ಭಾರತದ ಅತಿ ದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ನಾರ್ವೇಜಿಯನ್ ಸೋಲಾರ್ ಮಾಡ್ಯೂಲ್ ತಯಾರಕ ಆರ್ಇಸಿ ಗ್ರೂಪ್ ಬರೋಬ್ಬರಿ 1 ರಿಂದ 1.12 ಬಿಲಿಯನ್ ಡಾಲರ್ಗೆ ಖರೀದಿಸಲು ಮಾತುಕತೆ ನಡೆಸಿದ್ದಾರೆ.
ಚೀನಾ ನ್ಯಾಷನಲ್ ಕೆಮಿಕಲ್ ಕಾರ್ಪ್ (ಕೆಮ್ಚಿನಾ) ನಿಂದ ರಿಲಯನ್ಸ್ ಇಂಡಸ್ಟ್ರೀಸ್ 75,000 ಕೋಟಿ ರೂಪಾಯಿಗೆ ಸೌರಶಕ್ತಿಯ ಬಲ ಹೆಚ್ಚಿಸಲು ಖರೀದಿಗೆ ಮುಂದಾಗಿದೆ. ಈ ಡೀಲ್ ಕುರಿತಾಗಿ ಸುಮಾರು 500-600 ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸಲು ಜಾಗತಿಕ ಬ್ಯಾಂಕ್ಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಉಳಿದ ಹಣವನ್ನು ಈಕ್ವಿಟಿ ಮೂಲಕ ನೀಡಲಾಗುತ್ತದೆ.
ಇದಲ್ಲದೆ, ಈ ಸ್ವಾಧೀನವು ರಿಲಯನ್ಸ್ಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಉತ್ಪಾದನಾ ಸಾಮರ್ಥ್ಯಗಳನ್ನು ಪ್ರವೇಶಿಸಲು ಬಾಗಿಲು ತೆರೆಯುತ್ತದೆ, ಏಕೆಂದರೆ ಇದು ಸೌರಶಕ್ತಿ ಕ್ಷೇತ್ರಕ್ಕೆ ವಿಸ್ತರಿಸುವ ಯೋಜನೆಯನ್ನು ಮುಂದುವರಿಸುತ್ತಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

1996ರಲ್ಲಿ ಪ್ರಾರಂಭಗೊಂಡ ಆರ್ಇಸಿ ಗ್ರೂಪ್ ರಾಸಾಯನಿಕಗಳ ಪ್ರಮುಖ ಕೆಮ್ಚಿನಾ ಅಂತರಾಷ್ಟ್ರೀಯ ಮಂಡಳಿ ಸದಸ್ಯ ಕೂಡ ಆಗಿದ್ದು, ಪಿರೆಲ್ಲಿ ಟೈರ್ ಮತ್ತು ಸಿಂಜೆಂಟಾದಲ್ಲಿ ಅತಿದೊಡ್ಡ ಷೇರುದಾರನಾಗಿದೆ. ಆರ್ಇಸಿ ಗ್ರೂಪ್ ಸೌರ ದ್ಯುತಿವಿದ್ಯುಜ್ಜನಕ (PV) ಪ್ಯಾನಲ್ಗಳಿಗಾಗಿ ಯೂರೋಪ್ನಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದೆ. ವಾರ್ಷಿಕವಾಗಿ 1.8 ಗಿಗಾವಾಟ್ (GW) ಪ್ರಮಾಣದ ಸೋಲಾರ್ ಪ್ಯಾನಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಜಾಗತಿಕವಾಗಿ ಬರೋಬ್ಬರಿ 10GW ಸಾಮರ್ಥ್ಯವನ್ನು ಒದಗಿಸುವ ಶಕ್ತಿ ಇದೆ.
ಭಾರತ ಈಗಾಗಲೇ ಸೌರಶಕ್ತಿ ಬಳಕೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು, ಅದಾನಿ ಗ್ರೀನ್ ಕೂಡ ಬಹಳ ವೇಗವಾಗಿ ಬೆಳೆಯುತ್ತಿದೆ. 2022 ರ ವೇಳೆಗೆ 100GW ಸೋಲಾರ್ ಸೇರಿದಂತೆ 175GW ನವೀಕರಿಸಬಹುದಾದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಭಾರತ ಸಜ್ಜಾಗಿದೆ. ಪ್ರಸ್ತುತ, ಸೌರ ಸಲಕರಣೆ ಮಾರುಕಟ್ಟೆಯು ಬೀಜಿಂಗ್ ಮೂಲದ ಕಂಪನಿಗಳಾದ ಟ್ರಿನಾ ಸೋಲಾರ್ ಲಿಮಿಟೆಡ್, ಇಟಿ ಸೋಲಾರ್ ಮತ್ತು ಜಿಂಕೊ ಸಾಕಷ್ಟು ಪ್ರಾಬಲ್ಯವನ್ನು ಹೊಂದಿದೆ. ಸದ್ಯ ಭಾರತವು ಕೇವಲ 3GW ಸೋಲಾರ್ ಸೆಲ್ಸ್ ಮತ್ತು 15GW ಸೋಲಾರ್ ಮಾಡ್ಯುಲ್ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.
ಚೀನಾದ ಮೇಲೆ ಹೆಚ್ಚು ಅವಲಂಬನೆ:
ಸೋಲಾರ್ ಪ್ಯಾನೆಲ್ ಉತ್ಪಾದನೆ ಹಾಗೂ ಸಲಕರಣೆಗಳಿಗಾಗಿ ಭಾರತವು ಚೀನಾವನ್ನು ಹೆಚ್ಚು ಅವಲಂಬಿಸಿದೆ. ಏಕೆಂದರೆ ಪ್ರಪಂಚದ ಪಾಲಿಸಿಲಿಕಾನ್ ನ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಪೂರೈಕೆದಾರರು ಇಲ್ಲಿದ್ದಾರೆ. ಹೆಚ್ಚಿನ ಭಾರತದ ಸೋಲಾರ್ ಪ್ಯಾನೆಲ್ಗಳ ಅಗತ್ಯ ಸಲಕರಣೆಗಳು ಚೀನಾ ಮತ್ತು ಅಮೆರಿಕಾದಿಂದ ಪೂರೈಕೆ ಆಗುತ್ತದೆ.
ಬೆನ್ರೂಟರ್ ಸಂಶೋಧನಾ ವರದಿ ಪ್ರಕಾರ 2019 ರಲ್ಲಿ ಸೌರಶಕ್ತಿಯನ್ನು ವಿಶ್ವದ ಹೊಸ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಉನ್ನತ ಮೂಲವೆಂದು ಪರಿಗಣಿಸಲಾಗಿದೆ. ಸೌರ ಫಲಕಗಳನ್ನು ತಯಾರಿಸಲು ಉದ್ಯಮವು ಬಳಸಿದ ಪಾಲಿಸೈಲಿಕನ್ನ ಸುಮಾರು ಶೇಕಡಾ 33 ರಷ್ಟು ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಿಂದ ಬಂದಿದೆ.
More From GoodReturns

ಎಲ್ಲ ಹಣವನ್ನೂ ಒಂದೇ ಬ್ಯಾಂಕ್ನಲ್ಲಿ ಇಡ್ತಿದ್ದೀರಾ? ಒಂದು ತಪ್ಪು ನಿಮ್ಮ ಸಂಪೂರ್ಣ ಉಳಿತಾಯಕ್ಕೆ ಅಪಾಯ!

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications