ಐಫೋನ್ 11 ಸರಣಿಯು ನೀರಿನೊಳಗೆ ಬಿದ್ದರೂ ಏನಾಗುವುದಿಲ್ಲ, ನೀರು ನಿರೋಧಕವಾಗಿದೆ ಎಂದು ಆ್ಯಪಲ್ ಕಂಪನಿ ಹೇಳಿದಾಗ ಅನೇಕರು ನಂಬಿದ್ದರು. ಆದರೆ 30 ದಿನಗಳವರೆಗೆ ನೀರಿನ ಒಳಗಿದ್ದರೂ ಅದು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಅಂದರೆ ನಂಬಲು ಕಷ್ಟಸಾಧ್ಯ.
50 ವರ್ಷದ ಕೆನಡಾದ ಮಹಿಳೆ ಎಂಜಿ ಕ್ಯಾರಿಯರ್ ತನ್ನ ಜನ್ಮದಿನವನ್ನು ಆಚರಿಸಲು ಮೀನುಗಾರಿಕೆಗೆ ತೆರಳಿದ್ದಳು. ಕೆನಡಾದ ಸಾಸ್ಕಾಚೆವನ್ನ ವಾಸ್ಕ್ವೆಜ್ ಸರೋವರದಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ತನ್ನ ಐಫೋನ್ 11 ಅನ್ನು ಸರೋವರದಲ್ಲಿ ಬೀಳಿಸಿಕೊಂಡಳು. ಬಲವಾದ ಗಾಳಿಯಿಂದಾಗಿ ತನ್ನ ಫೋನ್ ಅನ್ನು ಕೈ ಜಾರಿ ನೀರಿಗೆ ಬೀಳಿಸಿಕೊಂಡು ನಿರಾಸೆಯಿಂದ ಮನೆಗೆ ಹಿಂದಿರುಗಿದ್ದಳು.

ತನ್ನ ಫೋನ್ ಮತ್ತೆ ಸಿಗುತ್ತೆ ಅನ್ನುವ ಯಾವುದೇ ಭರವಸೆಯಿಲ್ಲದೆ ಆಕೆ ಮನೆಗೆ ಮರಳಿದ್ದಳು. ಆದರೆ ಆ ಫೋನ್ನಲ್ಲಿ ತನ್ನೆಲ್ಲಾ ಪ್ರಮುಖ ಫೋಟೊಗಳು ಇದ್ದ ಕಾರಣ ಹೇಗಾದರೂ ಮಾಡಿ ಹುಡುಕಲೇ ಬೇಕೆಂದು ನಿಶ್ಚಯಿಸಿದರು. ಸರೋವರದಲ್ಲಿ ಐಫೋನ್ಗಾಗಿ ಹುಡುಕಾಟ ಶುರು ಮಾಡಿದಳು. ಇದಕ್ಕಾಗಿ ಮೀನು ಶೋಧಕರನ್ನು ಬಳಸಿಕೊಂಡು ಎರಡು ಗಂಟೆಗಳ ಕಾಲ ಹುಡುಕಿದರು ಮತ್ತು ಮ್ಯಾಗ್ನೆಟ್ ಸಹಾಯದಿಂದ ತನ್ನ ಫೋನ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಆದ್ರೆ ಆಕೆಯ ಐಫೋನ್ ಮತ್ತೆ ಕಾರ್ಯ ನಿರ್ವಹಿಸುತ್ತದೆ ಎಂಬ ಯಾವುದೇ ನಂಬಿಕೆ ಇರಲಿಲ್ಲ. ಆದ್ರೂ ಸಹ 30 ದಿನಗಳ ಕಾಲ ಫೋನ್ ಸರೋವರದಲ್ಲಿ ಮುಳುಗಿದ್ದರೂ ಅದು ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾಳೆ.
ಆದಾಗ್ಯೂ, ಐಫೋನ್ ಈ ರೀತಿ ಆಗಿರುವುದು ಇದೇ ಮೊದಲಲ್ಲ, ಈ ತಿಂಗಳ ಆರಂಭದಲ್ಲಿ ಆರು ತಿಂಗಳ ಕಾಲ ಐಫೋನ್ 11 ನೀರೊಳಗಿದ್ದರೂ ಪುನಃ ಕಾರ್ಯ ನಿರ್ವಹಿಸಿದ್ದರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.
ಐಫೋನ್ 11 ಪ್ರೊ ಮತ್ತು 11 ಪ್ರೊ ಮ್ಯಾಕ್ಸ್ 13 ಅಡಿಯೊಳಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೀರು-ನಿರೋಧಕವಾಗಿದೆ ಎಂದು ಕೇಳಿದ್ದೇವೆ. ಆದರೆ ಇದು 30 ದಿನಗಳವರೆಗೆ ನೀರೊಳಗಿದ್ದರೂ ಏನು ಆಗಿಲ್ಲ ಎಂಬುದು ಆಶ್ಚರ್ಯ ಮೂಡಿಸಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications