ವೇತನದಾರರಿಗೆ, ಪಿಂಚಣಿದಾರರಿಗೆ ಇಲ್ಲಿದೆ ಗುಡ್ನ್ಯೂಸ್. ನಿಮ್ಮ ವೇತನ ಜಮೆ ಆಗುವ ದಿನಾಂಕವು ಭಾನುವಾರ ಅಥವಾ ಯಾವುದೇ ಬ್ಯಾಂಕ್ ರಜಾ ದಿನಗಳಲ್ಲಿ ಬಂದರೂ ವೇತನ ಅಕೌಂಟ್ಗೆ ಕ್ರೆಡಿಟ್ ಆಗಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಘೋಷಣೆ ಮಾಡಿರುವ ಪ್ರಕಾರ ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಪಾವತಿ ವ್ಯವಸ್ಥೆ ವರ್ಷದ ಎಲ್ಲ ದಿನವೂ ದೊರೆಯಲಿದೆ. ಇಲ್ಲಿಯವರೆಗೆ ಎನ್ಎಸಿಎಚ್ ವ್ಯವಸ್ಥೆಯು ಬ್ಯಾಂಕ್ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಲಭ್ಯವಿತ್ತು.

ಆದರೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆಯ ಪ್ರಕಾರ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯು ವಾರದ ಎಲ್ಲಾ ದಿನಗಳಲ್ಲೂ ಲಭ್ಯವಾಗಲಿದೆ.
"ಗ್ರಾಹಕರ ಹಿತಾಸಕ್ತಿಯ ಅನುಕೂಲದಿಂದ ಮತ್ತು ವರ್ಷದ ಎಲ್ಲ ದಿನವೂ ಆರ್ಟಿಜಿಎಸ್ ಲಭ್ಯ ಇರುವುದರ ಲಾಭವನ್ನು ಪಡೆಯುವ ಉದ್ದೇಶದಿಂದ, ವರ್ಷದ ಎಲ್ಲ ದಿನವೂ ಎನ್ಎಸಿಎಚ್ ದೊರೆಯುವ ಪ್ರಸ್ತಾವ ಮಾಡಲಾಗಿದೆ," ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಎನ್ಎಸಿಎಚ್ ಎಂಬುದು ಬಲ್ಕ್ ಪೇಮೆಂಟ್ ಸಿಸ್ಟಮ್ ಆಗಿದ್ದು, ಒಂದೇ ಬಾರಿಗೆ ಒಬ್ಬರಿಂದ ಹಲವಾರು ಮಂದಿಗೆ ಹಣ ಕ್ರೆಡಿಟ್ ಆಗುವ ಅನುಕೂಲ ಮಾಡಿಕೊಡುತ್ತದೆ. ವೇತನ ಅಷ್ಟೇ ಅ ಅಲ್ಲದೆ ಬಡ್ಡಿ, ಪೆನ್ಷನ್, ಕಂಪನಿಗಳ ಡಿವಿಡೆಂಡ್ ಪಾವತಿಗೂ ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ.
ಕೇವಲ ಹಣ ವರ್ಗಾವಣೆ ಅಷ್ಟೇ ಅಲ್ಲದೆ ವಿದ್ಯುಚ್ಛಕ್ತಿ ಬಿಲ್, ಅನಿಲ, ಟೆಲಿಫೋನ್, ನೀರು, ಸಾಲದ ಕಂತು, ಮ್ಯೂಚವಲ್ ಫಂಡ್ಗಳು, ಇನ್ಷೂರೆನ್ಸ್ ಪ್ರೀಮಿಯಂ ಸಂಗ್ರಹ ಮುಂತಾದವುಗಳಲ್ಲಿ ಎನ್ಎಸಿಎಚ್ ಪಾವತಿ ವ್ಯವಸ್ಥೆ ಬಳಸಲಾಗುತ್ತದೆ.
ಸದ್ಯಕ್ಕೆ ಬ್ಯಾಂಕ್ಗಳು ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಎನ್ಎಸಿಎಚ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಆಗಸ್ಟ್ 1, 2021ರಿಂದ ವಾರದ ಎಲ್ಲ ದಿನ, ವರ್ಷದ 365 ದಿನಗಳು ಕಾರ್ಯ ನಿರ್ವಹಿಸುತ್ತದೆ ಎಂದು ಆರ್ಬಿಐ ತಿಳಿಸಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications