ಬಿಎಸ್ಎನ್ಎಲ್ ನೌಕರರಿಗೆ ಗುಡ್ ನ್ಯೂಸ್!ಅಂತೂ ಇಂತೂ ಸಂಬಳ ಬಂತು!
ಬಿಎಸ್ಎನ್ಎಲ್ ನೌಕರರ ಜುಲೈ ತಿಂಗಳ ವೇತನ ಪಾವತಿಯಾಗಿದೆ. ಆಂತರಿಕ ಸಂಚಯದಿಂದ ವೇತನ ಪಾವತಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.
ಬಿಎಸ್ಎನ್ಎಲ್ ನೌಕರರ ಜುಲೈ ತಿಂಗಳ ವೇತನ ಪಾವತಿಯಾಗಿದೆ. ಆಂತರಿಕ ಸಂಚಯದಿಂದ ವೇತನ ಪಾವತಿಗೆ ಧನಸಹಾಯ ನೀಡಲಾಗುತ್ತಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.

ನೌಕರರ ಸಂಘವು ಕಳೆದ ವಾರ, ಜುಲೈಗೆ ನೌಕರರ ವೇತನವನ್ನು ನಿಗದಿತ ದಿನಾಂಕದಂದು ಪಾವತಿಸಲಾಗಿಲ್ಲ ಮತ್ತು ವೇತನ ಪಾವತಿ ಯಾವಾಗ ಮಾಡಲಾಗುವುದು ಎಂಬುದರ ಬಗ್ಗೆ ಮ್ಯಾನೆಜ್ಮೆಂಟ್ ತಿಳಿಸಿಲ್ಲ ಎಂದು ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಿ ಕೆ ಪುರ್ವಾರ್ ಅವರು, ಆಗಸ್ಟ್ 5 ರಂದು ವೇತನವನ್ನು ಪಾವತಿಸಲಾಗುವುದು ಎಂದು ಹೇಳಿದ್ದರು.
ಈಗಾಗಲೇ ಬಿಎಸ್ಎನ್ಎಲ್ ನೌಕರರ ವೇತನವನ್ನು ಬಿಡುಗಡೆ ಮಾಡಿದ್ದು, ಹಣವನ್ನು ಬ್ಯಾಂಕುಗಳಿಗೆ ವರ್ಗಾಯಿಸಲಾಗಿದೆ ಎಂದು ಪುರ್ವಾರ್ ಸೋಮವಾರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಬಿಎಸ್ಎನ್ಎಲ್ ಜುಲೈ ತಿಂಗಳ ಸಂಬಳವನ್ನು ಪಾವತಿ ಮಾಡದಿರುವುದಕ್ಕೆ ಕಂಪನಿಯು ನಷ್ಟದಲ್ಲಿರುವುದು ಕಾರಣವಾಗಿತ್ತು.
ಕಳೆದ ಆರು ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದೆ. ತಿಂಗಳ ಕೊನೆ ಕೆಲಸದ ದಿನ ನೌಕರರಿಗೆ ಸಂಬಳ ಸಿಗುತ್ತಿತ್ತು. ಆದರೆ ಈ ಬಾರಿ ಜುಲೈ ಮುಗಿದು ಆಗಸ್ಟ್ ಆರಂಭವಾದರೂ ಸಂಬಳ ಸಿಕ್ಕಿರಲಿಲ್ಲ. ಬಿಎಸ್ಎನ್ಎಲ್ ಸಂಬಳ ಪಾವತಿಗಾಗಿ ಒಟ್ಟು ರೂ. 850 ಕೋಟಿ ಖರ್ಚು ಮಾಡುತ್ತದೆ.
ಬಿಎಸ್ಎನ್ಎಲ್ನ ನಷ್ಟವು ಸುಮಾರು ರೂ. 14,000 ಕೋಟಿ ಎಂದು ಅಂದಾಜಿಸಲಾಗಿದ್ದು, 2018-19ರ ಅವಧಿಯಲ್ಲಿ ಆದಾಯ ರೂ. 19,308 ಕೋಟಿಗೆ ಇಳಿದಿದೆ. ಸಾರ್ವಜನಿಕ ವಲಯದ ಸಂಸ್ಥೆಯ ತಾತ್ಕಾಲಿಕ ನಷ್ಟವು 2015-16ರಲ್ಲಿ ರೂ. 4,859 ಕೋಟಿ, 2016-17ರಲ್ಲಿ ರೂ. 4,793 ಕೋಟಿ, 2017-18ರಲ್ಲಿ ರೂ. 7,993 ಕೋಟಿಗಳಾಗಿತ್ತು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications