ನವದೆಹಲಿ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಸ ಮಾನದಂಡಗಳ ಆಧಾರದ ಮೇಲೆ ಮರು ವರ್ಗೀಕರಿಸಲು ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳನ್ನು ಕೇಳಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವರ್ಗೀಕರಣಕ್ಕೆ ಪ್ಲಾಂಟ್ ಮತ್ತು ಯಂತ್ರೋಪಕರಣಗಳಲ್ಲಿನ ಹೂಡಿಕೆಯ ಆಧಾರದ ಮೇಲೆ ಹೊಸ ಮಾನದಂಡಗಳನ್ನು ಸರ್ಕಾರ ಕಳೆದ ತಿಂಗಳು ಅಧಿಸೂಚನೆ ಮೂಲಕ ಆರ್ ಬಿ ಐ ಗೆ ತಿಳಿಸಿತ್ತು.
"ಜುಲೈ 1, 2020 ರ ಹೊಸ ನಿಯಮಾವಳಿ ಪ್ರಕಾರ ಎಂಎಸ್ಎಂಇ ಕೈಗಾರಿಕೆಗಳ ಮರು ವರ್ಗೀಕರಣಕ್ಕೆ ಅಗತ್ಯವಾದ ಕ್ರಮವನ್ನು ಪ್ರಾರಂಭಿಸಲು ನಾವು ನಿಮಗೆ ಸಲಹೆ ನೀಡುತ್ತೇವೆ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಶಾಖೆಗಳಿಗೆ / ನಿಯಂತ್ರಣ ಕಚೇರಿಗಳಿಗೆ ಅಗತ್ಯವಾದ ಸೂಚನೆಗಳನ್ನು ನೀಡಿ," ಎಂದು ಆರ್ಬಿಐ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಹೇಳಿದೆ.
ನಿಯಮಾವಳಿ ಪರಿಷ್ಕರಣೆ
2006 ರಲ್ಲಿ ಎಂಎಸ್ಎಂಇ ಅಭಿವೃದ್ಧಿ ಕಾಯ್ದೆ ಜಾರಿಗೆ ಬಂದ 14 ವರ್ಷಗಳ ನಂತರ, ಎಂಎಸ್ಎಂಇ ನಿಯಮಾವಳಿ ಪರಿಷ್ಕರಣೆಯನ್ನು ಮೇ 13 ರಂದು ಆತ್ಮ ನಿರ್ಭರ ಭಾರತ್ ಅಭಿಯಾನ್ ಪ್ಯಾಕೇಜ್ನಲ್ಲಿ ಘೋಷಿಸಲಾಯಿತು.
ಚಾಲ್ತಿಯಲ್ಲಿರುವ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ
ಪ್ಲಾಂಟ್ ಮತ್ತು ಯಂತ್ರೋಪಕರಣಗಳ ಹೂಡಿಕೆಯ ವಿಷಯದಲ್ಲಿ ಮೇಲ್ಮುಖವಾದ ಬದಲಾವಣೆಯ ಸಂದರ್ಭದಲ್ಲಿ ಮತ್ತು ಅದರ ಮರು-ವರ್ಗೀಕರಣದ ಸಂದರ್ಭದಲ್ಲಿ, ಒಂದು ಉದ್ಯಮವು ವರ್ಷದ ಅಂತ್ಯದಿಂದ ಒಂದು ವರ್ಷದ ಅವಧಿ ಮುಗಿಯುವವರೆಗೆ ತನ್ನ ಚಾಲ್ತಿಯಲ್ಲಿರುವ ಸ್ಥಿತಿಯನ್ನು ಉಳಿಸಿಕೊಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಪರಿಷ್ಕೃತ ವ್ಯಾಖ್ಯಾನದ ಪ್ರಕಾರ, ಒಂದು ಉದ್ಯಮವು ಸೂಕ್ಷ್ಮವಾಗಿದ್ದು, ಅಲ್ಲಿ ಪ್ಲಾಂಟ್ ಮತ್ತು ಯಂತ್ರೋಪಕರಣಗಳ ಹೂಡಿಕೆ 1 ಕೋಟಿ ರೂ.ಗಿಂತ ಹೆಚ್ಚಿಲ್ಲ ಎಂದಿದೆ.
10 ಕೋಟಿ ರೂ.ಗಿಂತ ಹೆಚ್ಚಿರುವುದಿಲ್ಲ
ಒಂದು ಉದ್ಯಮವನ್ನು ಈಗ ಸಣ್ಣ ಉದ್ಯಮ ಎಂದು ವರ್ಗೀಕರಿಸಬೇಕಾದರೆ ಅಲ್ಲಿ ಸ್ಥಾವರ ಮತ್ತು ಯಂತ್ರೋಪಕರಣಗಳು ಅಥವಾ ಸಲಕರಣೆಗಳ ಹೂಡಿಕೆ 10 ಕೋಟಿ ರೂ.ಗಿಂತ ಹೆಚ್ಚಿರುವುದಿಲ್ಲ ಮತ್ತು ವಹಿವಾಟು 50 ಕೋಟಿ ರೂ. ಮೀರುವುದಿಲ್ಲ.
50 ಕೋಟಿ ರೂ.ಗಳನ್ನು ಮೀರಬಾರದು
ಮಧ್ಯಮ ಉದ್ಯಮಕ್ಕಾಗಿ, ಹೊಸ ವರ್ಗೀಕರಣದ ಪ್ರಕಾರ, ಸ್ಥಾವರ ಮತ್ತು ಯಂತ್ರೋಪಕರಣಗಳ ಅಥವಾ ಸಲಕರಣೆಗಳ ಹೂಡಿಕೆ 50 ಕೋಟಿ ರೂ.ಗಳನ್ನು ಮೀರಬಾರದು ಮತ್ತು ವಹಿವಾಟು 250 ಕೋಟಿ ರೂ.ಗಿಂತ ಕಡಿಮೆಯಿರಬೇಕು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications