ಮುಂದಿನ ತಿಂಗಳು ಅಂದರೆ ಜುಲೈನಿಂದ ಕೆಲವು ತೆರಿಗೆ ಪಾವತಿದಾರರು ಹೆಚ್ಚುವರಿ ಟಿಡಿಎಸ್ ಪಾವತಿಸಬೇಕಾಗುತ್ತದೆ. ಇದಕ್ಕೆ ಕಾರಣ 2021ರ ಹೊಸ ಹಣಕಾಸು ಕಾಯ್ದೆ.
ಹೌದು ಹೊಸ ಹಣಕಾಸು ಕಾಯ್ದೆ ಪ್ರಕಾರ ಕಳೆದ ಎರಡು ವರ್ಷದಲ್ಲಿ ಟಿಡಿಎಸ್ ಫೈಲ್ ಮಾಡದ ತೆರಿಗೆ ಪಾವತಿದಾರರು ಮತ್ತು ಪ್ರತಿ ವರ್ಷ ಅವರ ಟಿಡಿಎಸ್ 50,000 ರೂಪಾಯಿ ದಾಟಿದಲ್ಲಿ ಐಟಿಆರ್ ಸಲ್ಲಿಸುವ ವೇಳೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ಜುಲೈ 1ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಇಲಾಖೆಯು ಈ ಹೆಚ್ಚುವರಿ ಟಿಡಿಸ್ ದರ ವಿಧಿಸುತ್ತಿದೆ.

"ಕೆಲವು ನಿರ್ದಿಷ್ಟ ಬಗೆಯ ಆದಾಯಗಳಿಗೆ ಹೆಚ್ಚಿನ ಟಿಡಿಎಸ್ ಕಡಿತ ಮಾಡುವ ಉದ್ದೇಶದಿಂದ ಬಜೆಟ್ 2021ರಲ್ಲಿ 206AB ಪರಿಚಯಿಸಲಾಯಿತು. ಹಿಂದಿನ ಎರಡು ವರ್ಷಗಳಲ್ಲಿ ಯಾರು ಐಟಿಆರ್ ಫೈಲ್ ಮಾಡಿರುವುದಿಲ್ಲವೋ ಮತ್ತು ಪ್ರತಿ ವರ್ಷ ಕಡಿತ ಆಗಿರುವ ಟಿಡಿಎಸ್ 50,000 ದಾಟಿರುತ್ತದೋ ಅಂಥ ಸಂದರ್ಭಕ್ಕೆ ಇದು ಅನ್ವಯಿಸುತ್ತದೆ," ಎಂದು ತೆರಿಗೆ ತಜ್ಞರು ಹೇಳಿದ್ದಾರೆ.
2021ರ ಹಣಕಾಸು ವರ್ಷಕ್ಕೆ ತೆರಿಗೆ ರಿಟರ್ನ್ಸ್ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ವಿಸ್ತರಣೆ ಮಾಡಿದೆ. 2020- 21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಟಿಡಿಎಸ್ ಫೈಲಿಂಗ್ಗೆ ಜೂನ್ 30ನೇ ತಾರೀಕಿನವರೆಗೆ ಗಡುವು ವಿಸ್ತರಿಸಲಾಗಿದೆ.
ಈ ಮೊದಲು ಸಿಬಿಡಿಟಿ ಹೊರಡಿಸಿದ ಆದೇಶದ ಪ್ರಕಾರ, 2020-21ರ ಮೌಲ್ಯಮಾಪನ ವರ್ಷಕ್ಕೆ (ಹಣಕಾಸು ವರ್ಷ 2019-20) ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 ರ ಉಪವಿಭಾಗ 4 ಮತ್ತು 5 ರ ಅಡಿಯಲ್ಲಿ ದ್ವಿಪಕ್ಷೀಯ ರಿಟರ್ನ್ಸ್ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸಿದ ದಿನಾಂಕವನ್ನು 31 ಮೇ 2021 ಕ್ಕೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲ ಗಡುವು 31 ಮಾರ್ಚ್ 2021ರವರೆಗಿತ್ತು.
ಯಾರಿಗೆ ಅನ್ವಯಿಸುವುದಿಲ್ಲ?
ಆದಾಗ್ಯೂ, ಸೆಕ್ಷನ್ 192 ಎ ಅಡಿಯಲ್ಲಿ ಕಡಿತಗೊಳಿಸಲಾದ ಟಿಡಿಎಸ್ಗೆ ಈ ಹೊಸದಾಗಿ ಜಾರಿಗೆ ತಂದ ಸೆಕ್ಷನ್ 206 ಎಬಿ ಅನ್ವಯಿಸುವುದಿಲ್ಲ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications