ಕೊರೊನಾವೈರಸ್ನಿಂದ ಉಂಟಾದ ಸುದೀರ್ಘ ಲಾಕ್ಡೌನ್ ನಂತರ ಆರ್ಥಿಕ ಚಟುವಟಿಕೆಗಳು ತೆರೆಯುತ್ತಿದ್ದಂತೆ, ವಿಶೇಷವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಕೆಲವು ಹಸಿರು ಚಿಗುರುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.
ಒಟ್ಟಾರೆ ನೇಮಕಾತಿ ಚಟುವಟಿಕೆ ಜೂನ್ನಲ್ಲಿ ಶೇ 33 ರಷ್ಟು ಹೆಚ್ಚಾಗಿದೆ. ನೌಕ್ರಿ ಜಾಬ್ಸ್ಪೀಕ್ ವರದಿಯ ಪ್ರಕಾರ ಕಠಿಣ ಉದ್ಯೋಗ ಮಾರುಕಟ್ಟೆಯ ಮಧ್ಯೆ ಆರು ಪ್ರಮುಖ ಕೈಗಾರಿಕೆಗಳಲ್ಲಿ ನೇಮಕ ಚಟುವಟಿಕೆಯು ವೇಗವನ್ನು ಪಡೆದುಕೊಂಡಿದೆ.
ಇದು ಮಾಸಿಕ ಸೂಚ್ಯಂಕವಾಗಿದ್ದು, ನೌಕ್ರಿ.ಕಾಮ್ ವೆಬ್ಸೈಟ್ ತಿಂಗಳಲ್ಲಿ ಉದ್ಯೋಗ ಪಟ್ಟಿಗಳ ಆಧಾರದ ಮೇಲೆ ನೇಮಕ ಚಟುವಟಿಕೆಯನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ದಾಖಲಿಸುತ್ತದೆ.
ಫಾರ್ಮಾ ವಲಯ ಮುಂದಿದೆ
ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ಫಾರ್ಮಾ ವಲಯವು ನೇಮಕ ಚಟುವಟಿಕೆಯಲ್ಲಿ ಮುಂದಿದೆ. ಮೇ ಗೆ ಹೋಲಿಸಿದರೆ ಜೂನ್ನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ವಲಯವು ಶೇಕಡಾ 27 ರಷ್ಟು ಗಣನೀಯ ಸುಧಾರಣೆ ಕಂಡಿದೆ.
ಐಟಿ ಕ್ಷೇತ್ರ
ಐಟಿ ಕ್ಷೇತ್ರವು ದೇಶದ ಪ್ರಮುಖ ಉದ್ಯೋಗ ಸೃಷ್ಟಿಕರ್ತರಾಗಿ ಒಟ್ಟಾರೆ ನೇಮಕ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕಳೆದ ವರ್ಷದಿಂದ ನೇಮಕಾತಿ ವಿಷಯದಲ್ಲಿ ಬಲವಾಗಿ ಬೆಳೆಯುತ್ತಿದ್ದ ಈ ವಲಯವು ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ವಿಷಯಕ್ಕೆ ಬಂದರೆ ಕಡಿಮೆ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ. ತ್ರೈಮಾಸಿಕದ ಕೊನೆಯ ತಿಂಗಳು ನೇಮಕಾತಿಯಲ್ಲಿ ಶೇಕಡಾ 19 ರಷ್ಟು ಅನುಕ್ರಮ ಏರಿಕೆ ಕಂಡಿದೆ. ದೆಹಲಿ-ಎನ್ಸಿಆರ್ ಮತ್ತು ಅಹಮದಾಬಾದ್ ಈ ವಲಯದ ಪುನರುಜ್ಜೀವನಕ್ಕೆ ಕಾರಣವಾದ ಎರಡು ನಗರಗಳು ಸಕಾರಾತ್ಮಕ ಅನುಕ್ರಮ ಬೆಳವಣಿಗೆಯನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.
ಚಿಲ್ಲರೆ ಉದ್ಯಮಕ್ಕೆ ದೊಡ್ಡ ಹೊಡೆತ
ನೌಕ್ರಿ.ಕಾಮ್ ಜಾಬ್ಸ್ಪೀಕ್ ವರದಿಯ ಪ್ರಕಾರ, ಸಾಂಕ್ರಾಮಿಕದ ಮಧ್ಯೆ ಹೆಚ್ಚು ಪ್ರಭಾವ ಬೀರಿದ ಮತ್ತೊಂದು ಉದ್ಯಮವೆಂದರೆ ಚಿಲ್ಲರೆ ಉದ್ಯಮ. ಈ ವಲಯವು ತಿಂಗಳಲ್ಲಿ ನೇಮಕಾತಿಯಲ್ಲಿ ಶೇಕಡಾ 77 ರಷ್ಟು ವೇಗವನ್ನು ಪಡೆದುಕೊಂಡಿದೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.
ಆಟೋ ಉದ್ಯಮ
ಉತ್ಪಾದನೆಯಿಂದ ಕಚ್ಚಾ ವಸ್ತುಗಳ ರಫ್ತು, ಆಮದುವರೆಗೆ ಅನೇಕ ತೊಡರುಗಳ ವಿರುದ್ಧ ಹೋರಾಡಿದ ಈ ಉದ್ಯಮವು ಜೂನ್ನಲ್ಲಿ ನೇಮಕ ಚಟುವಟಿಕೆಯಲ್ಲಿ ತಿಂಗಳಿಗೆ ಶೇಕಡಾ 77 ರಷ್ಟು ಬೆಳವಣಿಗೆಯನ್ನು ಕಂಡಿತು. ಬೆಳವಣಿಗೆಗೆ ಕಾರಣವಾದ ನಗರಗಳು ಪುಣೆ ಮತ್ತು ಬೆಂಗಳೂರು ಎಂದು ವರದಿ ತಿಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications