಕ್ಸ್. 151.44 ಅಂಕ ಏರಿಕೆ ಕಂಡು, ಸೆನ್ಸೆಕ್ಸ್ 36,408.13 ತಲುಪಿದೆ.
Feb 01, 2019, 10:16 am IST
ಕೇಂದ್ರ ಬಜೆಟ್ ಸೋರಿಕೆಯಾಗಿದೆ. ಬೇಕೆಂದೇ ಕೇಂದ್ರ ಸರ್ಕಾರ ಬಜೆಟ್ ಅನ್ನು ಸೋರಿಕೆ ಮಾಡಿದೆ- ಸಂಸತ್ ಎದುರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
Feb 01, 2019, 10:13 am IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸಂಪುಟ ಸಭೆ
Feb 01, 2019, 10:12 am IST
"ಸರ್ಕಾರ ರೈಲ್ವೇ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ನೀಡುವ ಬಗ್ಗೆ ಈ ಬಜೆಟ್ ನಲ್ಲಿ ಚಿಂತಿಸುವ ನಿರೀಕ್ಷೆಯಿದೆ."- ಮನೋಜ್ ಸಿನ್ಹಾ, ರೈಲ್ವೇ ಇಲಾಖೆ ರಾಜ್ಯ ಸಚಿವ
Feb 01, 2019, 9:59 am IST
ಸಂಸತ್ತಿನಲ್ಲಿ ಕೆಲವೇ ಕ್ಷಣಗಳಲ್ಲಿ ಸಚಿವ ಸಂಪುಟ ಸಭೆ ಆರಂಭ
Feb 01, 2019, 9:58 am IST
ಬಜೆಟ್ ಬ್ರೀಫ್ ಕೇಸ್ ಜೊತೆ ಸಂಸತ್ತಿಗೆ ಆಗಮಿಸಿದ ಪಿಯೂಶ್ ಗೋಯಲ್
Feb 01, 2019, 9:54 am IST
ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ, ಬಜೆಟ್ ಮಾಹಿತಿ ನೀಡಿದ ಪಿಯೂಶ್ ಗೋಯಲ್
Feb 01, 2019, 9:38 am IST
ಮೋದಿ ಸರ್ಕಾರ ಜನಪ್ರಿಯ ಸರ್ಕಾರ. ನಾವು ಎಲ್ಲ ರಂಗಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಜನರಿಗೆ ಯಾವುದು ಸಾಧ್ಯವೋ ಅದನ್ನು ನಾವು ಮಾಡುತ್ತೇವೆ. ನಾವು ಎಂದಿಗೂ ಉತ್ತಮ ಬಜೆಟ್ ಅನ್ನೇ ನೀಡುತ್ತೇವೆ- ಶಿವ ಪ್ರಕಾಶ್ ಶುಕ್ಲಾ, ಹಣಕಾಸು ಇಲಾಖೆ ರಾಜ್ಯ ಸಚಿವ
Feb 01, 2019, 9:35 am IST
"ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬುದು ನಮ್ಮ ಮಂತ್ರ. ಇಂದಿನ ಬಜೆಟ್ ನಲ್ಲೂ ಅದೇ ಪ್ರತಿಬಿಂಬಿಸಲಿದೆ"- ನರೇಂದ್ರ ಸಿಂಗ್ ಥೋಮರ್, ಸಂಸದೀಯ ವ್ಯವಹಾರಗಳ ಸಚಿವ
Feb 01, 2019, 9:17 am IST
ಪಿಯೂಶ್ ಗೋಯಲ್ ಅವರೊಂದಿಗೆ ರಾಷ್ಟ್ರಪತಿ ಭೇಟಿಗೆ ತೆರಳಿದ ಹಣಕಾಸು ಇಲಾಖೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ.
Feb 01, 2019, 9:15 am IST
ಮಧ್ಯಂತರ ಬಜೆಟ್ ಕುರಿತು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಲು ತೆರಳಿದ ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್
Feb 01, 2019, 9:07 am IST
ಸಂಸತ್ತಿನ ಎದುರು ಕಂಡುಬಂದ ಬಜೆಟ್ ಪ್ರತಿಗಳ ಚೀಲಗಳು
Feb 01, 2019, 8:53 am IST
ಬಜೆಟ್ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ
Feb 01, 2019, 8:51 am IST
ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್. ಬಜೆಟ್ ಮಂಡನೆಗೆ ತಯಾರಿ
Feb 01, 2019, 7:59 am IST
ಆದಾಯ ತೆರಿಗೆ ಮಿತಿಯನ್ನು ಕೇಂದ್ರ ಸರ್ಕಾರ 2.5 ರಿಂದ 5 ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ.
Feb 01, 2019, 7:59 am IST
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಜೆಟ್ ಮುನ್ನಾದಿನದ ತಮ್ಮ ಭಾಷಣದಲ್ಲಿ ರೈತರು, ಬಡವರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಗಮನ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Feb 01, 2019, 7:59 am IST
ಶುಕ್ರವಾರದ ಬಜೆಟ್ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದ ನಂತರ ಎಸ್&ಪಿ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ 601.21 ಅಂಕಗಳ ಹೆಚ್ಚಳದೊಂದಿಗೆ 36,192.46ಕ್ಕೆ ತಲುಪಿತು. ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ನಿಫ್ಟಿ 161.75 ಅಂಕಗಳ ಏರಿಕೆಯೊಂದಿಗೆ 10,813.55ಕ್ಕೆ ಮುಟ್ಟಿತ್ತು.
Feb 01, 2019, 7:58 am IST
ಬಜೆಟ್ ಮಂಡನೆಯಾದ ನಂತರ ಗೃಹೋಪಯೋಗಿ ಸರಕುಗಳಾದ ಟಿವಿ, ಎಸಿ, ವಾಷಿಂಗ್ ಮಷಿನ್, ರೆಫ್ರಿಜಿರೇಟರ್ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
Feb 01, 2019, 7:40 am IST
ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಬಜೆಟ್
Share This Article
English summary
Interim Union Budget 2019 LIVE coverage
Interim Union Budget 2019 LIVE coverage in Kannada. The budget will be presented by union minister for Railways Piyush Goyal in the absence of finance minister Arun Jaitley. Farmers, rural people, small businessmen, tax payers expecting goodies in the last budget before Lok Sabha Elections 2019.
Story first published: Saturday, February 2, 2019, 7:17 [IST]