ಈಗಾಗಲೇ ಹರಾಜಿಗೆ ಇಟ್ಟಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಪರಿಸ್ಥಿತಿ ಕೋವಿಡ್ ನಿಂದಾಗಿ ಮತ್ತಷ್ಟು ಬಿಗಡಾಯಿಸಿದೆ.
ಏರ್ ಇಂಡಿಯಾ ತನ್ನ ನೌಕರರಿಗೆ ಇಂದು ಬೃಹತ್ ಶಾಕ್ ನೀಡಿತ್ತು. ತನ್ನ ನೌಕರರಿಗೆ ಐದು ವರ್ಷ ಸಂಬಳ ರಹಿತ ರಜೆಯನ್ನು ಘೋಷಣೆ ಮಾಡಿದೆ. ಇದರಿಂದ ಏರ್ ಇಂಡಿಯಾ ನೌಕರರು ಕಂಗಾಲಾಗಿದ್ದಾರೆ.
ಇದಲ್ಲದೇ ಶೇ 70 ರವರೆಗೆ ಏರ್ ಇಂಡಿಯಾ ಪೈಲಟ್ಗಳ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ಕುರಿತಂತೆ ತೀವ್ರ ಅಸಮಾಧಾನಗೊಂಡಿರುವ ಪೈಲಟ್ಗಳು ಏರ್ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ಅವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶೇ 60 ರಷ್ಟು ವೇತನವನ್ನು ಕಡಿತ ಮಾಡಲಾಗಿದೆ
ಏರ್ ಇಂಡಿಯಾ ಪೈಲಟ್ಗಳಿಗೆ ಶೇ 60 ರಷ್ಟು ವೇತನವನ್ನು ಕಡಿತ ಮಾಡಲಾಗಿದೆ. ಈ ಕುರಿತು ಬನ್ಸಾಲ್ಗೆ ಬರೆದಿರುವ ಪತ್ರದಲ್ಲಿ ನಿರ್ದೇಶಕ ಸಿಬ್ಬಂದಿ ಒಟ್ಟು ವೇತನದಲ್ಲಿ ಶೇಕಡಾ 4 ರಷ್ಟು ಕಡಿತವನ್ನು ತೆಗೆದುಕೊಳ್ಳುತ್ತಾರೆ, ಆದರೆ ಮಾರುಕಟ್ಟೆಗಿಂತ ಕಡಿಮೆ ಸಂಬಳ ಪಡೆಯುವ ಸಹ ಪೈಲಟ್ಗೆ ಶೇಕಡಾ 60 ರಷ್ಟು ಕಡಿತವನ್ನು ನೀಡಲಾಗುತ್ತದೆ. ಇದನ್ನು ಹೇಗೆ ಸಮರ್ಥಿಸಲಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
ವೇತನ ಕಡಿತವನ್ನು ಪ್ರಸ್ತಾಪಿಸಲಾಗಿದೆ
ಈ ವರ್ಷದ ಏಪ್ರಿಲ್ನಿಂದ 70 ಪ್ರತಿ ಶತದಷ್ಟು ಸಂಬಳವನ್ನು ಪಡೆಯದಿರುವ ಸಮಯದಲ್ಲಿ ವೇತನ ಕಡಿತವನ್ನು ಪ್ರಸ್ತಾಪಿಸಲಾಗಿದೆ ಎಂದು ಪೈಲಟ್ಗಳು ಬರೆದಿದ್ದಾರೆ.
55 ಪೈಲಟ್ ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ
ಇಲ್ಲಿಯವರೆಗೆ, ಕನಿಷ್ಠ 55 ಪೈಲಟ್ ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಲಟ್ಗಳಿಗೆ ವಿಮಾನಗಳು ಪ್ರಾರಂಭವಾದ ನಂತರ ಸಂಬಳ ನೀಡಲಾಗುವುದು ಎಂದು ಹೇಳುವ ಮೂಲಕ ದಂಡ ವಿಧಿಸುವುದು ನ್ಯಾಯವೇ? ಇದು ನಾಗರಿಕ ವಿಮಾನಯಾನ ಸಚಿವಾಲಯವು (MoCA) ಮುಂಚೂಣಿ ಕಾರ್ಮಿಕರನ್ನು ಗೌರವಿಸಲು ಹೇಗೆ ಬಯಸುತ್ತದೆ? ಎಂದು ಕೇಳಿದ್ದಾರೆ.
ಮಾರುಕಟ್ಟೆ ಮಾನದಂಡಗಳಿಗೆ ಸಮನಾಗಿರುವುದಿಲ್ಲ
"ಪೈಲಟ್ಗಳ ವೇತನವನ್ನು ಶೇಕಡಾ 60 ರಷ್ಟು ಕಡಿತಗೊಳಿಸಲು MoCA ನಿಮಗೆ ನಿರ್ದೇಶನಗಳನ್ನು ನೀಡಿದೆ ಎಂದು ನೀವು ನಮಗೆ ತಿಳಿಸಿದ್ದೀರಿ. ಇದು ಮಾರುಕಟ್ಟೆ ಮಾನದಂಡಗಳಿಗೆ ಸಮನಾಗಿರುವುದಿಲ್ಲ. ನಮ್ಮ ಪೈಲಟ್ಗಳಿಗೆ ನೀಡಿದ ಎಲ್ಲಾ ಮೆಚ್ಚುಗೆಯ ಪತ್ರಗಳನ್ನು ಹಿಂದಿರುಗಿಸಿ'' ಎಂದು ಏರ್ ಇಂಡಿಯಾ ಪೈಲಟ್ಗಳು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications