ಕೊರೊನಾದ ಕಾರಣಕ್ಕೆ ತಲೆದೋರಿರುವ ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರಲು ಆರ್ಥಿಕ ಉತ್ತೇಜನಕ್ಕೆ ಪ್ಯಾಕೇಜ್ ಬೇಕಿದೆ ಎಂದು ಅಸೋಸಿಯೇಷನ್ ಚೇಂಬರ್ಸ್ ಆಫ್ ಕಾಮರ್ಸ್ ಆಫ್ ಇಂಡಿಯಾ (ASSOCHAM) ಹೇಳಿದೆ. ಅದಕ್ಕಾಗಿ ಕನಿಷ್ಠ 20 ಸಾವಿರ ಕೋಟಿ ಅಮೆರಿಕನ್ ಡಾಲರ್ ಮೊತ್ತವು ಭಾರತದ ಆರ್ಥಿಕತೆಗೆ ಈ ಬಿಕ್ಕಟ್ಟಿನ ಸಮಯದಲ್ಲಿ ಅಗತ್ಯ ಇದೆ ಎಂದಿದೆ.
ಈ ಮೊತ್ತವನ್ನು ಭಾರತದ ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 16.20 ಲಕ್ಷ ಕೋಟಿ ರುಪಾಯಿ ಆಗುತ್ತದೆ. ಕೆಲಸ ಕಳೆದುಕೊಂಡಿರುವವರು, ಆದಾಯ ಕಳೆದುಕೊಂಡಿರುವವರ ಸ್ಥಿತಿ ಸುಧಾರಿಸುವ ಸಲುವಾಗಿಯೇ ಮುಂದಿನ ಮೂರು ತಿಂಗಳಲ್ಲಿ 50- 100 ಬಿಲಿಯನ್ ಅಮೆರಿಕನ್ ಡಾಲರ್ ಅಗತ್ಯ ಇದೆ ಎನ್ನಲಾಗಿದೆ.
ಕೇಂದ್ರ ಹಣಕಾಸಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ASSOCHAM ಅಧ್ಯಕ್ಷ ನಿರಂಜನ್ ಹಿರನಂದನಿ ಶಿಫಾರಸುಗಳನ್ನು ಸಲ್ಲಿಸಿದ್ದಾರೆ. ಮುಂದಿನ 12ರಿಂದ 18 ತಿಂಗಳಲ್ಲಿ 200 ಬಿಲಿಯನ್ ಡಾಲರ್ ನಿಂದ 300 ಬಿಲಿಯನ್ ಡಾಲರ್ ತನಕ ಆರ್ಥಿಕ ಉತ್ತೇಜನ ನೀಡಬೇಕು. ಮುಂದಿನ ಮೂರು ತಿಂಗಳಲ್ಲಿ 50- 100 ಬಿಲಿಯನ್ ಅಮೆರಿಕನ್ ಡಾಲರ್ ನಗದು ಮೊತ್ತವನ್ನು ತರಬೇಕು ಎಂಬುದು ಕೂಡ ಶಿಫಾರಸಿನಲ್ಲಿ ಇದೆ.

ಇಂಥ ಸವಾಲಿನ ಸನ್ನಿವೇಶದಲ್ಲಿ ಇದರಿಂದ ವ್ಯಾಪಾರ, ವ್ಯವಹಾರಗಳಿಗೆ ಹಾಗೂ ಉದ್ಯೋಗಸ್ಥರಿಗೆ ನೆರವಾಗುತ್ತದೆ. ಈ ನಗದು ಮೊತ್ತವನ್ನು ಮೂರು ಉದ್ದೇಶಕ್ಕೆ ಬಳಸಬೇಕು. ಉದ್ಯೋಗಿಗಳು- ಕಾರ್ಮಿಕರಿಗೆ ನೇರವಾಗಿ ವರ್ಗಾವಣೆ ಮಾಡಬೇಕು, ಕಂಪೆನಿಗಳಿಗೆ ಸದ್ಯಕ್ಕೆ ಕಾಡುತ್ತಿರುವ ನಗದು ಕೊರತೆ ನಿವಾರಿಸಲು ಬಳಕೆ ಆಗಬೇಕು ಮತ್ತು ಅಂತಿಮವಾಗಿ ಆರ್ಥಿಕ ನಿಯಮ ಹಾಗೂ ತೆರಿಗೆ ಕ್ರಮಗಳ ಮೂಲಕ ಹೂಡಿಕೆ ಮತ್ತು ಬೇಡಿಕೆ ಹೆಚ್ಚಾಗಲು ಉತ್ತೇಜಿಸಬೇಕು ಎಂದಿದ್ದಾರೆ.
ಇನ್ನು ಜಿಎಸ್ ಟಿ ದರವನ್ನು ಮುಂದಿನ ಮೂರು ತಿಂಗಳಿಗೆ ಶೇಕಡಾ ಐವತ್ತು ಪರ್ಸೆಂಟ್ ಹಾಗೂ ಆರ್ಥಿಕ ವರ್ಷದ ಉಳಿದ ಅವಧಿಗೆ ಶೇಕಡಾ ಇಪ್ಪತ್ತೈದು ಪರ್ಸೆಂಟ್ ಇಳಿಕೆ ಮಾಡಬೇಕು. ಇನ್ನು ಜಿಎಸ್ ಟಿ ಹಾಗೂ ತೆರಿಗೆ ಮೊತ್ತವನ್ನು ಕಂತುಗಳಲ್ಲಿ, ಯಾವುದೇ ಬಡ್ಡಿ ಹಾಕದಂತೆ ಪಾವತಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications