ಮಥುರಾದಲ್ಲಿನ ಗೋವರ್ಧನಗಿರಿಯ ಕಲ್ಲುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಟ್ಟ ಆರೋಪದಲ್ಲಿ ಇ- ಕಾಮರ್ಸ್ ಸೈಟ್ ಸಿಇಒ ಸೇರಿ ಮೂವರ ವಿರುದ್ಧ ಭಾನುವಾರ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಭಗವಾನ್ ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಹಿಂದೂಗಳಿಗೆ ಪರಮ ಪವಿತ್ರವಾದ ಸ್ಥಳ ಮಥುರಾದ ಗೋವರ್ಧನಗಿರಿ.
ಶ್ರೀಕೃಷ್ಣನ ಬಗೆಗಿನ ಕಥೆಗಳಲ್ಲಿ ಇರುವಂತೆ, ಒಮ್ಮೆ ವಿಪರೀತ ಮಳೆ ಬರುವಾಗ ಈ ಗೋವರ್ಧನಗಿರಿಯನ್ನೇ ತನ್ನ ಕಿರು ಬೆರಳಿನಿಂದ ಎತ್ತಿ ಹಿಡಿದು ನಿಂತನಂತೆ ಕೃಷ್ಣ. ಅದರ ಅಡಿಯಲ್ಲಿ ಬಂದು ಜನರು ನಿಂತು ರಕ್ಷಣೆ ಪಡೆದರಂತೆ. ಈ ರೀತಿಯ ಕೃಷ್ಣನ ಕಥೆಯಲ್ಲಿ ಬರುವ ಪರ್ವತವಾದ ಈ ಗೋವರ್ಧಗಿರಿಗೆ ಹಿಂದೂಗಳಲ್ಲಿ ಆರಾಧನೆ ಭಾವವಿದೆ.
ಅಂಥ ಗೋವರ್ಧನಗಿರಿಯ ಕಲ್ಲುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮಾಹಿತಿ ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ಕಂಪೆನಿ, ಸಿಇಒ ಮತ್ತು ಕಲ್ಲಿನ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಮಥುರಾ (ಗ್ರಾಮೀಣ) ಎಸ್.ಪಿ. ಶಿರೀಶ್ ಚಂದ್ರ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 265, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಅಡಿಯಲ್ಲಿ ಇಂಡಿಯಾMART ಸ್ಥಾಪಕ- ಸಿಇಒ ದಿನೇಶ್ ಅಗರ್ ವಾಲ್, ಸಹ- ಸಂಸ್ಥಾಪಕ ಬ್ರಜೇಶ್ ಅಗರ್ ವಾಲ್, ಮಥುರಾ ಮೂಲದ ಸರಬರಾಜುದಾರ ಅಂಕುರ್ ಅಗರ್ ವಾಲ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ ಐಆರ್) ದಾಖಲಿಸಲಾಗಿದೆ.
ಗೋವರ್ಧರ್ ಪೊಲೀಸ್ ಠಾಣೆಯಲ್ಲಿ ಮಥುರಾ ಮೂಲದ ಸಾಮಾಜಿಕ ಕಾರ್ಯಕರ್ತ ಕೇಶವ್ ಮುಖಿಯಾ ದಾಖಲಿಸಿದ್ದ ದೂರಿನ ಅನ್ವಯ ಎಫ್ ಐಆರ್ ದಾಖಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹತ್ತು ದೂರು ಇದ್ದು, ಅವೆಲ್ಲವನ್ನೂ ಒಟ್ಟುಗೂಡಿಸಿ, ಒಂದು ವಿಚಾರಣೆ ಮಾಡಲಾಗಿದೆ.
ಪೊಲೀಸರ ಪ್ರಕಾರ, ವೆಬ್ ಸೈಟ್ ನಿಂದ ಈ ಕಲ್ಲುಗಳನ್ನು "ನೈಸರ್ಗಿಕ" ಎಂದು ಹೇಳಿ, ಒಂದು ತುಂಡಿಗೆ ರು. 5,175 ದರ ನಿಗದಿ ಮಾಡಲಾಗಿತ್ತು. ಹೀಗೆ "ವ್ಯವಹಾರ"ಕ್ಕೆ ಇಳಿದಿದ್ದ ಕಂಪೆನಿಯ ವಿರುದ್ಧ ಗೋವರ್ಧನ್ ಪೊಲೀಸ್ ಠಾಣೆ ಮುಂದೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.
ಕೃಷ್ಣನೇ ಗೋವರ್ಧನ ಪರ್ವತದ ಸ್ವರೂಪದಲ್ಲಿದ್ದಾನೆ. ಇಲ್ಲಿನ ಕಲ್ಲುಗಳನ್ನು ಮಾರಿದರೆ ಸ್ವತಃ ಕೃಷ್ಣನನ್ನೇ ಮಾರಾಟಕ್ಕೆ ಇಟ್ಟಂತೆ ಎಂದು ಮಥುರಾ ಮೂಲದ ಸಿಯಾ ರಾಮ್ ಬಾಬ ಎಂಬ ಸಾಧು, ಕಂಪೆನಿಯ ಈ ವ್ಯವಹಾರವನ್ನು ಖಂಡಿಸಿದ್ದಾರೆ.
ಕಂಪೆನಿ ಹಾಗೂ ಸರಬರಾಜುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ಮಥುರಾ ಡಿ.ಎಂ. ಭೇಟಿಯಾಗುವುದಕ್ಕೆ ಉತ್ತರಪ್ರದೇಶದ ಬ್ರಾಹ್ಮಣ ಮಹಾಸಭಾ ತೀರ್ಮಾನಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications