400 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಿರುವ ಕಿಶೋರ್ ವಾಧ್ವಾನಿ ಎಂಬಾತನನ್ನು ಸೋಮವಾರ ತಡ ರಾತ್ರಿ ಮುಂಬೈನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಂಧಿಸಲಾಗಿದೆ. ಅಲ್ಲಿಂದ ಇಂದೋರ್ ಗೆ ಕರೆತರಲಾಗಿದೆ. ಆತನನ್ನು ಮಂಗಳವಾರ ಇಂದೋರ್ ಕೋರ್ಟ್ ಎದುರು ಹಾಜರು ಪಡಿಸುವ ನಿರೀಕ್ಷೆ ಇದೆ.
ಜಿಎಸ್ ಟಿ ಗುಪ್ತಚರ ವಿಭಾಗ ಹಾಗೂ ಕಂದಾಯ ಗುಪ್ತಚರ ವಿಭಾಗದಿಂದ ಕಳೆದ ಹದಿನೈದು ದಿನಗಳಿಂದ ಬಹು ಹಂತದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಮೂವರನ್ನು ಈ ಸಂಬಂಧವಾಗಿ ಬಂಧಿಸಿದ್ದು, ಭಾನುವಾರದ ತನಕ (ಜೂನ್ 14, 2020) 400 ಕೋಟಿ ರುಪಾಯಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.
ಈ ಕಾರ್ಯಾಚರಣೆ ವೇಳೆಯಲ್ಲಿ ತನಿಖಾ ತಂಡವು ಹದಿನೈದು ಮಷೀನ್ ಗಳು ಹಾಗೂ ಏಳು ಟ್ರಕ್ ವಶಪಡಿಸಿಕೊಂಡಿವೆ. ಸೋಮವಾರ ತಡರಾತ್ರಿ ನಂತರವೂ ಇಂದೋರ್ ನಲ್ಲಿ ಶೋಧ ಮುಂದುವರಿದಿತ್ತು.
ಕಾನೂನು ಬಾಹಿರವಾಗಿ ಪಾನ್ ಮಸಾಲ ಮಾರಾಟ
ಇದಕ್ಕೆ ಆಪರೇಷನ್ ಕರ್ಕ ಎಂದು ಹೆಸರಿಡಲಾಗಿತ್ತು. ಅದಕ್ಕೆ ಕಾರಣ ಏನೆಂದರೆ, ಬಾಯಿ ಕಾನ್ಸರ್ ಗೆ ಕಾರಣ ಆಗುವ ತಂಬಾಕು ಹಾಗೂ ಗುಟ್ಕಾ ಸೇವನೆಗೆ ಸಂಬಂಧಿಸಿದ ಹಗರಣ ಇದಾಗಿತ್ತು. ಮೂರು ಪ್ರತ್ಯೇಕ ಗುಂಪುಗಳು ಇದರಲ್ಲಿ ಭಾಗಿಯಾಗಿದ್ದವು. ಕಾನೂನುಬಾಹಿರವಾಗಿ ಪಾನ್ ಮಸಾಲ/ತಂಬಾಕು ಉತ್ಪಾದನೆ ಮತ್ತು ಅಘೋಷಿತ ಪೂರೈಕೆ, ಮಾರಾಟದಲ್ಲಿ ತೊಡಗಿದ್ದವು. ಜಿಎಸ್ ಟಿ ಪಾವತಿ ಮಾಡದೆ ದಂಧೆಯಲ್ಲಿ ತೊಡಗಿದ್ದವು ಎಂದು ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ. ಈ ಕಾರ್ಯಾಚರಣೆಯ ಮೊದಲ ಹಂತವು ಮೇ 30ನೇ ತಾರೀಕು ಆರಂಭವಾಗಿದೆ. ಅದರಡಿಯಲ್ಲಿ ಸಂಜಯ್ ನನ್ನು ಜೂನ್ 3ನೇ ತಾರೀಕು ಬಂಧಿಸಲಾಗಿದೆ. ಎರಡನೇ ಹಂತದಲ್ಲಿ ನಗರದ ಹದಿನಾರು ಸ್ಥಳಗಳಲ್ಲಿ ಜೂನ್ 9ರಿಂದ 12ರ ಮಧ್ಯೆ ಶೋಧ ನಡೆಸಲಾಗಿದೆ. 225 ಕೋಟಿ ರುಪಾಯಿಯಷ್ಟು ತೆರಿಗೆ ಕಟ್ಟದಿರುವುದು ಎರಡನೇ ಹಂತದ ಕಾರ್ಯಾಚರಣೆಯ ಕೊನೆಗೆ ಕೇಂದ್ರ ಜಿಎಸ್ ಟಿ ಗುಪ್ತಚರ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಪಾಕಿಸ್ತಾನದ ಪಾಸ್ ಪೋರ್ಟ್, ನಂಟು
ಈ ಹಗರಣದ ಮಾಸ್ಟರ್ ಮೈಂಡ್ ಗಳು ಎಂಟು ಕಂಪೆನಿಗಳನ್ನು ಮಾಡಿಕೊಂಡಿದ್ದರು. ರಿಯಲ್ ಎಸ್ಟೇಟ್, ಹೋಟೆಲ್, ಮಾಧ್ಯಮ ಹೀಗೆ. ಅದು ಕಾನೂನು ಬಾಹಿರವಾಗಿ ತಂಬಾಕು- ಗುಟ್ಕಾ ಮಾರಿದ ಹಣದಿಂದ ದೊಡ್ಡ ಉದ್ಯಮ ಸಾಮ್ರಾಜ್ಯ ಮಾಡಿಕೊಂಡಿದ್ದರು. ಇದರಲ್ಲಿ ಸಂಜಯ್ ಗೆ ಪಾಕಿಸ್ತಾನದ ವ್ಯಕ್ತಿಯೊಂದಿಗೆ ನಂಟು ಇರುವುದು ಕಂಡುಬಂದಿದೆ. ಇನ್ನೂ ಆಸಕ್ತಿಕರ ಸಂಗತಿ ಏನೆಂದರೆ, ಆತನ ಬಳಿ ಪಾಕಿಸ್ತಾನದ ಪಾಸ್ ಪೋರ್ಟ್ ಸಹ ಸಿಕ್ಕಿದೆ. ಆಪರೇಷನ್ ಕರ್ಕದ ಮೊದಲ ಹಂತದಲ್ಲಿ ಸಿಕ್ಕಿ ಬಿದ್ದವನೇ ಸಂಜಯ್. ಆ ನಂತರ ಅಧಿಕಾರಿಗಳು ಸಂಜಯ್ ಗೆ ಸೇರಿದ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಆತನ ಸೋದರ ಸಂದೀಪ್ ತಲೆ ತಪ್ಪಿಸಿಕೊಂಡಿದ್ದಾನೆ. ಪಾಕಿಸ್ತಾನದ ವ್ಯಕ್ತಿಯೊಂದಿಗೆ ಸುದೀರ್ಘ ಅವಧಿಗೆ ಫೋನ್ ನಲ್ಲಿ ಸಂಜಯ್ ಮಾತನಾಡಿರುವುದಕ್ಕೆ ದಾಖಲೆಗಳು ಪತ್ತೆಯಾಗಿವೆ. ಶೋಧದ ವೇಳೆ ಅಘೋಷಿತ ಗೋದಾಮುಗಳು ಹಾಗೂ ವಸತಿ ಸ್ಥಳಗಳು ಪತ್ತೆಯಾಗಿವೆ.
ಲಾಕ್ ಡೌನ್ ಅವಧಿಯಲ್ಲೂ ಪೂರೈಕೆ, ಮಾರಾಟ
ಪಾನ್ ಮಸಾಲ ವ್ಯವಹಾರವನ್ನು ವಿಜಯ್ ನಾಯರ್ ಎಂಬುವವರು ನಡೆಸುತ್ತಿದ್ದರು. ಆದರೆ ಕಂಪೆನಿ ದೇಖ- ರೇಕಿಗಳನ್ನು ನೋಡುತ್ತಿದ್ದವರು ವಾಧ್ವಾನಿಯ ಸಂಬಂಧಿಕರು, ಆಪ್ತರು ಎಂಬುದು ಗೊತ್ತಾಗಿದೆ. ನಾಯರ್ ಬಂಧನದ ನಂತರ ಈ ಹಗರಣದ ಪ್ರಮುಖ ಸದಸ್ಯರ ಮಾಹಿತಿ ಸಿಕ್ಕಿದೆ. ಅಂದ ಹಾಗೆ ಈ ಆರೋಪಿಗಳು 2012ರಿಂದ ಈ ದಂಧೆ ನಡೆಸುತ್ತಿದ್ದಾರೆ. ಸದ್ಯದ ಪ್ರಾಥಮಿಕ ತನಿಖೆ ಪ್ರಕಾರ, ಜುಲೈ 2019ರಿಂದ 2020ರ ಮಾರ್ಚ್ ತನಕ ಜಿಎಸ್ ಟಿ ತಪ್ಪಿಸಿರುವ ಮೊತ್ತ 25 ಕೋಟಿ ರುಪಾಯಿ. ಆದರೆ ಒಟ್ಟಾರೆಯಾಗಿ ಸರ್ಕಾರಕ್ಕೆ ವಂಚನೆ ಮಾಡಿರುವುದು 400 ಕೋಟಿ ರುಪಾಯಿಯಷ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಇರುವಾಗಲೂ ಕಾನೂನು ಬಾಹಿರವಾಗಿ, ತುಂಬ ದೊಡ್ಡ ಪ್ರಮಾಣದಲ್ಲಿ ಈ ಗುಂಪು ಪಾನ್ ಮಸಾಲ/ತಂಬಾಕು ಪೂರೈಕೆ ಮತ್ತು ಮಾರಾಟ ಮಾಡಿದೆ ಎಂದು ಕೂಡ ಹೇಳಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications