ಆರ್ಥಿಕ ಸಮೀಕ್ಷೆ ರಚಿಸಿದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಯಾರು?
ಪ್ರತಿ ವರ್ಷದಂತೆ ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ಅವರು ಸಿದ್ದಪಡಿಸಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ವಿವಿಧ ವಲಯಗಳ ಸ್ಥಿತಿಗತಿಯನ್ನು ಆರ್ಥಿಕ ಸಮೀಕ್ಷೆ ತೆರದಿಟ್ಟಿದೆ.
ಈ ಆರ್ಥಿಕ ಸಮೀಕ್ಷೆಯಲ್ಲಿ ವರ್ಷಪೂರ್ತಿ ನಡೆದ ಹಣಕಾಸು ಬೆಳವಣಿಗೆಗಳನ್ನು ಸವಿಸ್ತಾರವಾಗಿ ವಿವರಿಸಲಾಗಿರುತ್ತದೆ. ಒಂದು ರೀತಿಯಲ್ಲಿ ಬಜೆಟ್ ಮುನ್ನೋಟವನ್ನು, ಸರ್ಕಾರದ ಮುಂದಿರುವ ಸವಾಲುಗಳನ್ನು ಒಳಗೊಂಡಿರುತ್ತದೆ.
ಈ ವರದಿಯನ್ನು ಮುಖ್ಯ ಹಣಕಾಸು ಸಲಹೆಗಾರರು ಮತ್ತು ಅವರ ತಂಡದವರು ತಯಾರಿಸಿದ್ದಾರೆ. ಸದ್ಯ ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದಾರೆ. ಹಾಗಿದ್ದರೆ ಆರ್ಥಿಕ ಸಮೀಕ್ಷೆ ರಚಿಸಿರುವ ಸಿಇಎ ಸುಬ್ರಮಣಿಯನ್ ಯಾರು ಎಂಬುದನ್ನು ಈ ಕೆಳಗೆ ತಿಳಿಯಿರಿ.
2018ರಲ್ಲಿ ಅಧಿಕಾರ ಪಡೆದ ಸುಬ್ರಮಣಿಯನ್
ಕೆ.ವಿ.ಸುಬ್ರಮಣಿಯನ್ ಅವರು ಸಿಇಎ ಸ್ಥಾನವನ್ನು 2018 ರ ಡಿಸೆಂಬರ್ನಲ್ಲಿ ಮೂರು ವರ್ಷಗಳ ಅಧಿಕಾರಾವಧಿಗೆ ಪಡೆದರು. "ವೈಯಕ್ತಿಕ ಕಾರಣಗಳಿಂದಾಗಿ" ಅರವಿಂದ್ ಸುಬ್ರಮಣಿಯನ್ ಅವರು ಈ ಹುದ್ದೆಯನ್ನು ಖಾಲಿ ಮಾಡಿದ ನಂತರ ಅವರು ಈ ಸ್ಥಾನವನ್ನು ವಹಿಸಿಕೊಂಡರು.
ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅಡಿಯಲ್ಲಿ ಕೆಲಸ
ಕೆ.ವಿ. ಸುಬ್ರಮಣಿಯನ್ ಅವರು ತುಂಬಾ ನಿಪುಣ ಆರ್ಥಿಕ ತಜ್ಞರಾಗಿದ್ದು, ಅವರು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಅಡಿಯಲ್ಲಿ ಕೆಲಸ ಮಾಡಿದರು. ಐಐಟಿ-ಐಐಎಂ ಹಳೆಯ ವಿದ್ಯಾರ್ಥಿ, ಸುಬ್ರಮಣಿಯನ್ ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ನೀತಿಯಲ್ಲಿ ವಿಶ್ವದ ಪ್ರಮುಖ ತಜ್ಞರಲ್ಲಿ ಒಬ್ಬರು.
ಹಲವಾರು ತಜ್ಞ ಸಮಿತಿಗಳಲ್ಲಿ ಅರ್ಥಶಾಸ್ತ್ರಜ್ಞರಾಗಿ ಸೇವೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮತ್ತು ಉದಯ್ ಕೊಟಕ್ ಕಾರ್ಪೊರೇಟ್ ಗವರ್ನನ್ಸ್ ಕಮಿಟಿ ಆಫ್ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗಾಗಿ ಬ್ಯಾಂಕುಗಳ ಆಡಳಿತದ ಪಿಜೆ ನಾಯಕ್ ಸಮಿತಿ ಸೇರಿದಂತೆ ಹಲವಾರು ತಜ್ಞ ಸಮಿತಿಗಳಲ್ಲಿ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
ಅದಕ್ಕೂ ಹಿಂದೆ ನ್ಯೂಯಾರ್ಕ್ನ ಜೆಪಿ ಮೋರ್ಗಾನ್ ಚೇಸ್ ಅವರೊಂದಿಗೆ ಸಲಹೆಗಾರರ ಪಾತ್ರವನ್ನು , ಐಸಿಐಸಿಐ ಲಿಮಿಟೆಡ್ನ ಗಣ್ಯ ಉತ್ಪನ್ನಗಳ ಸಂಶೋಧನಾ ಗುಂಪಿನಲ್ಲಿ ನಿರ್ವಹಣಾ ಪಾತ್ರದಲ್ಲಿಯೂ ಸೇವೆ ಸಲ್ಲಿಸಿದರು.
ಅಮೆರಿಕಾದ ಚಿಕಾಗೊದಲ್ಲಿ ಪಿಹೆಚ್ಡಿ ಪದವಿ
ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ 2005ರಲ್ಲಿ ಪಿಹೆಚ್ಡಿ ಪದವಿ ಪಡೆದಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ , ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಯಿಂದ ಎಂಬಿಎ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಕಾನ್ಪುರದ (1994) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಬಿ. ಟೆಕ್ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) ಪದವಿಧರರಾದರು.