ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಕಂಪನಿಯ ನಿರ್ದೇಶಕರನ್ನು ಕಳೆದ ವಾರ ಬಂಧನ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯವು (ಇಡಿ) ಗುರುವಾರ ಹೇಳಿದೆ. ಈ ಬಂಧನವವು ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟದಲ್ಲಿ ರೂ 3,316 ಕೋಟಿ ವಂಚನೆಗೆ ಸಂಬಂಧಿಸಿದ್ದಾಗಿದೆ ಎಂದು ವರದಿ ತಿಳಿಸಿದೆ.
ಪೃಥ್ವಿ ಇನ್ಫರ್ಮೇಷನ್ ಸೊಲ್ಯೂಷನ್ಸ್ ಲಿಮಿಟೆಡ್ (ಪಿಐಎಸ್ಎಲ್) ನ ವ್ಯವಸ್ಥಾಪಕ ನಿರ್ದೇಶಕರಾದ ಉಪಲಪತಿ ಸತೀಶ್ ಕುಮಾರ್ರನ್ನು ಆಗಸ್ಟ್ 12 ರಂದು ಬಂಧಿಸಲಾಗಿದೆ ಹಾಗೂ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಪ್ರಕರಣ ದಾಖಲಾಗಿದ್ದು ಹಣ ವಂಚನೆಗೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಸತೀಶ್ ಕುಮಾರ್ರನ್ನು ಹತ್ತು ದಿನಗಳ ಕಸ್ಟಡಿಗೆ ನೀಡಿದೆ ಎಂದು ಹೇಳಲಾಗಿದೆ.
ಈ ಹಿಂದೆ ಪಿಐಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಉಪಲಪತಿ ಸತೀಶ್ ಕುಮಾರ್ರ ಸಹೋದರಿ ವಿ ಹಿಮಾ ಬಿಂಧುವನ್ನು ಬಂಧಿಸಲಾಗಿದೆ. ವಿ ಹಿಮಾ ಬಿಂಧು ಈ ವಂಚನೆ ಪ್ರಕರಣದ ಪ್ರಮುಖ ಆರೋಪಿ ಎಂದು ವರದಿ ಉಲ್ಲೇಖ ಮಾಡಿದೆ. ವಿ ಹಿಮಾ ಬಿಂಧು ನಗರ ಮೂಲದ ಟೆಲಿಕಾಂ ಉಪಕರಣಗಳ ತಯಾರಿಕಾ ಕಂಪನಿ ವಿಎಂಸಿಎಸ್ಎಲ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಎಂದು ಮಾಹಿತಿ ಲಭಿಸಿದೆ. ಆಕೆಯನ್ನು ಜಾರಿ ಜಾರಿ ನಿರ್ದೇಶನಾಲಯವು ಈ ತಿಂಗಳ ಆರಂಭದಲ್ಲಿ ಬಂಧನ ಮಾಡಿತ್ತು ಎಂದು ವರದಿಯು ವಿವರಿಸಿದೆ.

ಆದರೆ ತನಗೆ ಹಾಗೂ ಈ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಿಐಎಸ್ಎಲ್ ವ್ಯವಸ್ಥಾಪಕ ನಿರ್ದೇಶಕ ಉಪಲಪತಿ ಸತೀಶ್ ಕುಮಾರ್ ಹೇಳಿಕೊಂಡಿದ್ದಾರೆ. ನನಗೆ ಹಾಗೂ ಈ ಪಿಐಎಸ್ಎಲ್ನ ನಾನ್ ಪರ್ಫಾಮಿಂಗ್ ಅಸೆಟ್ಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಕುಮಾರ್ ಹೇಳಿದ್ದಾರೆ. ಆದರೆ ಸುಮಾರು 40 ಕ್ಕೂ ಅಧಿಕ ಕಂಪೆನಿಯ ಹಾರ್ಡ್ ಡಿಸ್ಕ್ಗಳು ಜುಲೈ 20 ರಂದು ಸತೀಶ್ ಕುಮಾರ್ ನಿವಾಸದಲ್ಲಿ ಇಡಿ ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಜಾರಿ ನಿರ್ದೇಶನಾಲಯ, ಈ ಡಿಜಿಟಲ್ ಡಿವೈಸ್ಗಳ ವಿಧಿ ವಿಜ್ಞಾನ ಪರೀಕ್ಷೆಯ ಸಂದರ್ಭದಲ್ಲಿ ಬೇನಾಮಿ ವರ್ಗಾವಣೆಯಲ್ಲಿ ತೊಡಗಿರುವುದು ತಿಳಿದು ಬಂದಿದೆ. ವಂಚನೆಯ ಮೊತ್ತವನ್ನು ವರ್ಗಾಯಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿದ್ದರು. ತನಿಖೆಯ ಸಮಯದಲ್ಲಿ ಸತೀಶ್ ಕುಮಾರ್ ಯಾವುದೇ ಸಹಕಾರವನ್ನು ನೀಡಿಲ್ಲ. ಹಾಗೆಯೇ ತಮ್ಮದೇ ಆದ ಉದ್ಯಮದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಒದಗಿಸುತ್ತಿಲ್ಲ," ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ವಿಎಂಸಿಎಸ್ಎಲ್ ಮತ್ತು ಅದರ ಪ್ರವರ್ತಕರ ವಿರುದ್ಧ ಇಡಿ ದಾಖಲು ಮಾಡಿರುವ ಹಣ ವರ್ಗಾವಣೆ ಪ್ರಕರಣವು, ಸಿಬಿಐ ಎಫ್ಐಆರ್ ಮೇಲೆ ಆಧಾರಿಸಿದೆ. "ವಿಎಮ್ಸಿಎಸ್ಎಲ್ ಬ್ಯಾಂಕುಗಳ ಒಕ್ಕೂಟದಿಂದ ಸಾಲವನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಬ್ಯಾಂಕುಗಳಿಗೆ ಪ್ರಸ್ತುತ ಬಾಕಿ ಇರುವ ಮೊತ್ತವು ರೂ 3,316 ಕೋಟಿಗಳಾಗಿವೆ. ವಿಎಂಸಿಎಸ್ಎಲ್ ತನ್ನ ಖಾತೆಗಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಸಂಬಂಧಿತ ಸಂಸ್ಥೆಗಳಿಗೆ ಸಾಲವನ್ನು ನೀಡಿದೆ ಎಂದು ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಬಹಿರಂಗಪಡಿಸಿದೆ," ಎಂದು ಜಾರಿ ನಿರ್ದೇಶನಾಲಯ ಈ ಹಿಂದೆ ಆರೋಪ ಮಾಡಿತ್ತು.
"ಈ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಪಿಐಎಸ್ಎಲ್ ಯಾವುದೇ ನಿರ್ದಿಷ್ಟ ಪಾತ್ರವಿಲ್ಲದೆ ಬಿಎಸ್ಎನ್ಎಲ್ನಿಂದ ಎಲ್ಲಾ ರಿಸಿಪ್ಟ್ಗಳಿಗೆ ಶೇಕಡಾ 3 ರಷ್ಟು ಕಮಿಷನ್ ನೀಡಲಾಗಿದೆ ಎಂಬುವುದನ್ನು ಕೂಡಾ ಬಹಿರಂಗಪಡಿಸಿದೆ. ವಿಎಂಸಿಎಸ್ಎಲ್ ನಕಲಿ ಘಟಕಗಳ ಹೆಸರಿನಲ್ಲಿ 692 ಕೋಟಿ ಮೌಲ್ಯದ ವಿವಿಧ ಕ್ರೆಡಿಟ್ ಲೆಟರ್ಗಳನ್ನು ತೆರೆದಿದೆ ಎಂಬುವುದನ್ನು ಕೂಡಾ ವಿಧಿವಿಜ್ಞಾನ ಲೆಕ್ಕಪರಿಶೋಧನೆಯು ಕಂಡುಹಿಡಿದಿದೆ," ಎಂದು ಜಾರಿ ನಿರ್ದೇಶನಾಲಯ ದೂರಿದೆ.
(ಒನ್ ಇಂಡಿಯಾ)
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications