ಕೇಂದ್ರ ಬಜೆಟ್ 2021ಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಭಾರತದ VIX ಸೂಚ್ಯಂಕವು ಹತ್ತಿರಹತ್ತಿರ 4% ಏರಿಕೆ ಕಂಡು, ಸೋಮವಾರ 23.25ರಲ್ಲಿ ಇತ್ತು. ಸೆನ್ಸೆಕ್ಸ್ 500 ಪಾಯಿಂಟ್ ಗೂ ಹೆಚ್ಚು ಕುಸಿಯಿತು. ಈ ನಷ್ಟಕ್ಕೆ ಅತಿ ಮುಖ್ಯ ಕಾರಣ ಆಗಿದ್ದು ಐ.ಟಿ. ಹಾಗೂ ಎಫ್ ಎಂಸಿಜಿ ವಲಯದ ಷೇರುಗಳು.
ಇನ್ನು ಎನ್ ಎಸ್ ಇ ನಿಫ್ಟಿ ಸೂಚ್ಯಂಕವು 133 ಪಾಯಿಂಟ್ ಇಳಿದು, 14,239 ಪಾಯಿಂಟ್ ನಲ್ಲಿತ್ತು. ಪ್ರಮುಖವಾಗಿ ಇಳಿಕೆ ಕಂಡಿದ್ದ ಷೇರುಗಳಲ್ಲೇ ಅತಿ ದೊಡ್ಡ ಕುಸಿತವಾಗಿದ್ದು ರಿಲಯನ್ಸ್ ಇಂಡಸ್ಟ್ರೀಸ್. ಬಿಎಸ್ ಇಯಲ್ಲಿ ರಿಲಯನ್ಸ್ ಷೇರು 4.96% ಇಳಿದು, ರು. 1948ರಲ್ಲಿ ವಹಿವಾಟು ನಡೆಸಿತು. ಅದಕ್ಕೂ ಸೋಮವಾರ ಆರಂಭದಲ್ಲಿ 5.34% ಇಳಿಕೆ ಕಂಡು, ರು. 1940.15ರಲ್ಲಿ ಇತ್ತು.
ಗಣರಾಜ್ಯೋತ್ಸವ ದಿನದ ರಜಾ ಕಾರಣಕ್ಕೆ ಈ ವಾರ ಅತ್ಯಂತ ಕಡಿಮೆ ಅವಧಿಗೆ ಷೇರು ಮಾರುಕಟ್ಟೆ ಕಾರ್ಯ ನಿರ್ವಹಿಸುತ್ತದೆ. ಇದರ ಜತೆಗೆ ತಿಂಗಳ ಡೆರಿವೆಟಿವ್ಸ್ ಅವಧಿ ಮುಕ್ತಾಯ ಹಾಗೂ ಕೇಂದ್ರ ಬಜೆಟ್ ಮುಂದಿರುವ ಕಾರಣಕ್ಕೆ ಏರಿಳಿತ ಹೆಚ್ಚಿರುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಫೆಬ್ರವರಿ 1ನೇ ತಾರೀಕಿನಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದು, ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನಿಂದ ಬಜೆಟ್ ಪೂರ್ವವಾಗಿ ಐದು ಷೇರುಗಳನ್ನು ಖರೀದಿಗೆ ಆಯ್ಕೆ ಮಾಡಲಾಗಿದೆ. ಅವುಗಳ ವಿವರ ಹೀಗಿದೆ.
1. ಭಾರತ್ ಎಲೆಕ್ಟ್ರಾನಿಕ್ಸ್ ಲಿ.
ಈಗ ವಹಿವಾಟಾಗುತ್ತಿರುವ ದರಕ್ಕೆ ಷೇರು ಖರೀದಿಸಿ, 122- 124ರ ದರದಲ್ಲಿ ಇನ್ನಷ್ಟು ಷೇರುಗಳನ್ನು ಸೇರಿಸಿಕೊಳ್ಳಬಹುದು. ಇದು ರು. 148 ತಲುಪಬಹುದು ಎಂದು ಹೇಳಲಾಗಿದೆ. ಇದಕ್ಕಾಗಿ ಎರಡು ತ್ರೈಮಾಸಿಕದ ಗುರಿ ಕೂಡ ನೀಡಲಾಗಿದೆ.
2. ಎಸ್ಕಾರ್ಟ್ಸ್ ಲಿ.
ಈಗ ವಹಿವಾಟಾಗುತ್ತಿರುವ ದರದಲ್ಲಿ ಖರೀದಿಸಿ, 11800- 1190ರ ಹಂತದಲ್ಲಿ ಇನ್ನಷ್ಟು ಖರೀದಿ ಮಾಡಬಹುದು. ಗುರಿ ರು. 1457. ಎರಡು ತ್ರೈಮಾಸಿಕದ ಗುರಿ ನೀಡಲಾಗಿದೆ.
3. ಎಚ್ ಸಿಜಿ
ಕೊನೆಯದಾಗಿ ಎಷ್ಟರಲ್ಲಿ ವಹಿವಾಟಾಗುತ್ತಿರುತ್ತದೋ ಅಷ್ಟಕ್ಕೆ ಖರೀದಿ ಮಾಡಿ, 145- 147 ರುಪಾಯಿ ಹಂತದಲ್ಲಿ ಇನ್ನಷ್ಟು ಸೇರಿಸಿಕೊಳ್ಳಬಹುದು. ಗುರಿ 180 ರುಪಾಯಿ. ಸಮಯಾವಧಿ ಎರಡು ತ್ರೈಮಾಸಿಕ ಅಥವಾ ಆರು ತಿಂಗಳು.
4. ಎಚ್ ಪಿಸಿಎಲ್
ಮಾರುಕಟ್ಟೆಯಲ್ಲಿ ಎಷ್ಟರಲ್ಲಿ ವ್ಯವಹಾರ ನಡೆಸುತ್ತಿದೆಯೋ ಅಷ್ಟಕ್ಕೆ ಖರೀದಿಸಿ. ರು. 208- 210ರ ಸಮೀಪ ಇನ್ನಷ್ಟು ಖರೀದಿ ಮಾಡಿ. ಆರು ತಿಂಗಳಲ್ಲಿ ರು. 250 ತಲುಪಬಹುದು.
5. ಜೆ.ಕೆ. ಸಿಮೆಂಟ್ಸ್ ಲಿ.
ಕೊನೆಯದಾಗಿ ಎಷ್ಟರಲ್ಲಿ ವಹಿವಾಟು ನಡೆಸುತ್ತಿದೆಯೋ ಅಷ್ಟಕ್ಕೆ ಖರೀದಿಸಿ, ರು. 1940- 1975ರ ಹಂತದಲ್ಲಿ ಇನ್ನಷ್ಟು ಸೇರ್ಪಡೆ ಮಾಡಿ, ಗುರಿ ರು. 2400.
ಅಂದ ಹಾಗೆ, ಈ ಮೇಲ್ಕಂಡ ಮಾಹಿತಿಯು ಖರೀದಿ ಅಥವಾ ಮಾರಾಟಕ್ಕೆ ಶಿಫಾರಸಲ್ಲ. ಈ ಲೇಖನದ ಆಧಾರದಲ್ಲಿ ಆದ ನಷ್ಟ ಅಥವಾ ಹಾನಿಗೆ ಗ್ರೆನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್ ಆಗಲೀ ಅಥವಾ ಸಹವರ್ತಿ ಸಂಸ್ಥೆಗಳಾಗಲೀ, ಲೇಖಕರಾಗಲೀ ಹೊಣೆಯಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications