ನವದೆಹಲಿ, ಜೂನ್ 23: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಖಾತೆದಾರರಿಗೆ, ಬರುವ ದಿನಗಳಲ್ಲಿ ಸಂಭವನೀಯ ಸೈಬರ್ ದಾಳಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ದಾಳಿಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿ ಎಸ್ಬಿಐ ಟ್ವೀಟ್ ಮಾಡಿದೆ. ಭಾರತದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಲಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ಎಸ್ಬಿಐ ಹೇಳಿದೆ.
ಉಚಿತ COVID-19 ಪರೀಕ್ಷೆಯ ವಿಷಯದೊಂದಿಗೆ [email protected] ನಿಂದ ಬರುವ ಇಮೇಲ್ಗಳನ್ನು ಕ್ಲಿಕ್ ಮಾಡುವುದರಿಂದ ದಯವಿಟ್ಟು ದೂರವಿರಿ ಎಂದು ಎಚ್ಚರಿಕೆಯ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡಿರುವುದು ಗ್ರಾಹಕರಲ್ಲಿ ಆತಂಕ ಹುಟ್ಟಿಹಾಕಿದೆ.
ಲಕ್ಷಾಂತರ ಭಾರತೀಯರನ್ನು ಗುರಿಯಾಗಿಸಬಹುದು
ಈ ಪ್ರಮುಖ ಸೈಬರ್ ದಾಳಿಯಲ್ಲಿ, ನಕಲಿ ಇಮೇಲ್ಗಳು, ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಅಥವಾ ಟೆಕ್ಸ್ಟ್ ಸಂದೇಶಗಳಿಂದ ಲಕ್ಷಾಂತರ ಭಾರತೀಯರನ್ನು ಗುರಿಯಾಗಿಸಬಹುದು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಭಾನುವಾರ ಎಚ್ಚರಿಸಿರುವ ಬೆನ್ನಲ್ಲೇ ಎಸ್ಬಿಐ ಈ ಮಹತ್ವದ ಹೇಳಿಕೆ ನೀಡಿದೆ.
20 ಲಕ್ಷ ಗ್ರಾಹಕರಿಗೆ ಎಸ್ಬಿಐ ಅಲರ್ಟ್ ಸಂದೇಶ
ಸುಮಾರು 20 ಲಕ್ಷ ಗ್ರಾಹಕರಿಗೆ ಎಸ್ಬಿಐ ಅಲರ್ಟ್ ಸಂದೇಶ ಕಳುಹಿಸಿದ್ದು, ಪ್ರಮುಖವಾಗಿ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಗ್ರಾಹಕರು ಗುರಿಯಾಗುವ ಸಾಧ್ಯತೆ ಇದೆ ಎಂದು ಎಸ್ಬಿಐ ಎಚ್ಚರಿಕೆ ನೀಡಿ ಸಂದೇಶ ರವಾನಿಸಿದೆ.
20 ಲಕ್ಷ ಗ್ರಾಹಕರಿಗೆ ಎಸ್ಬಿಐ ಅಲರ್ಟ್ ಸಂದೇಶ
ಸುಮಾರು 20 ಲಕ್ಷ ಗ್ರಾಹಕರಿಗೆ ಎಸ್ಬಿಐ ಅಲರ್ಟ್ ಸಂದೇಶ ಕಳುಹಿಸಿದ್ದು, ಪ್ರಮುಖವಾಗಿ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಗ್ರಾಹಕರು ಗುರಿಯಾಗುವ ಸಾಧ್ಯತೆ ಇದೆ ಎಂದು ಎಸ್ಬಿಐ ಎಚ್ಚರಿಕೆ ನೀಡಿ ಸಂದೇಶ ರವಾನಿಸಿದೆ.
ಇಮೇಲ್ಗಳನ್ನು ತೆರೆಯಬೇಡಿ
ಸೈಬರ್ ಅಪರಾಧಿಗಳು 20 ಲಕ್ಷ ನಾಗರಿಕರ ವೈಯಕ್ತಿ ಇಮೇಲ್ ಐಡಿಗಳನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ ಅಪೇಕ್ಷಿಸದ ಇಮೇಲ್ಗಳನ್ನು ತೆರೆಯಬೇಡಿ ಮತ್ತು ಅಪೇಕ್ಷಿಸದ ಇಮೇಲ್ನಲ್ಲಿರುವ URL ಅನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಎಂದು ಎಸ್ಬಿಐ ಎಚ್ಚರಿಕೆ ನೀಡಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications