ಕಳೆದ ಎರಡು- ಮೂರು ವರ್ಷದಿಂದ ಈ ಸುದ್ದಿ ಹರಿದಾಡುತ್ತಲೇ ಇದೆ. ಆಸ್ತಿಯನ್ನು ಆಧಾರ್ ಜತೆಗೆ ಜೋಡಣೆ ಮಾಡುವ ಆಲೋಚನೆ ಸರ್ಕಾರಕ್ಕೆ ಇದೆ ಇದೆ ಇದೆ ಎಂಬ ಸುದ್ದಿಯು ಹೀಗೆ ಬಂದು ಹಾಗೆ ಹೋಗುತ್ತಿದೆ. ಆದರೆ ಈ ಬಾರಿ ಆ ಧ್ವನಿ ಮತ್ತೂ ಜೋರಾಗಿ ಕೇಳಿಬರುತ್ತಿದೆ. ಕಪ್ಪು ಹಣ ತಡೆಗೆ ಪ್ರಮುಖ ಕ್ರಮ ಎಂದುಕೊಂಡಿರುವ ಈ ಆಸ್ತಿ- ಆಧಾರ್ ಜೋಡಣೆಯು ಸದ್ಯದಲ್ಲೇ ಜಾರಿಗೆ ಬರಲಿದೆ ಎಂಬ ಮಾತು ಚಾಲ್ತಿಗೆ ಬಂದಿದೆ.
ಮೂರು ವರ್ಷದ ಹಿಂದೆ ಅಪನಗದೀಕರಣ ನಿರ್ಧಾರ ಘೋಷಣೆಯಾದ ಮೇಲೆ ಚಾಲ್ತಿಗೆ ಬಂದ ಆಧಾರ್ ಜೋಡಣೆ ಪ್ರಸ್ತಾಪವು ಅಕ್ರಮ ಹಣ ವರ್ಗಾವಣೆ ತಡೆಯುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ, ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚುವಲ್ಲಿ ನೆರವಾಗುತ್ತದೆ ಎಂಬುದು ಯೋಜನೆಯ ಹಿಂದಿನ ಲೆಕ್ಕಾಚಾರ.
ಅಪನಗದೀಕರಣದ ಪರಿಣಾಮವಾಗಿ ಕಪ್ಪು ಹಣಕ್ಕೆ ಕಡಿವಾಣ ಬಿತ್ತು. ಅದರ ಬೆನ್ನಿಗೇ ರಿಯಲ್ ಎಸ್ಟೇಟ್ ವ್ಯವಹಾರಗಳು ಇಳಿಜಾರಿನ ಹಾದಿಯಲ್ಲಿ ಸಾಗಿದವು. ಆಸ್ತಿ ಬೆಲೆಯಲ್ಲಿ ಗಣನೀಯ ಇಳಿಕೆಯಾಯಿತು. ಸದ್ಯದ ಆರ್ಥಿಕ ಹಿಂಜರಿತಕ್ಕೆ ಇದು ಕೂಡ ಒಂದು ಕಾರಣ ಎಂಬುದು ಬಹಿರಂಗ ಸತ್ಯ.

ಯಾವಾಗ ಆಸ್ತಿಗಳ ಬೆಲೆಯೇ ಕಡಿಮೆ ಆಗಿಹೋಯಿತೋ ಕಪ್ಪು ಹಣದ ಚಲಾವಣೆಗೆ ತಡೆ ಬಿತ್ತು. ಜತೆಗೆ ಆಸ್ತಿ ಖರೀದಿ ಎಂಬುದು ಜನಸಾಮಾನ್ಯರ ಕೈಗೆಟುಕುವಂತಾಯಿತು. ಇನ್ನೈದು ವರ್ಷದಲ್ಲಿ 'ಎಲ್ಲರಿಗೂ ಸೂರು' ಒದಗಿಸಬೇಕು ಎಂಬ ಸರ್ಕಾರದ ಪ್ರಯತ್ನಕ್ಕೆ ಪೂರಕವಾದ ಸನ್ನಿವೇಶವಂತೂ ಸೃಷ್ಟಿ ಆಗುತ್ತದೆ.
ಆಧಾರ್ ಜತೆಗೆ ಆಸ್ತಿ ಜೋಡಣೆ ಎಂಬ ಕಾನೂನು ತರುವ ನಿಟ್ಟಿನಲ್ಲಿ ಸರ್ಕಾರ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದು ಸದ್ಯಕ್ಕೆ ಬಂದಿರುವ ವರದಿ. ಈ ಆಲೋಚನೆ ವಾಸ್ತವದಲ್ಲಿ ಜಾರಿಗೆ ಬಂದರೆ 'ಬೇನಾಮಿ' ವ್ಯವಹಾರಗಳು ಸಂಪೂರ್ಣ ನಿಂತುಹೋಗಿ, ಪಾರದರ್ಶಕತೆ ಬರುತ್ತದೆ. ಜತೆಗೆ ಆಸ್ತಿಗಳು ಸರಿಯಾದ ಬೆಲೆಯಲ್ಲಿ ಜನರಿಗೆ ದೊರೆಯುತ್ತದೆ ಎಂಬುದು ಭರವಸೆಯಾಗಿದೆ.
ಇನ್ನು ಈ ರೀತಿ ಆಧಾರ್- ಆಸ್ತಿ ಜೋಡಣೆ ಆಗುವುದರಿಂದ ಆಸ್ತಿ ಖರೀದಿ- ಮಾರಾಟ, ಗೃಹ ಸಾಲ ಪಡೆಯುವುದು ಇತ್ಯಾದಿ ವ್ಯವಹಾರಗಳು ಸಹ ಸಲೀಸಾಗುತ್ತವೆ. ಆಸ್ತಿಯ ಮಾಲೀಕತ್ವದ ಬಗ್ಗೆ ಆತಂಕಗೊಳ್ಳುವ ಅಗತ್ಯ ಇರುವುದಿಲ್ಲ. ಹೂಡಿಕೆ ಮಾಡಬೇಕು ಎಂದು ಬಯಸುವವರಿಗೆ ಸುರಕ್ಷತೆಯ ಭಾವವನ್ನು ನೀಡುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications