ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ನ ಮುಖ್ಯಸ್ಥ ಆನಂದ್ ಮಹೀಂದ್ರ ತಮ್ಮ ವ್ಯಾವಹಾರಿಕ ಚಾಕಚಕ್ಯತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೊನಚಿನ ಪೋಸ್ಟ್ಗಳ ಮೂಲಕ ಬಹಳ ಜನಪ್ರಿಯರಾಗಿದ್ದಾರೆ. ಟ್ವಿಟ್ಟರ್ನಲ್ಲಿ ಅವರು ಬಹಳ ಗಮನ ಸೆಳೆಯುವಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬಹಳ ಬಾರಿ ಅವರ ಟ್ವೀಟ್ಗಳು ಮಾರ್ಮಿಕವಾಗಿರುತ್ತವೆ. ಕೆಲವೊಮ್ಮೆ ತಮ್ಮ ಅನಿಸಿಕೆಗಳನ್ನು ಬಹಳ ನಿರ್ಭೀಡೆಯಿಂದ ಹಂಚಿಕೊಳ್ಳುತ್ತಾರೆ. ನೀವು ಒಮ್ಮೆ ಅವರ ಟ್ವಿಟ್ಟರ್ ಟೈಮ್ಲೈನ್ ಹೋಗಿ ನೋಡಿದರೆ ಬಹಳ ಖುಷಿ ಕೊಡುವ, ಗಮನ ಸೆಳೆಯುವ ಟ್ವೀಟ್ಗಳ ಭಂಡಾರವೇ ಅದರಲ್ಲಿರುತ್ತದೆ.
ಮೊನ್ನೆ ಅವರು ಬೇಕರಿಯೊಂದರಲ್ಲಿ ಕ್ರೋಸಿನ್ ಬೋರ್ಡ್ ಇರುವ ತಿಂಡಿಯ ಫೋಟೋವನ್ನು ಹಂಚಿಕೊಂಡು ವಿವರಣೆ ನೀಡಿದ್ದರು. ಅದರಲ್ಲಿ ಫ್ರಾನ್ಸ್ನ ಜನಪ್ರಿಯ ತಿಂಡಿ ಎನಿಸಿರುವ ಕ್ರೂಸ್ಸಾಂಟ್ ಅನ್ನು ಬೇಕರಿಯಲ್ಲಿ ಕ್ರೋಸಿನ್ ಎಂದು ಹೆಸರಿಸಲಾಗಿತ್ತು. ಈ ಸಂಗತಿಯನ್ನು ಆನಂದ್ ಮಹೀಂದ್ರ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು. ಇಂತಹ ಹಲವಾರು ಸ್ಪೆಲಿಂಗ್ ಮಿಸ್ಟೇಕ್ಗಳು ತೀರಾ ಸಾಮಾನ್ಯವಾಗಿ ಆಗುತ್ತಿರುತ್ತವೆ. ಅದರಲ್ಲೇನು ವಿಶೇಷ ಇಲ್ಲ ಎನ್ನುವುದು ನಿಜ. ಇಲ್ಲಿ ಆನಂದ್ ಮಹೀಂದ್ರ ಅವರು ಕ್ರೋಸಿನ್ ಮತ್ತು ಕ್ರೂಸ್ಸಾಂಟ್ಗೂ ಸಾಮ್ಯತೆಯನ್ನು ಕಾಣುವ ಪ್ರಯತ್ನ ಮಾಡಿದ್ದರು. ಹಾಗೆಯೇ ಭಾರತದಲ್ಲಿ ಕ್ಲಿಷ್ಟ ಪದಗಳನ್ನು ಹೇಗೆಲ್ಲಾ ಸರಳಗೊಳಿಸಲಾಗುತ್ತದೆ ಎಂಬುದನ್ನೂ ವ್ಯಕ್ತಪಡಿಸಿದ್ದರು.
ಕ್ರೂಸ್ಸಾಂಟ್ಗೆ ವಿವಿಧ ರೀತಿಯ ಉಚ್ಛರಣೆಗಳಿವೆ. ಆಸ್ಟ್ರಿಯಾ, ಫ್ರಾನ್ಸ್ ದೇಶಗಳಲ್ಲಿ ಅಲ್ಲಿನ ಜನ ಬಳಕೆಯಲ್ಲಿರುವ ಉಚ್ಚಾರಣೆ ಭಾರತೀಯರಿಗೆ ಕಷ್ಟ ಕಷ್ಟ. ಆದರೆ, ಭಾರತದಲ್ಲಿ ಈ ಹೆಸರನ್ನು ತೀರಾ ಸರಳಗೊಳಿಸಿ ಕ್ರೋಸಿನ್ ಎಂದಿಡಲಾಗಿದೆ.

"ಎಲ್ಲಾ ರೀತಿಯ ನೋವು ಮತ್ತು ಬಾಧೆಗಳಿಗೆ ಕ್ರೂಸ್ಸಾಂಟ್ ಒಳ್ಳೆಯ ಪರಿಹಾರ ಎಂದು ನನ್ನ ಫ್ರೆಂಚ್ ಅಳಿಯ ಹೇಳುತ್ತಾರೆ. ನಾವು ಭಾರತೀಯರಿಗೆ ಸಾಫ್ಟ್ವೇರ್ ಪ್ರೋಗ್ರಾಮಿಂಗ್ ಭಾಷೆಯ ಅಬ್ರಿವಿಯೇಶನ್ ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾದ ಇದು ಯಾಕಾಗಬಾರದು?" ಎಂದು ಟ್ವೀಟ್ ಮಾಡಿದ್ದರು.
ಫ್ರೆಂಚ್ ಅಳಿಯ ವಿಚಾರ
ಇದೇ ವೇಳೆ ತಮ್ಮ ಟ್ವೀಟ್ನಲ್ಲಿ ಆನಂದ್ ಮಹೀಂದ್ರ ತಮ್ಮ ಫ್ರೆಂಚ್ ಅಳಿಯನ ಬಗ್ಗೆ ಪ್ರಸ್ತಾಪ ಮಾಡಿದ್ದು ಕೆಲ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದ್ದು ಹೌದು. ಒಬ್ಬ ವ್ಯಕ್ತಿಯಂತೂ ಟ್ವೀಟ್ ಮಾಡಿ, "ನನಗೆ ಸಂಬಂಧಿಸಿದ ವಿಷಯವಲ್ಲ, ಆದರೂ ಕೇಳುತ್ತೇನೆ, ನಿಮಗೆ ಭಾರತೀಯ ಅಳಿಯ ಯಾಕಾಗಲಿಲ್ಲ?" ಎನ್ನುತ್ತಾನೆ. ಇದಕ್ಕೆ ಆನಂದ್ ಮಹೀಂದ್ರ ಕೊಟ್ಟ ಉತ್ತರ ಬಹಳ ಅರ್ಥಗರ್ಭಿತ ಮತ್ತು ಜೀವನ ಸತ್ಯವನ್ನು ತೋರಿಸುವಂತಿದೆ: "ಯಾಕೆಂದರೆ ಅದು ನನಗೆ ಸಂಬಂಧಿಸಿದ ವಿಷಯವೂ ಅಲ್ಲ. ನನ್ನ ಹೆಣ್ಮಕ್ಕಳು ತಾವೇ ಖುದ್ದಾಗಿ ತಮ್ಮ ಜೀವನ ಸಂಗಾತಿಗಳನ್ನು ಆಯ್ದುಕೊಳ್ಳುತ್ತಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ" ಎಂದಿದ್ದಾರೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications