ಬೆಂಗಳೂರು, ಜೂನ್ 31: ಸಾಪ್ಟವೇರ್ ದೈತ್ಯ ಇನ್ಪೋಸಿಸ್ ಸಂಸ್ಥೆ ತನ್ನ ಕೆಲಸದ ಸ್ಥಳಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.
ಇನ್ಪೋಸಿಸ್ ನಲ್ಲಿ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೇಡರ್ಗಳನ್ನು ಪುನರ್ರಚಿಸಲಾಗುತ್ತಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ತ್ವರಿತ ನಿರ್ಣಯ ತೆಗೆದುಕೊಳ್ಳುವಿಕೆ ಹಾಗೂ ಕೇಡರ್ಗಳಲ್ಲಿನ ಏಕತಾನತೆಯನ್ನು ಹೋಗಲಾಡಿಸುವ ಉದ್ದೇಶ ಇದು ಹೊಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತ
ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತದ ಸಿಬ್ಬಂದಿಗಳನ್ನು ಪುನರ್ರಚಿಸಲಾಗುತ್ತಿದೆ. ಡೆಲಿವರಿ ಮ್ಯಾನೇಜರ್ಗಳು, ಇಂಡಸ್ಟ್ರೀ ಪ್ರಿನ್ಸಿಪಲ್, ಎವಿಪಿ, ವಿಪಿ ಮತ್ತು ಎಸ್ವಿಪಿಗಳು ಇದರಲ್ಲಿ ಸೇರಿದ್ದಾರೆ.
1300 ಸಿಬ್ಬಂದಿಯ ಮೇಲೆ ಪರಿಣಾಮ
ಜಾಬ್ ಲೆವೆಲ್ 7 ಮತ್ತು ಅದರ ಮೇಲಿನ ಹಂತದ ಸಿಬ್ಬಂದಿ ಇನ್ಪೋಸಿಸ್ನಲ್ಲಿ ಸುಮಾರು ೩೦ ಸಾವಿರ ಜನ ಇದ್ದಾರೆ. (ಜೆಲೆ್ 6, 7, 8) ಇದರಲ್ಲಿ 10 ರಿಂದ 15 ರಷ್ಟು ಸಿಬ್ಬಂದಿಯನ್ನು ವಿವಿಧ ಶ್ರೇಣಿಗಳಲ್ಲಿ ಪುನರ್ ವಿಂಗಡಿಸಲಾಗುತ್ತದೆ. ಇದರಿಂದ 1300 ಸಿಬ್ಬಂದಿಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ ಈಗಿರುವ ಶ್ರೇಣಿಗಳಲ್ಲಿ ಅದಲು ಬದಲಾಗಲಿವೆ.
ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿಲ್ಲ
ಇನ್ಪೋಸಿಸ್ ತನ್ನ ಕೆಲಸದ ಸ್ಥಳದಲ್ಲಿ ತ್ವರಿತ ನಿರ್ಣಯ ತೆಗೆದುಕೊಳ್ಳುವಿಕೆಯ ಸಲುವಾಗಿ ಈ ಬದಲಾವಣೆಗೆ ಮುಂದಾಗಿದೆ. ಕೋವಿಡ್ನಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ಇನ್ಪೋಸಿಸ್ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿಲ್ಲ ಎಂದು ವರದಿ ಹೇಳಿದೆ.
ಇನ್ಪೋಸಿಸ್ ಗೆ ಹೊಸ ಹುರುಪು
ಕೆಲಸದ ಶ್ರೇಣಿಯಲ್ಲಿ ಕೆಲವು ಹೆಚ್ಚು ಎನ್ನುವಂತಹ ಅಡೆತಡೆಗಳು ಕಂಡು ಬಂದಿರುವುದರಿಂದ ಈ ಬದಲಾವಣೆಗೆ ಇನ್ಪೋಸಿಸ್ ಮುಂದಾಗಿದೆ. ಒಟ್ಟಿನಲ್ಲಿ ಸಿಬ್ಬಂದಿಯ ಕೆಲಸದ ಶ್ರೇಣಿಯಲ್ಲಿನ ಪುನರ್ರಚನೆ ಇನ್ಪೋಸಿಸ್ ಗೆ ಹೊಸ ಹುರುಪು ನೀಡುವಂತಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications