ಈಗಿನ ದಿನಗಳಲ್ಲಿಎಲ್ಲವೂ ವ್ಯಾವಹಾರಿಕ ದೃಷ್ಟಿಯಿಂದ ನಡೆಯುತ್ತಿದ್ದು, ಪ್ರತಿಯೊಂದು ಚಟುವಟಿಕೆಯು ನಗದಿನ ರೂಪದಲ್ಲಿ ಪ್ರತಿಫಲವನ್ನು ಅಪೇಕ್ಷಿಸುತ್ತಿರುವಾಗ, ಷೇರುಗಳಲ್ಲಿ ಹಣದ ಹೂಡಿಕೆಗೆ ಯಾವ ರೀತಿ ಲಾಭವನ್ನಪೇಕ್ಷಿಸಬಹುದು.
ಕಂಪನಿಗಳು ಗಳಿಸಿದ ಲಾಭದಲ್ಲಿ ಸವಕಳಿ, ತೆರಿಗೆ ಮುಂತಾದವುಗಳನ್ನು ತೆಗೆದಿರಿಸಿದ ನಂತರ ಉಳಿದ ಹಣದಲ್ಲಿ ತನ್ನ ಷೇರುದಾರರಿಗೆ ಅವರು ಹೊಂದಿರುವ ಷೇರುಗಳಿಗೆ ಅನುಗುಣವಾಗಿ ಹಂಚುವುದೇ ಲಾಭಾಂಶ(ಡಿವಿಡೆಂಡ್)ವಾಗಿದೆ.
ಈಗ ಕಂಪನಿಗಳು ಲಾಭಗಳಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಹಣವನ್ನು ಆಡಳಿತ ಮಂಡಳಿ ಇಚ್ಛಿಸಿದರೆ ಹೆಚ್ಚಿನ ಲಾಭಾಂಶವನ್ನು ವಿತರಿಸಬಹುದು. ಹೆಚ್ಚಿನ ಹಣವನ್ನು ಕಂಪನಿಯ ಆಂತರಿಕ ಮೂಲಗಳಿಂದ ಒದಗಿಸಬಹುದು.
ಲಾಭಾಂಶ ವಿತರಿಸಲು ಇತಿಮಿತಿಗಳಿಲ್ಲ. ಕೆಲವು ಕಂಪನಿಗಳು ಒಂದೇ ಬಾರಿ ಲಾಭಾಂಶ ವಿತರಿಸಿದರೆ ಮತ್ತೆ ಕೆಲವು ಕಂತುಗಳಲ್ಲಿ ವಿತರಿಸುತ್ತವೆ. ಇದನ್ನು ಮಧ್ಯಂತರ ಲಾಭಾಂಶವೆನ್ನುವರು. ಲಾಭಾಂಶ ವಿತರಣೆಯಲ್ಲಿ ಯಾವುದೇ ತೆರಿಗೆಯನ್ನು ಮುರಿಯುವುದಿಲ್ಲ. ಅದು ತೆರಿಗೆ ಮುಕ್ತವಾಗಿರುತ್ತದೆ. ಕಾರಣ ಲಾಭಾಂಶ ಘೋಷಿಸಿದ ಕಂಪನಿಗಳು ಮೊದಲೇ ಲಾಭಾಂಶ ವಿತರಣಾ ತೆರಿಗೆಯನ್ನು ಪಾವತಿಸಿರುತ್ತವೆ. ಘೋಷಿಸಿದ ಲಾಭಾಂಶ, ಕಂಪನಿಯು ಬದಲಾಯಿಸದಿದ್ದರೆ ಅಥವಾ ಹಿಂಪಡೆಯದಿದ್ದರೆ ಪೂರ್ಣವಾಗಿ ದೊರೆಯುತ್ತದೆ.

ಕಂಪನಿಗಳು ಕೆಲವು ವಿಶೇಷ ಸಂದರ್ಭಗಳು ಅಂದರೆ, ರಜತಮಹೋತ್ಸವ, ಸುವರ್ಣಮಹೋತ್ಸವದಂತಹ ಸಂದರ್ಭಗಳಲ್ಲಿ ವಿಶೇಷ ಲಾಭಾಂಶ ಪ್ರಕಟಿಸಬಹುದು. ಕೆಲವೊಮ್ಮೆ ಕಂಪನಿಗಳು ತಮ್ಮ ಸ್ವತ್ತು, ಬ್ರಾಂಡ್, ಅಂಗಸಂಸ್ಥೆ ಇತ್ಯಾದಿಗಳ ಮಾರಾಟದಿಂದ ಬಂದಂತಹ ಹಣವನ್ನು ಒಂದು ಬಾರಿ ವಿಶೇಷ ಲಾಭಾಂಶ ನೀಡುವುದುಂಟು.
ಸ್ಟ್ರೈಡ್ಸ್ ಶಾಸೂನ್ ಕಂಪನಿಯು 2013ರ ಅಂತ್ಯದಲ್ಲಿ ತನ್ನ ವಿಭಾಗವನ್ನು ಮಾರಾಟ ಮಾಡಿ ಬಂದಂತಹ ಹಣದಿಂದ ಪ್ರತಿಷೇರಿಗೆ ರೂ.500ರಂತೆ ಲಾಭಾಂಶ ವಿತರಿಸಿದ್ದು ಉತ್ತಮ ನಿದರ್ಶನವಾಗಿದೆ.
ಶೇಕಡಾವಾರು ಲಾಭಾಂಶವನ್ನು ಒಂದು ಷೇರಿಗೆ ಎಷ್ಟಾಗಬಹುದು ಎಂದು ಲೆಕ್ಕ ಹಾಕಲು ಷೇರಿನ ಮುಖಬೆಲೆಯೇ ಆಧಾರವಾಗುವುದು. ಅಂದರೆ ಲಾಭಾಂಶವು ಷೇರಿನ ಮುಖಬೆಲೆಯ ಮೇಲೆ ನೀಡಲಾಗುವುದು. ಉದಾಹರಣೆಗೆ : ಕಂಪನಿಯುಶೇ.100% ಲಾಭಾಂಶ ಘೋಷಿಸಿದೆ ಎಂದರೆ, ರೂ.10ರ ಮುಖಬೆಲೆಯ ಷೇರಿಗೆ ಅದು ರೂ.10, ರೂ.2ರ ಮುಖಬೆಲೆಯ ಷೇರಿಗೆ ಅದು ರೂ.2 ಎಂದರ್ಥ.
ಬ್ಯಾಂಕ್ ಗಳು ತಮ್ಮ ಎಲ್ಲಾ ಶಾಖೆಗಳನ್ನು ತಂತ್ರಜ್ಞಾನದ ಮೂಲಕ ಜೋಡಿಸಿಕೊಂಡಿರುವ ವ್ಯವಸ್ಥೆಯಿರುವುದರಿಂದ ಗ್ರಾಹಕರು ತಮ್ಮ ಡಿಮ್ಯಾಟ್ ಖಾತೆಯಲ್ಲಿನ ಬ್ಯಾಂಕ್ ಖಾತೆಯ ಐಎಫ್ಎಸ್ಸಿಕೋಡ್ ನ್ನು ನೊಂದಾಯಿಸದ್ದಲ್ಲಿ ಕಂಪನಿಗಳು ವಿತರಿಸುವ ಲಾಭಾಂಶವು ನೇರವಾಗಿ ಗ್ರಾಹಕರ ಖಾತೆಗೆ ಜಮೆಯಾಗುವುದು.
ಕಂಪನಿಗಳು ಪ್ರಕಟಿಸಿದ ಲಾಭಾಂಶಗಳು ನೀಡಲೇಬೇಕೆಂದಿಲ್ಲ. ವೈವಿಧ್ಯಮಯ ಕಾರಣಗಳಿಂದ ಅವನ್ನು ಹಿಂಪಡೆಯಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇಂಡಿಯನ್ ಬ್ಯಾಂಕ್ ಹಿಂದಿನ ವರ್ಷ ಲಾಭಾಂಶ ಪ್ರಕಟಿಸಿ ನಂತರ ರದ್ದುಗೊಳಿಸಿದೆ.
ಹೂಡಿಕೆದಾರರು ಪ್ರತಿ ಷೇರಿಗೆ ದೊರೆಯುವ ಲಾಭಾಂಶದ ಜೊತೆಗೆ ನಿಗದಿತ ದಿನಾಂಕ ಮತ್ತು ಲಾಭಾಂಶರಹಿತ ವಹಿವಾಟಿನ ದಿನದ ಬಗ್ಗೆ ಅರಿತು ಚಟುವಟಿಕೆ ನಡೆಸಿದಲ್ಲಿ ಚಟುವಟಿಕೆ ಸರಾಗವಾಗುತ್ತದೆ. ಲಾಭಾಂಶ ವಿತರಣೆಯ ನಂತರ ಷೇರುಗಳ ಬೆಲೆಗಳು ಅದೇ ಪ್ರಮಾಣದಲ್ಲಿ ಅಥವಾ ಅತಿ ಹೆಚ್ಚಿನ ಪ್ರಮಾಣದಲ್ಲಿ ಇಳಿಯಬಹುದು. ಇದು ಪೇಟೆಯ ಸ್ಥಿತಿಗತಿಗಳನ್ನು ಆಧರಿಸಿರುವುದಲ್ಲದೆ ಕಂಪನಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
ಮಾರ್ಚ್ ಅಂತ್ಯದ ವಾರ್ಷಿಕ ಸಾಧನೆಗಳನ್ನು ಅನೇಕ ಕಂಪನಿಗಳು ಪ್ರಕಟಿಸಿದ್ದು ತಮ್ಮ ಫಲಿತಾಂಶದೊಂದಿಗೆ ಆಕರ್ಷಕ ಲಾಭಾಂಶವನ್ನು ಪ್ರಕಟಿಸಿರುವ ಕೆಲವು ಕಂಪನಿಗಳ ಪಟ್ಟಿ ಈ ರೀತಿ ಇದೆ. ಲಾಭಾಂಶ ಪಡೆಯುವ ಉದ್ದೇಶದಿಂದ ಷೇರುಗಳನ್ನು ಖರೀದಿಸುವುದಕ್ಕಿಂತ ಮುಂಚೆ ಅರ್ಹತೆಯ ಬಗ್ಗೆ ಖಾತ್ರಿಪಡಿಸಿಕೊಂಡು ನಿರ್ಧರಿಸಿರಿ.
| ಕಂಪನಿ ಹೆಸರು | ಪ್ರತಿ ಷೇರಿಗೆ ರೂ. | ನಿಗದಿತ ದಿನ |
| ಹೆಚ್ ಸಿ ಎಲ್ ಟೆಕ್ | 2.00 | 17/05/19 |
| ಸುಂದರಂ ಫಾಸ್ಟ್ ನರ್ಸ್ | 3.10 | 17/05/19 |
| ಅಪ್ಕೋ ಟೆಕ್ಸ್ ಇಂಡಸ್ಟ್ರೀಸ್ | 7.50 | 25/05/19 |
| ಏಷಿಯನ್ ಪೇಂಟ್ಸ್ | 7.65 | 15/06/19 |
| ಶ್ರೀರಾಮ್ ಟ್ರಾನ್ಸ್ ಪೋರ್ಟ್ | 7.00 | 21/06/19 |
| ಹಿಂದುಸ್ತಾನ್ ಲಿವರ್ | 13.00 | 22/06/19 |
| ಸುಪ್ರೀಂ ಇಂಡಸ್ಟ್ರೀಸ್ | 9.00 | 04/07/19 |
| ಬಿ ಎ ಎಸ್ ಎಫ್ | 5.00 | 06 /07/19 |
| ಹೆಚ್ ಡಿ ಎಫ್ ಸಿ ಎ ಎಂ ಸಿ | 12.00 | 06/07/19 |
| ಟಾಟಾ ಸ್ಪಾಂಜ್ | 12.50 | 08/07/19 |
| ಟಾಟಾ ಸ್ಟಿಲ್ | 13.00 | 06/07/19 |
| ಗೃಹ ಫೈನಾನ್ಸ್ | 2.00 | 11/07/19 |
| ಮಾಸ್ಟೆಕ್ | 5.00 | 15/07/19 |
| ಸ್ವರಾಜ್ ಇಂಜಿನ್ಸ್ | 50.00 | 13/07/19 |
| ವೆಂಟ್ | 15.00 | 15/07/19 |
| ಜ್ಯೋತಿ ಲ್ಯಾಬ್ | 3.00 | 16/07/19 |
| ಎಂ ಅಂಡ್ ಎಂ ಫೈನಾನ್ಸ್ | 6.50 | 17/07/19 |
| ಫಿಕ್ಸ್ ಟ್ರಾನ್ಸ್ಮಿಷನ್ | 2.75 | 17/07/19 |
| ಹೀರೊ ಮೋಟೊಕಾರ್ಪ್ | 32.00 | 18/07/19 |
| ಮಹಿಂದ್ರಾ ಲೈಫ್ | 6.00 | 20.07/19 |
| ಪಿರಾಮೆಲ್ ಇಂಟರ್ ಪ್ರೈಸಸ್ | 28.00 | 20/07/19 |
| ಸೋಲಾರ್ ಇಂಡಸ್ಟ್ರೀಸ್ | 7.00 | 20.07/19 |
| ಸೆಂಚುರಿ ಟೆಕ್ಸ್ಟ್ ಟೈಲ್ಸ್ | 7.50 | 23/07/19 |
| ಗಾಡ್ರೇಜ್ ಆಗ್ರೋ | 4.50 | 27/07/19 |
| ಬ್ರಿಟಾನಿಯ | 15.00 | 03/08/19 |
| ಎಂ ಆರ್ ಎಫ್ | 54.00 | 03/08/19 |
| ಕಾನ್ಸ್ ಸೈ ನೆರೊಲ್ಯಾಕ್ | 2.60 | 15/07/19 |
| ವೋಲ್ಟಾಸ್ | 4.00 | 19/07/19 |
| ಟಾಟಾ ಎಲಾಕ್ಸಿ | 13.50 | - |
| ಟಾಟಾ ಇನ್ವೆಸ್ಟ್ ಮೆಂಟ್ ಕಾರ್ಪ್ | 20.00 | - |
| ಸ್ಟ್ರೈಡ್ಸ್ ಫಾರ್ಮ | 3.00 | - |
| ಇನ್ಫೋಸಿಸ್ | 10.50 | 15/06/19 |
| ವಿಶಾಖ ಇಂಡಸ್ಟ್ರೀಸ್ | 7.00 | 22/06/19 |
| ಟಾಟಾ ಕೆಮಿಕಲ್ಸ್ | 12.50 | 02/07/19 |
ಕಂಪನಿಗಳು ಪ್ರಕಟಿಸಿದ ಲಾಭಾಂಶವನ್ನ ಬದಲಾಯಿಸಬಹುದು, ರದ್ದುಗೊಳಿಸಲೂಬಹುದು. ದೃಢೀಕರಿಸಿಕೊಂಡು ಖರೀದಿಸಿರಿ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications