ಕೋವಿಡ್ ಜಗತ್ತಿಗೆ ಅಪ್ಪಳಿಸಿದ ನಂತರ ಬಹಳಷ್ಟು ಬದಲಾವಣೆಗಳು ಆಗಿವೆ. ಅವುಗಳಲ್ಲಿ ಪ್ರಮುಖವಾಗಿ ಮೀಟಿಂಗ್ ನಿಂದ , ಶಿಕ್ಷಣ ಎಲ್ಲವೂ ಆನ್ಲೈನ್ ಆಗಿರುವುದು. ಇವತ್ತಿನ ವಿಶೇಷ ಸುದ್ದಿ ಏನು ಗೊತ್ತ ? ಹೆಚ್ಚು ಕಡಿಮೆ ಎರಡು ವರ್ಷದ ನಂತರ ಜಿಎಸ್ಟಿ ಕೌನ್ಸಿಲ್ ಸದಸ್ಯರು ಇಂದು ಮತ್ತೆ ಮುಖಾಮುಖಿ ಭೇಟಿಯಾಗಿ ಸಭೆಯನ್ನ ಸೇರಲಿದ್ದಾರೆ. ಇವತ್ತಿನ ಸಭೆಯಲ್ಲಿ ಪ್ರಮುಖವಾಗಿ ತೈಲವನ್ನ ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನ ಜಿಎಸ್ಟಿ ತೆರಿಗೆಯ ಅಡಿಯಲ್ಲಿ ತರುವುದರ ಬಗ್ಗೆ ಚರ್ಚೆಯಾಗಲಿದೆ.
ಹಲವಾರು ಸಮೀಕ್ಷೆಗಳು ಹೇಳುವ ಪ್ರಕಾರ 77 ಪ್ರತಿಶತ ಭಾರತೀಯರು ತೈಲವನ್ನ ಜಿಎಸ್ಟಿ ಅಡಿಯಲ್ಲಿ ತರುವುದು ಒಳ್ಳೆಯದು ಎಂದಿದ್ದಾರೆ. ತೈಲದ ಬೆಲೆ ಕಳೆದ ಒಂದು ವರ್ಷದಿಂದ ಏರುಗತಿಯಲ್ಲಿದೆ. ಜನ ಸಾಮಾನ್ಯ ತೈಲ ಬೆಲೆಯಿಂದ ಕೆಂಗೆಟ್ಟಿರುವುದು ಕೂಡ ಎಲ್ಲರಿಗೂ ತಿಳಿದ ವಿಷಯ. ತೈಲ ಬೆಲೆಯ ಹೆಚ್ಚಳದಿಂದ ಬೇರೆ ಎಲ್ಲಾ ಸೇವೆ ಮತ್ತು ಸರಕುಗಳ ಬೆಲೆ ಕೂಡ ಹೆಚ್ಚಾಗಿದೆ. ಕೇಂದ್ರ ಸರಕಾರ ಮಾತ್ರ ಏನೇ ಆಗಲಿ ತೈಲದ ಮೇಲೆ ಯಾವುದೇ ರೀತಿಯ ಸಬ್ಸಿಡಿಯನ್ನ ನೀಡುವುದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈಗ ತೈಲದ ಬೆಲೆ ಇಳಿಕೆಯಾಗ ಬೇಕಾದರೆ ಉಳಿದಿರುವ ಒಂದೇ ಪರಿಹಾರ ಅದನ್ನ ಜಿಎಸ್ಟಿ ಅಡಿಯಲ್ಲಿ ತರುವುದು.

ಹೀಗೆ ತೈಲವನ್ನ ಕೂಡ ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ವ್ಯಾಟ್ , ಅಬಕಾರಿ ಸುಂಕ ನಿಗದಿತ ಜಿಎಸ್ಟಿ ಸುಂಕ ಮಾತ್ರ ಉಳಿದುಕೊಳ್ಳುತ್ತದೆ . ಈ ರೀತಿ ಮಾಡುವುದರಿಂದ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ 25 ರಿಂದ 30 ರೂಪಾಯಿ ಕುಸಿತವಾಗುತ್ತದೆ . ಇದು ಜನ ಸಾಮಾನ್ಯರಿಗೆ ಬಹಳ ಅನುಕೂಲವಾಗುತ್ತದೆ. ಆದರೆ ರಾಜ್ಯ ಸರಕಾರಗಳಿಗೆ ಸಿಗುತ್ತಿದ್ದ ತೆರಿಗೆ ಹಣ ನಿಂತು ಹೋಗುತ್ತದೆ . ಇದರಿಂದ ರಾಜ್ಯ ಸರಕಾರಗಳು ಕೇಂದ್ರದ ಈ ನಿಲುವನ್ನ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ . ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಮಾತುಕತೆಯಿಂದ ಮಾತ್ರ ಈ ಒಂದು ನಿರ್ಧಾರಕ್ಕೆ ಬರಬಹುದು. ಇವತ್ತಿನ ಜಿಎಸ್ಟಿ ಕೌನ್ಸಿಲ್ ಮೀಟಿಂಗ್ ಫಲಿತಾಂಶ ಏನಾಗುತ್ತದೆ ಎನ್ನುವುದನ್ನ ಸ್ವಲ್ಪ ಕಾದು ತಿಳಿದುಕೊಳ್ಳೋಣ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications