ಕೊರೊನಾವೈರಸ್ ಸೋಂಕು ತಡೆಯಲು ಇಡೀ ಜಗತ್ತು ಕಠಿಣ ಲಾಕ್ಡೌನ್ ತಂತ್ರದ ಮೊರೆ ಹೋಗಿ, ವಿಶ್ವವೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದರೂ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮಾತ್ರ ತಲೆಕೆಡಿಸಿಕೊಂಡಿಲ್ಲ. ಕೆಲವೇ ತಿಂಗಳುಗಳಲ್ಲಿ, ಅಂಬಾನಿ ತನ್ನ ಜಿಯೋ ಡಿಜಿಟಲ್ ಪ್ಲಾಟ್ಫಾರ್ಮ್ ವ್ಯವಹಾರಕ್ಕಾಗಿ 10 ಶತಕೋಟಿ ಡಾಲರ್ಗಿಂತಳೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದಾರೆ.
ಇತ್ತೀಚಿನ ಹಣ ಹೂಡಿಕೆದಾರರು
ಇತ್ತೀಚೆಗಷ್ಟೇ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದ ಜಿಯೋ ಪ್ಲಾಟ್ ಫಾರ್ಮ್ ಲಿಮಿಟೆಡ್ ನಲ್ಲಿ ಕೆಕೆಆರ್ 2.32 ಪರ್ಸೆಂಟ್ ಪಾಲು ಖರೀದಿ ಮಾಡಲಿದ್ದು, ಅದಕ್ಕಾಗಿ 11,367 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ ಎಂದು ಘೋಷಣೆ ಮಾಡಿದೆ. ಈ ವ್ಯವಹಾರದ ಮೂಲಕ ಜಿಯೋ ಪ್ಲಾಟ್ ಫಾರ್ಮ್ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ಹಾಗೂ ಎಂಟರ್ ಪ್ರೈಸ್ ಮೌಲ್ಯ 5.16 ಲಕ್ಷ ಕೋಟಿ ರುಪಾಯಿ ಆಗುತ್ತದೆ.
ಏಷ್ಯಾದಲ್ಲಿ ಕೆಕೆಆರ್ ಮಾಡುತ್ತಿರುವ ಅತಿದೊಡ್ಡ ಹೂಡಿಕೆ ಇದಾಗಿದೆ. ಕಳೆದ ತಿಂಗಳಿಂದ ಈಚೆಗೆ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್ ಸೇರಿ ಸರಾಸರಿ 78,562 ಕೋಟಿ ರುಪಾಯಿಯನ್ನು ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿವೆ.
ಸಾಲ ನಿವಾರಿಸುವ ಗುರಿ
ಇತ್ತೀಚಿನ ಷೇರು ಮಾರಾಟವು ಮಾರ್ಚ್ 2021 ರ ಮೊದಲು ತೈಲ, ಚಿಲ್ಲರೆ ಮತ್ತು ದೂರಸಂಪರ್ಕ ಗುಂಪಿನಲ್ಲಿ 20 ಬಿಲಿಯನ್ ಡಾಲವನ್ನು ಸಾಲವನ್ನು ಶೂನ್ಯಗೊಳಿಸುವ ಪ್ರಯತ್ನದ ಒಂದು ಭಾಗವಾಗಿದೆ. ಅಂಬಾನಿಯ ಯೋಜನೆಗಳನ್ನು ಹೆಚ್ಚಿಸಲು ಫೇಸ್ಬುಕ್, ಸಿಲ್ವರ್ ಲೇಕ್ ಮತ್ತು ಜನರಲ್ ಅಟ್ಲಾಂಟಿಕ್ ಇತ್ತೀಚೆಗೆ ಕಂಪನಿಯಲ್ಲಿ ಹೂಡಿಕೆ ಮಾಡಿವೆ.
ಒಪ್ಪಂದದ ನಗದು ಹರಿವು ಆರ್ಐಎಲ್ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಮಾರ್ಚ್ 2021 ರ ವೇಳೆಗೆ ಶೂನ್ಯ ನಿವ್ವಳ ಸಾಲವನ್ನು ಸಾಧಿಸುವ ಗುರಿಯತ್ತ ಸಾಗಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಅಂಬಾನಿಯ ಯಶಸ್ವಿ ಹೆಜ್ಜೆ
ಕೊರೊನಾವೈರಸ್ ಅನಿಶ್ಚಿತತೆಯು ದೊಡ್ಡ ಅನುಭವಿ ಉದ್ಯಮಿ ಅಂಬಾನಿಯ ಜಿಯೋ ಕಂಪನಿಗೆ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹೂಡಿಕೆದಾರರು ಅಪಾಯಗಳನ್ನು ತಪ್ಪಿಸಲು ತೆಗೆದುಕೊಳ್ಳುವ ನಿರ್ಧಾರ ಗಮನಾರ್ಹವಾಗಿದೆ. ಜಿಯೋನ ಸುಮಾರು 400 ಮಿಲಿಯನ್ ಫೋನ್ ಬಳಕೆದಾರರು ಅಂಬಾನಿಗೆ ಶಕ್ತಿ ತುಂಬಿದ್ದಾರೆ.
2016 ರಲ್ಲಿ ಪ್ರಾರಂಭವಾದ ರಿಲಯನ್ಸ್ ಜಿಯೋ ಈಗ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಜಿಯೋ ದೇಶಾದ್ಯಂತ 4 ಜಿ ನೆಟ್ವರ್ಕ್ ಅನ್ನು ಪ್ರಾರಂಭಿಸಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರಿಗೆ ಅಗ್ಗದ ದರದಲ್ಲಿ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತಿರುವುದರಿಂದ ಇತರೆ ಕಂಪನಿಗಳಿಗೆ ಜಿಯೋ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications