ಉಬರ್ ಕಾರು ಚಾಲಕರು ಇನ್ಮುಂದೆ ಈಗಿನ ಗಳಿಕೆಗಿಂತ ಹೆಚ್ಚಿನ ಹಣ ಮಾಡಬಹುದು. ಅದೇ ಹೇಗೆ ಎಂದು ನೀವು ಅಂದುಕೊಳ್ಳಬಹುದು, ಉಬರ್ ಕಂಪನಿಯು ಕಾರು ಚಾಲಕರಿಗೆ ಹೆಚ್ಚಿನ ಹಣದ ಮೂಲವನ್ನು ಹುಡುಕಿಕೊಡಲಿದ್ದಾರೆ.
ಉಬರ್ ಇಂಡಿಯಾ ಎಸ್ಎ ಕಂಪನಿಯು ಜಾಹೀರಾತುದಾರ ಕಂಪನಿ ಕ್ಯಾಶ್ ಯುವರ್ ಡ್ರೈವ್ (CASHurDrive) ಮಾರ್ಕೆಂಟಿಗ್ ಸಹಭಾಗಿತ್ವದಲ್ಲಿ ತನ್ನ ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯದ ಅವಕಾಶಗಳನ್ನು ಒದಗಿಸುತ್ತದೆ ಎಂದು ಎರಡೂ ಕಂಪನಿಗಳು ಶುಕ್ರವಾರ ತಿಳಿಸಿವೆ.

ಅಂದರೆ ಪಾಲುದಾರಿಕೆಯ ಭಾಗವಾಗಿ, 30 ಕ್ಕೂ ಹೆಚ್ಚು ನಗರಗಳಲ್ಲಿನ ಉಬರ್ ಚಾಲಕರು ಕಾರು ಬಾಡಿಗೆ ಜೊತೆಗೆ, ಕಾರಿನ ಮೇಲ್ಮೆ ಜಾಹೀರಾತುಗಳನ್ನು ಪ್ರದರ್ಶಿಸಲು CASHurDrive ನೊಂದಿಗೆ ಸಂಪರ್ಕ ಸಾಧಿಸಬಹುದು. ಉಬರ್ ಪ್ರಕಾರ, ಇದು ಚಾಲಕರಿಗೆ ಹೊಸ ಆದಾಯದ ಮೂಲವನ್ನು ಸೃಷ್ಟಿಸುತ್ತದೆ, ಆದರೆ ಜಾಹೀರಾತಿ ಎಷ್ಟು ಹಣ ನೀಡಲಾಗುವುದು ಎಂದು ಉಲ್ಲೇಖಿಸಿಲ್ಲ.
"ಚಾಲಕರೊಂದಿಗಿನ ನಮ್ಮ ಬದ್ಧತೆಯ ವಿಸ್ತರಣೆಯಾಗಿ, ಹೆಚ್ಚುವರಿ ಆದಾಯದ ಮೂಲವನ್ನು ಹೊಂದಿರುವ ಚಾಲಕರಿಗೆ ಸಹಾಯ ಮಾಡುವ CASHurDrive ನೊಂದಿಗೆ ನಮ್ಮ ಪಾಲುದಾರಿಕೆಯನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಚಾಲಕ ಪಾಲುದಾರರು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಮತ್ತು ಅದರಿಂದ ಲಾಭ ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ. ಚಾಲಕರು ನಮ್ಮ ವ್ಯವಹಾರಕ್ಕೆ ಪ್ರಮುಖರಾಗಿದ್ದಾರೆ . ಮತ್ತು ಚಾಲಕರ ಗಳಿಕೆಯ ಶಕ್ತಿಯನ್ನು ಹೆಚ್ಚಿಸಲು ಮತ್ತು ರಸ್ತೆಯ ಹೆಚ್ಚಿನ ಸಮಯವನ್ನು ಪಡೆಯಲು ಅವರಿಗೆ ಸಹಾಯ ಮಾಡಲು ನಾವು ಯಾವಾಗಲೂ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ "ಎಂದು ಉಬರ್ ಇಂಡಿಯಾ ಎಸ್ಎ ಕೇಂದ್ರ ಕಾರ್ಯಾಚರಣೆಗಳ ಮುಖ್ಯಸ್ಥ ಪವನ್ ವೈಶ್ ಹೇಳಿದರು.
ಕ್ಯಾಶ್ ಯುವರ್ ಡ್ರೈವ್ ತನ್ನ ಗ್ರಾಹಕರಿಗೆ ಆನ್ ರೋಡ್ ವಾಹನಗಳ ಮೂಲಕ ಜಾಹೀರಾತುಗಳು ಮತ್ತು ಪ್ರಚಾರ ಜಾಹೀರಾತುಗಳನ್ನು ಪ್ರದರ್ಶಿಸುವ ಉದ್ದೇಶ ಹೊಂದಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯಂತ ಸುಮಾರು 633 ನಗರಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications