ಭಾರತವು 21 ದಿನಗಳ ಕಾಲ ಲಾಕ್ಡೌನ್ ಆಗಿದ್ದು, ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯು ಬಂದ್ ಆಗಿದೆ. ಹೀಗಿದ್ರೆ ಮುಂದೆ ಪೆಟ್ರೋಲ್, ಡೀಸೆಲ್ ಗತಿ ಏನು? ಪೂರೈಕೆ ಇರುತ್ತಾ ಇಲ್ವಾ ಎಂಬ ಆತಂಕ ಬೇಡ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಹೇಳಿದೆ.
ಈಗಾಗಲೇ ಪ್ರಧಾನಿಯವರು ಉಜ್ವಲ್ ಫಲಾನುಭವಿಗಳಿಗೆ ಮೂರು ತಿಂಗಳಿಗೆ ಉಚಿತವಾಗಿ ಎಲ್ಪಿಜಿ ವ್ಯವಸ್ಥೆ ಮಾಡಿದ್ದಾರೆ. ಜನರು ಗಾಬರಿಗೊಳ್ಳುವ ಅಗತ್ಯವೇ ಇಲ್ಲ. ಪೆಟ್ರೋಲ್, ಡೀಸೆಲ್ ಹಾಗೂ ಡೀಸೆಲ್ ಸಾಕಾಗುವಷ್ಟು ಇದೆ ಎಂದು ಐಒಸಿ ಹೇಳಿದೆ.
ಏಪ್ರಿಲ್ ತಿಂಗಳಿಗೆ ಆಗುವಷ್ಟು ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸಂಗ್ರಹ
ಲಾಕ್ಡೌನ್ ಇದ್ದರೂ, ದೇಶದಲ್ಲಿ ತೈಲದ ಕೊರತೆ ಬೀಳುವುದಿಲ್ಲ. ಏಪ್ರಿಲ್ ತಿಂಗಳವರೆಗೆ ಆಗುವಷ್ಟು ಪೆಟ್ರೋಲ್, ಡೀಸೆಲ್, ಎಲ್ಪಿಜಿಯನ್ನು ಭಾರತ ಈಗಾಗಲೇ ಸಂಗ್ರಹಿಸಿದೆ ಎಂದು ಐಒಸಿ ಚೇರ್ಮನ್ ಸಂಜೀವ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸಮರೋಪಾದಿಯಲ್ಲಿ ಇಂಧನ ಸಾಗಾಣೆ
ದೇಶದ ಮೂಲೆ ಮೂಲೆಗಳಿಗೆ ಇಂಧನ ತೈಲ ರವಾನಿಸಲು ಸಮರೋಪಾದಿಯಲ್ಲಿ ಕೆಲಸ ಸಾಗಿದೆ. ಈಗಾಗಲೇ ಏಪ್ರಿಲ್ನ ಬೇಡಿಕೆಗೆ ಆಗುವಷ್ಟು ಇಂಧನ ತೈಲ ರವಾನೆಯಾಗಿದೆ. ಗ್ಯಾಸ್ ಬುಕ್ಕಿಂಗ್ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದಿದ್ದಾರೆ.
ಬೃಹತ್ ಸಂಗ್ರಹಕಾರ ಕೇಂದ್ರಗಳು, ಎಲ್ಪಿಜಿ ಹಂಚಿಕೆದಾರರು, ಪೆಟ್ರೋಲ್ ಬಂಕ್ಗಳಿಗೆ ಇಂಧನ ತೈಲ ಪೂರೈಸಿಯೂ, ಸಾಕಷ್ಟು ಸಂಗ್ರಹವನ್ನು ತುರ್ತು ಸೇವೆಗೆ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.
ಪೆಟ್ರೋಲ್ ಬೇಡಿಕೆ 8 ಪರ್ಸೆಂಟ್ ಇಳಿಕೆ
ಮಾರ್ಚ್ ತಿಂಗಳಿನಿಲ್ಲಿ ಹೆಚ್ಚು ಕಾರು ಬೈಕ್ಗಳು ರಸ್ತೆಗಿಳಿಯದೇ ಇರುವುದರಿಂದ ಪೆಟ್ರೋಲ್ ಬೇಡಿಕೆ 8 ಪರ್ಸೆಂಟ್ ಇಳಿಕೆಯಾಗಿದೆ. ಡೀಸೆಲ್ ಬೇಡಿಕೆ 16ರಷ್ಟು ಕಡಿಮೆಯಾಗಿದೆ ಮತ್ತು ವೈಮಾನಿಕ ಇಂಧನದ ಬೇಡಿಕೆ 20 ಪರ್ಸೆಂಟ್ ಕುಸಿದಿದೆ.
ಗಾಬರಿಗೊಂಡು ಎಲ್ಪಿಜಿ ಸಿಲಿಂಡರ್ ಬುಕ್ ಮಾಡದಿರಿ
ಅನೇಕರು ತಮ್ಮ ಬಳಿಕ ಸಿಲಿಂಡರ್ ಇದ್ದರೂ, ಗಾಬರಿಗೊಂಡು ಎಲ್ಲಿ ಸಿಗುವುದಿಲ್ಲವೋ ಎಂದು ಬುಕ್ ಮಾಡುತ್ತಿದ್ದಾರೆ. ಅರ್ಧ ಸಿಲಿಂಡರ್ ಖಾಲಿಯಿದ್ದರೂ ಬುಕ್ ಮಾಡುತ್ತಿದ್ದಾರೆ. ಡಬಲ್ ಸಿಲಿಂಡರ್ ಸಂಪರ್ಕ ಹೊಂದಿರುವ ಗ್ರಾಹಕರು ಸಹ ಒಂದು ಸಿಲಿಂಡರ್ ಸಹ ಖಾಲಿಯಾಗದೆ ರೀ ಫಿಲ್ಲಿಂಗ್ ಬುಕ್ ಮಾಡುತ್ತಿದ್ದಾರೆ.
ಆದರೆ ಈ ರೀತಿಯಾಗಿ ಗಾಬರಿಗೊಂಡು ಬುಕಿಂಗ್ ಅಗತ್ಯವಿಲ್ಲ ಎಲ್ಲಾ ಬೇಡಿಕೆಯನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ಸಂಗ್ರಹವಿದೆ ಎಂದು ಐಒಸಿ ಹೇಳಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications