ಜಗತ್ತಿನಲ್ಲಿ ಹೆಚ್ಚು ಹಣ ಗಳಿಸುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೆ ಕ್ರಿಕೆಟ್ ಟೀಮ್ ಗಳ ಕೋಚ್ ಗಳಿಗೆ ಎಷ್ಟು ಸಂಭಾವನೆ ಇರುತ್ತದೆ?
ಜಗತ್ತಿನಲ್ಲಿ ಹೆಚ್ಚು ಹಣ ಗಳಿಸುವ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೆ ಕ್ರಿಕೆಟ್ ಟೀಮ್ ಗಳ ಕೋಚ್ ಗಳಿಗೆ ಎಷ್ಟು ಸಂಭಾವನೆ ಇರುತ್ತದೆ? ಟೀಮ್ ಇಂಡಿಯಾ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ವೇತನ ಎಷ್ಟು? ಇಂತಹ ಪ್ರಶ್ನೆಗಳು ಕ್ರೀಡಾ ಪ್ರೇಮಿಗಳಲ್ಲಿ ಉದ್ಭವವಾಗುವುದು ಸಹಜ.
ಭಾರತ ಕ್ರಿಕೆಟ್ ಟೀಂ ಕೋಚ್ ಆಗಿ ಪುನರ್ ಆಯ್ಕೆಗೊಂಡಿರುವ ರವಿ ಶಾಸ್ತ್ರಿಯವರ ಸಂಭಾವನೆ ಎಷ್ಟಿದೆ ನೋಡೋಣ ಬನ್ನಿ.
ರವಿ ಶಾಸ್ತ್ರಿ ಪುನರ್ ಆಯ್ಕೆ ಚರ್ಚೆ
ಟೀಂ ಇಂಡಿಯಾ ಕೋಚ್ ಆಗಿ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ ಅವರ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. 2ನೇ ಅವಧಿಗೆ ಟೀಂ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸಜ್ಜಾಗಿರುವ ಶಾಸ್ತ್ರಿಗೆ ಸೌತ್ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನಲ್ಲಿ ತಂಡವನ್ನು ಸಜ್ಜುಗೊಳಿಸಬೇಕಿದೆ. ರವಿಯವರ ಮೊದಲ ಅವಧಿಯ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ.
10 ಕೋಟಿವರೆಗೆ ವೇತನ
ಭಾರತ ತಂಡದ ನೂತನ ಕೋಚ್ ಆಗಿ ಪುನರ್ ಆಯ್ಕೆಗೊಂಡಿರುವ ರವಿ ಶಾಸ್ತ್ರಿ ಅವರ ಸಂಬಳವನ್ನು ಶೇಕಡಾ 20ರಷ್ಟು ಏರಿಕೆ ಮಾಡಲಾಗಿದೆ. ಈ ಹೆಚ್ಚಳದೊಂದಿಗೆ ರವಿ ಶಾಸ್ತ್ರಿ ವಾರ್ಷಿಕವಾಗಿ ಸುಮಾರು ರೂ. 10 ಕೋಟಿವರೆಗೆ ವೇತನ ಪಡೆಯಲಿದ್ದಾರೆ.
ಹಿಂದಿನ ಅವಧಿ ವೇತನ
ಹಿಂದಿನ ಅವಧಿಯಲ್ಲಿ ರವಿ ಶಾಸ್ತ್ರಿ ರೂ. 8 ಕೋಟಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದರು. ಇದೀಗ ಶೇಕಡಾ ೨೦ರಷ್ಟು ಹೆಚ್ಚಳದೊಂದಿಗೆ ಸರಿಸುಮಾರು ರೂ. 9.5 ಕೋಟಿಯಿಂದ 10 ಕೋಟಿ ಸಂಭಾವನೆ ಪಡೆಯಲಿದ್ದಾರೆ. ಸಪೋರ್ಟ್ ಸ್ಟಾಫ್ ವೇತನ ಕೂಡ ಹೆಚ್ಚಿಸಲಾಗಿದೆ.
ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಕೋಚ್ ವೇತನ
ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿರುವ ಭರತ್ ಅರುಣ್ ಸುಮಾರು ರೂ. 3.5 ಕೋಟಿ ವಾರ್ಷಿಕ ವೇತನ ಗಳಿಸಲಿದ್ದಾರೆ. ಜೊತೆಗೆ ಫೀಲ್ಡಿಂಗ್ ಕೋಚ್ ಆಗಿರುವ ಶ್ರೀಧರ್ ರೂ. 3.5 ಕೋಟಿ ವಾರ್ಷಿಕ ವೇತನ ಗಳಿಸಲಿದ್ದಾರೆ. ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಸುಮಾರು ರೂ. 2.5-3 ಕೋಟಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.
ರವಿ ಶಾಸ್ತ್ರಿ ವೇತನ ಅಂದು ಇಂದು?
ಕಪಿಲ್ ದೇವ್ ನಾಯಕತ್ದಲ್ಲಿ 1983ರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ರವಿ ಶಾಸ್ತ್ರಿ ಇದ್ದರು. ಆ ಸಂದರ್ಭದಲ್ಲಿ ರವಿಯವರು ಪ್ರತಿ ಪಂದ್ಯಕ್ಕೆ ಒಂದೂವರೆ ಸಾವಿರ ವೇತನ ಹಾಗು ಆರು ನೂರು ರೂಪಾಯಿ ಭತ್ಯೆ ಪಡೆದಿದ್ದರು. ಅಂದರೆ ಒಟ್ಟು ರೂ. 2,100 ವೇತನ ಗಳಿಸಿದ್ದರು. ಆದರೆ ಈಗ ರವಿ ಶಾಸ್ತ್ರಿಯವರು ಕೋಚ್ ಆಗಿ ಬರೋಬ್ಬರಿ ರೂ. 10 ಕೋಟಿ ವೇತನ ಪಡೆಯುತ್ತಿದ್ದಾರೆಂದರೆ ಆಶ್ಚರ್ಯವಾಗದೇ ಇರದು ಅಲ್ಲವೆ?
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications