ಆರ್ಥಿಕತೆಗೆ ಹೊಡೆತ ಬಿದ್ದಿದೆ. ಆ ದೇಶಕ್ಕೆ ಕಷ್ಟವಾಗಿದೆ. ಭಾರತೀಯರಿಗೆ ಕೆಲಸ ಇಲ್ಲವಾಗಿದೆ. ಹೀಗೆ ಏನೇನೋ ಸಮಸ್ಯೆಗಳು ಹೇಳಿಕೊಳ್ಳುತ್ತಿದ್ದರೂ ಏಷ್ಯಾದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಮಾತ್ರ ತಮ್ಮ ಸಂಪತ್ತಿಗೆ ಇನ್ನಷ್ಟು ಸಂಪತ್ತು ಸೇರಿಸಿಕೊಂಡು, ಖುಷಿಯಾಗಿದ್ದಾರೆ. ನಿಮಗೆ ಗೊತ್ತಾ? ಈ ವರ್ಷ ಮುಕೇಶ್ ಅಂಬಾನಿ ಆಸ್ತಿಗೆ ಎಷ್ಟು ಸಂಪತ್ತು ಸೇರ್ಪಡೆಯಾಗಿದೆ.
ಅವರ ಸಂಪತ್ತು ಸುಮಾರು $17 ಬಿಲಿಯನ್ ನಷ್ಟು ಹೆಚ್ಚಳವಾಗಿದೆ. ಅದನ್ನು ಭಾರತೀಯ ರುಪಾಯಿಗಳಲ್ಲಿ ಹೇಳುವುದಾದರೆ, 1,19,000,000,000. ಲೆಕ್ಕ ಗೊತ್ತಾಯಿತಾ? ಈ ವರ್ಷದಲ್ಲೇ 1.19 ಲಕ್ಷ ಕೋಟಿ ರುಪಾಯಿ ಸಂಪತ್ತು ಹೆಚ್ಚಳವಾಗುವ ಮೂಲಕ ಅವರ ಒಟ್ಟಾರೆ ಸಂಪತ್ತು ಸುಮಾರು $61 ಬಿಲಿಯನ್ (ಭಾರತದ ರುಪಾಯಿ ಲೆಕ್ಕದಲ್ಲಿ 427,000,000,000) ಆಗಿದೆ. ಅಂದರೆ 4.27 ಲಕ್ಷ ಕೋಟಿ ರುಪಾಯಿ ತಲುಪಿದೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.
ಮುಕೇಶ್ ಅಂಬಾನಿಗೆ ಪೈಪೋಟಿ ನೀಡುತ್ತಿದ್ದ ಅಲಿಬಾಬಾ ಸಮೂಹದ ಸಂಸ್ಥಾಪಕ ಜಾಕ್ ಮಾ ಸಂಪತ್ತು $11.3 ಬಿಲಿಯನ್ ಏರಿಕೆಯಾಗಿದ್ದರೆ, ಜೆಫ್ ಬೆಜೋಸ್ ರ $ 13.3 ಬಿಲಿಯನ್ ನಷ್ಟು ಸಂಪತ್ತು ಕರಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಷೇರುಗಳು ಈ ವರ್ಷ ಶೇ 40ರಷ್ಟು ಏರಿಕೆಯಾಗಿದ್ದು, ಅಂಬಾನಿ ಸಂಪತ್ತಿನ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹೂಡಿಕೆದಾರರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಿಲಯನ್ಸ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಜತೆಗೆ ಅವರ ದೂರಸಂಪರ್ಕ ಸಂಹವನ ಮತ್ತು ರೀಟೇಲ್ ಉದ್ಯಮವೂ ಲಾಭದಾಯಕವಾಗಿದೆ.
ಇ-ಕಾಮರ್ಸ್ ಉದ್ಯಮ ಅಮೆಜಾನ್ ಗೆ ಸವಾಲೊಡ್ಡುವ ಸಲುವಾಗಿ ಭಾರತದ್ದೇ ಇ-ಕಾಮರ್ಸ್ ಆರಂಭಿಸಲು ಮುಕೇಶ್ ಅಂಬಾನಿ ಸಿದ್ಧತೆ ನಡೆಸಿದ್ದಾರೆ. ಅದರ ನಡುವೆಯೇ ಜಿಯೋ ಮೇಲೆ ಸುಮಾರು $50 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಮೂರು ವರ್ಷಗಳಲ್ಲಿಯೇ ದೇಶದ ನಂ.1 ಮೊಬೈಲ್ ಸೇವೆಯನ್ನಾಗಿ ಮಾಡಿದ್ದಾರೆ.
2016ರ ಅಂತ್ಯದ ಬಳಿಕ ರಿಲಯನ್ಸ್ ಷೇರು ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಕಾರಣ ಜಿಯೋ ನೆಟ್ವರ್ಕ್. 35 ಕೋಟಿ ಗ್ರಾಹಕರನ್ನು ಹೊಂದಿರುವ ಜಿಯೋ, ಸೆಪ್ಟೆಂಬರ್ ತ್ರೈಮಾಸಿಕದ ವೇಳೆಗೆ 996 ಕೋಟಿ ರುಪಾಯಿ ಒಟ್ಟಾರೆ ಆದಾಯವನ್ನು ಘೋಷಿಸಿಕೊಂಡಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications