ಸರ್ಕಾರಿ ಸ್ವಾಮ್ಯದ ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಗುರುವಾರ ಆರಂಭಿಕ ಷೇರು ಮಾರಾಟಕ್ಕೆ ದರ ನಿಗದಿ ಮಾಡಿದೆ. ಇನಿಷಿಯಲ್ ಷೇರು ಮಾರಾಟಕ್ಕೆ ರು. 93ರಿಂದ 94 ಎಂದು ನಿಗದಿ ಮಾಡಿದೆ. ಸಾರ್ವಜನಿಕರಿಗೆ ಸಬ್ ಸ್ಕ್ರಿಪ್ಷನ್ ಗಾಗಿ ಫೆಬ್ರವರಿ 16ರಿಂದ ಲಭ್ಯವಾಗುತ್ತದೆ. ಈ ಐಪಿಒ ಸಂಪೂರ್ಣವಾಗಿ ಆಫರ್ ಫಾರ್ ಸೇಲ್ (ಒಎಫ್ ಎಸ್) ಆಗಿರುತ್ತದೆ.
ಈ ಮೂಲಕ ಸರ್ಕಾರವು 87,153,369 ಈಕ್ವಿಟಿ ಷೇರುಗಳನ್ನು ಮಾರಲಿದೆ. ಇದು ಕಂಪೆನಿಯಲ್ಲಿನ ಒಟ್ಟು ಶೇಕಡಾ 27.16ರಷ್ಟು ಆಗುತ್ತದೆ ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. ಮೇಲ್ ಸ್ತರದ ದರದಲ್ಲಿ ಸರ್ಕಾರವು ರು. 819 ಕೋಟಿಗಿಂತ ಸ್ವಲ್ಪ ಹೆಚ್ಚು ಹಣವನ್ನು ಸಂಗ್ರಹ ಮಾಡಲಿದೆ.
ಮೂರು ದಿನಗಳ ಸಬ್ ಸ್ಕ್ರಿಪ್ಷನ್ ಫೆಬ್ರವರಿ 18ಕ್ಕೆ ಕೊನೆಯಾಗುತ್ತದೆ. ಆಂಕರ್ ಹೂಡಿಕೆದಾರರ ಪಾಲಿನ ಸಬ್ ಸ್ಕ್ರಿಪ್ಷನ್ ಫೆಬ್ರವರಿ 15ರಂದು ಶುರುವಾಗುತ್ತದೆ. ವಿತರಣೆಯ ಅರ್ಧದಷ್ಟು ಸಾಂಸ್ಥಿಕ ಖರೀದಿದಾರರು, 35% ರೀಟೇಲ್ ಹೂಡಿಕೆದಾರರಿಗೆ, 15 ಪರ್ಸೆಂಟ್ ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಾಗಿರುತ್ತದೆ.

ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮಿನಿ ರತ್ನ ಪಿಎಸ್ ಯು. ಅತಿ ದೊಡ್ಡ ನ್ಯೂಟ್ರಲ್ ಟೆಲಿಕಾಂ ಮೂಲಸೌಕರ್ಯ ಒದಗಿಸುವ ಅತಿ ದೊಡ್ಡ ಕಂಪೆನಿಗಳಲ್ಲಿ ಒಂದು.. ರೈಲ್ವೆ ಹಳಿ ಜತೆ ರೈಟ್ ಆಫ್ ವೇ (RoW) ದೇಶದ ಅತಿ ದೊಡ್ಡ ಆಪ್ಟಿಕ್ ಫೈಬರ್ ನೆಟ್ ವರ್ಕ್ ಹೊಂದಿದೆ.
ಜೂನ್ 30, 2020ಕ್ಕೆ ಆಪ್ಟಿಕ್ ಫೈಬರ್ ನೆಟ್ ವರ್ಕ್ 55,000 ಕಿ.ಮೀ. ಮತ್ತು 5677 ರೈಲು ನಿಲ್ದಾಣಗಳನ್ನು ಒಳಗೊಳ್ಳುತ್ತದೆ. ಅಂದ ಹಾಗೆ ಐಸಿಐಸಿಐ ಸೆಕ್ಯೂರಿಟೀಸ್, ಐಡಿಬಿಐ ಕ್ಯಾಪಿಟಲ್, ಎಸ್ ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಈ ಇಶ್ಯೂಗೆ ಮರ್ಚೆಂಟ್ ಬ್ಯಾಂಕರ್ ಗಳಾಗಿವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications