ಏಪ್ರಿಲ್ 1ರಿಂದ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಆರ್ಬಿಐ ಈ ಹೊಸ ನಿಯಮದ ಕುರಿತು ನೀವು ತಿಳಿದುಕೊಳ್ಳುವುದು ಉತ್ತಮ. ಏಪ್ರಿಲ್ ತಿಂಗಳಿನಿಂದ ಮೊಬೈಲ್ ಫೋನ್ ಬಿಲ್ಗಳು, ಯುಟಿಲಿಟಿ ಬಿಲ್ಗಳು, ಇತರೆ ಚಂದಾದಾರಿಕೆ ಶುಲ್ಕಗಳು ಮತ್ತು ಬ್ಯಾಂಕುಗಳ ಸ್ವಯಂ ಡೆಬಿಟ್ ಸೌಲಭ್ಯಗಳಿಗೆ ಅಡಚಣೆಯಾಗಲಿದೆ.
ಈ ಹೊಸ ನಿಯಮವು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಅಷ್ಟೇ ಅಲ್ಲದೆ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ, ಟಾಟಾ ಪವರ್ ಮತ್ತು ಬಿಎಸ್ಇಎಸ್ ಮುಂತಾದ ಕಂಪನಿಗಳಿಗೂ ಸಹ ಪರಿಣಾಮ ಬೀರುತ್ತವೆ.
ಸ್ವಯಂ ಡೆಬಿಟ್ ಪಾವತಿ ವಿಫಲವಾಗುವ ಸಾಧ್ಯತೆ
ಅಂದರೆ ನೀವು ಸ್ವಯಂ ಡೆಬಿಟ್ ಪಾವತಿಯನ್ನು ಸೆಟ್ ಮಾಡಿದ್ದರೆ ಏಪ್ರಿಲ್ 1ರಿಂದ ಅದು ವಿಫಲವಾಗುವ ಸಾಧ್ಯತೆಯಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗಳಿಗಾಗಿ ಎಎಫ್ಎ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾರ್ಚ್ 31ರವರೆಗೆ ಗಡುವು ನೀಡಿತ್ತು. ಹೀಗಾಗಿ ಏಪ್ರಿಲ್ 1ರಿಂದ ಲಕ್ಷಾಂತರ ಗ್ರಾಹಕರಿಗೆ ಇದ್ರಿಂದ ತೊಂದರೆಯಾಗಲಿದೆ.
ಆರ್ಬಿಐ ನಿಯಮ ಪಾಲಿಸದ ಬ್ಯಾಂಕ್ಗಳು
ಈ ಮೊದಲೇ ಆರ್ಬಿಐ ವಿಧಿಸಿದ್ದ ನಿಯಮಗಳನ್ನು ಹೆಚ್ಚಿನ ಪ್ರಮುಖ ಬ್ಯಾಂಕುಗಳು ಪಾಲಿಸಿಲ್ಲ. ಈ ನಿರ್ಧಾರದಿಂದ ಎರಡು ಸಾವಿರ ಕೋಟಿ ಪೇಮೆಂಟ್ ಮೇಲೆ ಪರಿಣಾಮ ಬೀರಲಿದೆ. ಇವುಗಳಲ್ಲಿ ಮೊಬೈಲ್ ಬಿಲ್, ಯುಟಿಲಿಟಿ ಬಿಲ್, ಒಟಿಟಿ, ಮಾಧ್ಯಮ ಚಂದಾದಾರಿಕೆ ಸೇರಿದಂತೆ ಇತರ ಪಾವತಿಗಳ ಮೇಲೆ ಪರಿಣಾಮ ಬೀರಲಿದೆ.
ಗ್ರಾಹಕರಿಗೆ ಐದು ದಿನಗಳ ಮೊದಲೇ ನೋಟಿಫಿಕೇಶನ್ ಕಳುಹಿಸಬೇಕು
ಹೊಸ ನಿಯಮಗಳಿಂದಾಗಿ ಬ್ಯಾಂಕುಗಳು, ಕ್ರೆಡಿಟ್ ಕಾರ್ಡ್ ಸೇವಾ ಪೂರೈಕೆದಾರರು ಪಾವತಿಯನ್ನು ಕಡಿತಗೊಳಿಸಲು ಐದು ದಿನಗಳ ಮೊದಲೇ ಗ್ರಾಹಕರಿಗೆ ನೋಟಿಫಿಕೇಶನ್ ಕಳುಹಿಸಬೇಕಿದೆ. ನಂತರ ಈ ನೋಟಿಫಿಕೇಶನ್ ಮೂಲಕ ಗ್ರಾಹಕರು ಪಾವತಿಯನ್ನು ಅನುಮೋದಿಸಿದ ನಂತರವೇ ಡೆಬಿಟ್ಗೆ ಅವಕಾಶ ನೀಡಿದೆ.
5,000 ರೂ.ಗಿಂತ ಹೆಚ್ಚಿನ ಪಾವತಿಗೆ ಒಟಿಪಿ
ಆರಂಭದಲ್ಲಿ, 2,000 ರೂಪಾಯಿವರೆಗಿನ ಪಾವತಿಗಳಿಗೆ ಮಿತಿಗಳನ್ನು ಅಳವಡಿಸಲಾಗಿತ್ತು. ಆದರೆ 2020 ಡಿಸೆಂಬರ್ನಲ್ಲಿ ಮಧ್ಯಸ್ಥಗಾರರಿಂದ ಆರ್ಬಿಐ ಪಡೆದ ಮನವಿಗಳ ಆಧಾರದ ಮೇಲೆ ಈ ಮಿತಿಯನ್ನು 5,000 ರೂ. ಹೆಚ್ಚಿಸಲಾಗಿದೆ.
5,000 ರೂಪಾಯಿಗಿಂತ ಹೆಚ್ಚಿನ ಪೇಮೆಂಟ್ಗೆ ಬ್ಯಾಂಕುಗಳು ಗ್ರಾಹಕರಿಗೆ ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಅಗತ್ಯವಿರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications