ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಏಪ್ರಿಲ್ ನಿಂದ ಆಗಸ್ಟ್ ಮಧ್ಯೆ ಜಿಎಸ್ ಟಿ ಸಂಗ್ರಹದಲ್ಲಿ ಇಳಿಕೆ ಆಗಿದೆ. ರಾಜ್ಯಗಳಿಗೆ ಪಾವತಿ ಮಾಡಬೇಕಿರುವ ಜಿಎಸ್ ಟಿ ಪರಿಹಾರ ಮೊತ್ತ 1.51 ಲಕ್ಷ ಕೋಟಿ ಬಾಕಿ ಉಳಿದಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಮವಾರ ಲೋಕಸಭೆಯಲ್ಲಿ ಹೇಳಿದರು.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಕ್ಕೆ 2020- 21ರ ಸಾಲಿಗೆ ಪ್ರಾವಿಷನಲ್ ಆಗಿ ಬಾಕಿ ಇರುವ ಮೊತ್ತದ ಪೈಕಿ ಅತಿ ಹೆಚ್ಚು ಉಳಿಸಿಕೊಂಡಿರುವುದು ಮಹಾರಾಷ್ಟ್ರಕ್ಕೆ. 22,485 ಕೋಟಿ ರುಪಾಯಿಯನ್ನು ಪಾವತಿ ಮಾಡಬೇಕಿದೆ. ಆ ನಂತರ ಕರ್ನಾಟಕ 13,763 ಕೋಟಿ, ಉತ್ತರಪ್ರದೇಶ 11,742 ಕೋಟಿ, ಗುಜರಾತ್ 11,563 ಕೋಟಿ, ತಮಿಳು ನಾಡಿಗೆ 11,269 ಕೋಟಿಯನ್ನು ಕೊಡಬೇಕಿದೆ.
ಬಾಕಿ ನೀಡಬೇಕಿರುವ ಒಟ್ಟು ಮೊತ್ತ 1,51,365 ಕೋಟಿ
ಪಶ್ಚಿಮ ಬಂಗಾಲಕ್ಕೆ 7750 ಕೋಟಿ, ಕೇರಳ 7077 ಕೋಟಿ, ಪಂಜಾಬ್ 6959 ಕೋಟಿ, ದೆಹಲಿ 6931 ಕೋಟಿ, ರಾಜಸ್ಥಾನ 6312 ಕೋಟಿ, ತೆಲಂಗಾಣ 5424 ಕೋಟಿ ಮತ್ತು ಛತ್ತೀಸ್ ಗಢಕ್ಕೆ 2827 ಕೋಟಿ ರುಪಾಯಿಯನ್ನು ಪಾವತಿಸಬೇಕಿದೆ. ಮೂವತ್ತೊಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಕೆ 2020- 21ನೇ ಸಾಲಿನಲ್ಲಿ ನೀಡಬೇಕಿರುವ ಒಟ್ಟು ಮೊತ್ತ 1,51,365 ಕೋಟಿ ರುಪಾಯಿ ಎಂದು ಠಾಕೂರ್ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ರಾಜ್ಯಗಳಿಗೆ 2.35 ಲಕ್ಷ ಕೋಟಿ ಜಿಎಸ್ ಟಿ ಆದಾಯ ಕೊರತೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 2.35 ಲಕ್ಷ ಕೋಟಿ ರುಪಾಯಿ ಜಿಎಸ್ ಟಿ ಆದಾಯ ಕೊರತೆ ಬರಬಹುದು. ಕೇಂದ್ರ ಲೆಕ್ಕ ಹಾಕಿರುವಂತೆ ಅದರಲ್ಲಿ ಜಿಎಸ್ ಟಿ ಜಾರಿಯಿಂದ ಆಗಬಹುದಾದ ನಷ್ಟ 97 ಸಾವಿರ ಕೋಟಿಯಾದರೆ, ಕೊರೊನಾ ಪರಿಣಾಮವಾಗಿ 1.38 ಲಕ್ಷ ಕೋಟಿ ಆದಾಯ ನಷ್ಟ ಆಗಲಿದೆ. ಕೇಂದ್ರ ಬಜೆಟ್ ಅಂದಾಜು ಮಾಡಿದ್ದ ಪ್ರಕಾರ, 2020- 21ನೇ ಸಾಲಿಗೆ ಜಿಎಸ್ ಟಿ ಮೊತ್ತ 6,90,500 ಆಗಬಹುದು ಎಂದುಕೊಳ್ಳಲಾಗಿತ್ತು. ಆಗಸ್ಟ್ ಕೊನೆ ತನಕ 1,81,050 ಕೋಟಿ ರು. ಸಂಗ್ರಹವಾಗಿದೆ.
ಲಾಕ್ ಡೌನ್ ಸೇರಿದಂತೆ ಮತ್ತಿತರ ಕಾರಣಗಳು
"ತೆರಿಗೆ ಸಂಗ್ರಹದಲ್ಲಿ ಇಳಿಕೆ ಆಗಿರುವುದಕ್ಕೆ ಮಾರ್ಚ್ ನಲ್ಲಿ ಜಾರಿಯಾದ ಲಾಕ್ ಡೌನ್ ಕೂಡ ಕಾರಣ. ಸೀಮಿತ ಆರ್ಥಿಕ ಚಟುವಟಿಕೆ, ಜಿಎಸ್ ಟಿ ರಿಟರ್ನ್ ಫೈಲಿಂಗ್ ಗೆ ಯಾವುದೇ ಬಡ್ಡಿ ವಿಧಿಸದೆ ಕಾಲಾವಧಿ ವಿಸ್ತರಣೆ ಮಾಡಿದ್ದು, ಯಾವುದೇ ವಿಳಂಬ ಶುಲ್ಕ ಅಥವಾ ದಂಡ ಮುಂತಾದವು ವಿಧಿಸದೇ ಇದ್ದದ್ದು ಸಹ ಕಾರಣ" ಎಂದು ಠಾಕೂರ್ ಹೇಳಿದ್ದಾರೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications