ಹಬ್ಬದ ಸೀಸನ್ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನರಿಗೆ ತಲೆ ನೋವು ಉಂಟು ಮಾಡಿದೆ. ದೀಪಾವಳಿ ಸಂದರ್ಭದಲ್ಲಿ ಕಾರು ಹಾಗೂ ಮೊಬೈಲ್ ಫೋನ್ಗಳನ್ನು ಖರೀದಿ ಮಾಡಬೇಕು ಎಂದು ಅಂದುಕೊಂಡಿದ್ದವರಿಗೆ ಈ ಹಬ್ಬದ ಸೀಸನ್ ನಡುವೆ ಬೆಲೆ ಏರಿಕೆ ಆಗಲಿದೆ ಎಂಬ ಸುದ್ದಿ ಕೇಳಿ ಬೇಸರವಾಗಿದೆ. ಆದರೆ ಈಗ ನಿಮಗೊಂದು ಸಿಹಿ ಸುದ್ದಿ ಇದೆ.
ಕಳೆದ ತಿಂಗಳಿಗಿಂತ ಅಡುಗೆ ಎಣ್ಣೆಯ ಬೆಲೆಯು ಈಗ ಕೊಂಚ ಕಡಿಮೆ ಆಗುತ್ತಿದೆ. ಖಾದ್ಯ ತೈಲಗಳ ಮೇಲಿನ ಆಮದು ಸುಂಕ ಕಡಿಮೆ ಆದ ಹಿನ್ನೆಲೆಯಲ್ಲಿ ಈ ಅಡುಗೆ ಎಣ್ಣೆಯ ಬೆಲೆಯು ಇಳಿಕೆ ಕಂಡಿದೆ. ಇನ್ನು ದಾಸ್ತಾನುಗಳನ್ನು ಕಾಪಾಡಿಕೊಳ್ಳಲು ಮತ್ತು ಅಗತ್ಯ ಅಡುಗೆ ವಸ್ತುಗಳ ಸಂಗ್ರಹಣೆಯನ್ನು ತಡೆಯಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಡುಗೆ ಎಣ್ಣೆಯ ಬೆಲೆಯು ಕಡಿಮೆ ಆಗುತ್ತಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಈ ಹಿಂದಿನ ತಿಂಗಳು ಅಡುಗೆ ಎಣ್ಣೆಗಳ ಬೆಲೆಯು ಭಾರತದಲ್ಲಿ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. ಸೋಯಾಬಿನ್ ಎಣ್ಣೆಯ ಸಗಟು ಬೆಲೆಯು ಲೀಟರ್ಗೆ 142 ರೂಪಾಯಿ ಆಗಿತ್ತು. ಪಾಮ್ ಆಯಿಲ್ ಬೆಲೆಯು ಲೀಟರ್ಗೆ 130 ರೂಪಾಯಿ ಆಗಿತ್ತು. ಸೂರ್ಯಕಾಂತಿ ಎಣ್ಣೆಯ ಬೆಲೆಯು ಲೀಟರ್ಗೆ 147 ರೂಪಾಯಿ ಆಗಿತ್ತು. ಹಾಗಾದರೆ ಈಗ ಅಡುಗೆ ಎಣ್ಣೆಯ ಬೆಲೆಯು ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ.
ಈಗ ಅಡುಗೆ ಎಣ್ಣೆಯ ಬೆಲೆ ಎಷ್ಟಿದೆ?
ಪ್ರಸ್ತುತ ಆಮದು ಸುಂಕ ಕಡಿಮೆ ಆದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆಯ ಬೆಲೆಯು ಕೊಂಚ ಇಳಿಕೆ ಕಂಡಿದೆ. ಕಳೆದ ತಿಂಗಳು ಸೋಯಾಬಿನ್ ಎಣ್ಣೆಯ ಸಗಟು ಬೆಲೆಯು ಲೀಟರ್ಗೆ 142 ರೂಪಾಯಿ ಆಗಿತ್ತು. ಆದರೆ ಈಗ ಲೀಟರ್ಗೆ 129 ರೂಪಾಯಿಗೆ ಇಳಿಕೆ ಕಂಡಿದೆ. ಇನ್ನು ಲೀಟರ್ಗೆ 130 ರೂಪಾಯಿ ಆಗಿದ್ದ ಪಾಮ್ ಆಯಿಲ್ ಬೆಲೆಯು ಈಗ ಲೀಟರ್ಗೆ 121 ರೂಪಾಯಿಗೆ ಇಳಿದಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆಯು ಲೀಟರ್ಗೆ 147 ರೂಪಾಯಿ ಆಗಿತ್ತು. ಆದರೆ ಈಗ ಲೀಟರ್ಗೆ 138 ರೂಪಾಯಿ ಆಗಿದೆ. ಈ ನಡುವೆ ಸಾಸಿವೆ ಎಣ್ಣೆಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಫೆಬ್ರವರಿ-ಮಾರ್ಚ್ನಲ್ಲಿ ಸಾಸಿವೆಯ ಹೊಸ ಬೆಲೆ ಬರುವವರೆಗೂ ಬೆಲೆ ಇಳಿಕೆಯ ಸಾಧ್ಯತೆ ಕಡಿಮೆಯಾಗಿದೆ. ಮುಂಬರುವ ಹಬ್ಬದ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆಗಳಲ್ಲಿ ಹಠಾತ್ ಏರಿಕೆಯು ಅಸಾಧ್ಯ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.
ಬೆಲೆ ಏರಿಕೆಯ ಸಾಧ್ಯತೆ ಇಲ್ಲ
"ಆಮದು ಸುಂಕವು ಕಡಿಮೆ ಆದ ಕಾರಣದಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಆಮದು ಮಾಡಿಕೊಂಡ ತೈಲಗಳ ಬೆಲೆಗಳು ಶೇಕಡ 5 ರಿಂದ 9 ರಷ್ಟು ಇಳಿಕೆ ಕಂಡಿದೆ. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ನೀಡಿದ ಆದೇಶದಿಂದಾಗಿ ಈ ಹಬ್ಬದ ಸೀಸನ್ನಲ್ಲಿ ಅಡುಗೆ ತೈಲದ ಬೆಲೆಯು ಸ್ಥಿರವಾಗಿ ಇರಲಿದೆ. ಈಗ ಬೆಲೆಯು ಇಳಿಕೆ ಕಾಣುತ್ತಿದೆ. ಹಠತ್ತಾಗಿ ಬೆಲೆ ಏರಿಕೆ ಆಗುವುದು ಕಂಡು ಬರುವುದಿಲ್ಲ. ಖಾರಿಫ್ ಎಣ್ಣೆಕಾಳುಗಳು ಮಾರುಕಟ್ಟೆಗೆ ಬರಲಾರಂಭಿಸಿದೆ. ಅದರಿಂದಾಗಿ ಸೋಯಾಬೀನ್ ತೈಲ ಬೆಲೆಗಳು ನಿಯಂತ್ರಣವಾಗಲಿದೆ" ಎಂದು ತರಕಾರಿ ತೈಲ ಬ್ರೋಕರ್ ಸನ್ವಿನ್ ಗ್ರೂಪ್ನ ಮುಖ್ಯ ಕಾರ್ಯನಿರ್ವಾಹಕ ಸಂದೀಪ್ ಬಜೋರಿಯಾ ಹೇಳಿದ್ದಾರೆ.
ಕೇಂದ್ರದಿಂದ ದಾಸ್ತಾನು ಮಿತಿ ಆದೇಶ
ಅಕ್ಟೋಬರ್ 12 ರಂದು ಉತ್ತರ ಪ್ರದೇಶ ಸರ್ಕಾರವು ದಾಸ್ತಾನು ಮಿತಿ ಆದೇಶವನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಅಡುಗೆ ಎಣ್ಣೆ ಬೆಲೆಯು ಕಡಿಮೆ ಆಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿತ್ತು. ಇತರ ರಾಜ್ಯಗಳು ಆದ ರಾಜಸ್ಥಾನ, ಗುಜರಾತ್, ಹರಿಯಾಣ ದಾಸ್ತಾನು ಮಿತಿಯನ್ನು ಶೀಘ್ರವೇ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಉದ್ಯಮ ಮೂಲಗಳು ತಿಳಿಸಿದೆ. ಸೋಮವಾರ ಕೇಂದ್ರ ಸರ್ಕಾರವು, ಖಾದ್ಯ ಎಣ್ಣೆಗಳ ದಾಸ್ತಾನು ಮಿತಿಯ ಬಗ್ಗೆ ಆದೇಶವನ್ನು ನೀಡುವ ಕಾರ್ಯವನ್ನು ಶೀಘ್ರವೇ ಮಾಡಿ ಎಂದು ತಿಳಿಸಿದೆ. ಹಾಗೆಯೇ ಸರ್ಕಾರವು ಆಮದು ಸುಂಕವನ್ನು ಕೂಡಾ ಇಳಿಕೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ಖಾದ್ಯ ತೈಲದ ಬೆಲೆ ಏರಿಕೆ
"ಕಚ್ಚಾ ಖಾದ್ಯ ತೈಲದ ಜಾಗತಿಕ ಬೆಲೆಗಳು ಏರಿಕೆಯಾಗಿದೆ. ಈ ಹಿನ್ನೆಲೆ ಭಾರತವು ಆಮದು ಸುಂಕವನ್ನು ಕಡಿತಗಿಳೊಳಿಸಿದೆ. ಸರ್ಕಾರದ ಈ ಕ್ರಮದಿಂದಾಗಿ ಗ್ರಾಹಕರಿಗೆ ಅಧಿಕ ಲಾಭವೇನು ದೊರಕದು. ಮಲೇಷಿಯಾದ ಪಾಮ್ ಆಯಿಲ್ ಬೆಲೆಗಳು ಗಮನಾರ್ಹವಾಗಿ ಏರಿದೆ. ನಾವು ಆಮದು ಮಾಡಿದ ತೈಲಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದೇವೆ. ಆದ್ದರಿಂದ ನಮ್ಮ ದೇಶದಲ್ಲಿ ಪಾಮ್ ಆಯಿಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ," ಎಂದು ಭಾರತದ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿ ವಿ ಮೆಹ್ತಾ ಅಭಿಪ್ರಾಯಿಸಿದ್ದಾರೆ. ಭಾರತದಲ್ಲಿ 2020 ನವೆಂಬರ್ನಿಂದ 2021 ಅಕ್ಟೋಬರ್ವರೆಗೆ ಸುಮಾರು 13.15 ಮಿಲಿಯನ್ ಟನ್ ಅಡುಗೆ ಎಣ್ಣೆಯನ್ನು ಆಮದು ಮಾಡಲಾಗಿದೆ ಎಂದು ವರದಿಯು ಹೇಳಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications