ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ (2023) ನಲ್ಲಿ ಜನಪರ ಯೋಜನೆಗಳಿಗೆ ಅನುದಾನ ಹೆಚ್ಚಳ ಮಾಡಿದೆ. ಯಾವ ವರ್ಷದಲ್ಲಿ ಎಷ್ಟು ಅನುದಾನ ನೀಡಲಾಗಿತ್ತು ಎಂಬ ಮಾಹಿತಿ ನಿಮ್ಮ ಮುಂದೆ. ಓದಿ...
ಬೆಂಗಳೂರು, ಫೆಬ್ರುವರಿ 03: ಕೇಂದ್ರ ಸರ್ಕಾರ ಇತ್ತೀಚಿಗೆ ಮಂಡಿಸಿದ ಬಜೆಟ್ 2023ನಲ್ಲಿ ಜನಪರ ಯೋಜನೆಗಳಿಗೆ ಈ ಹಿಂದಿನಿಂದಲೂ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಈ ವರ್ಷ ಮತ್ತಷ್ಟು ಏರಿಕೆ ಮಾಡಿದ್ದಾಗಿ ತಿಳಿಸಿದೆ.
ಬುಧವಾರ ಫೆಬ್ರುವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದರು. ಈ ವೇಳೆ ಅವರು, ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಹಾಗೂ ಯೋಜನೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ಇವೆ. ಅವುಗಳಲ್ಲಿ ಬಹುತೇಕವುಗಳಿಗೆ ಈ ಆರ್ಥಿಕ ವರ್ಷ (2023-24) ಅನುದಾನ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಜನ್ ಆಯೋಗ್ ಯೋಜನೆ, ಜಲಜೀವನ್ ಮಿಷನ್ (ರಾಷ್ಟ್ರೀಯ, ಗ್ರಾಮೀಣ), ಆರೋಗ್ಯ ಶೀಕ್ಷಣ ವಲಯಗಳ ಯೋಜನೆಗಳು, ಗಡಿ ಪ್ರದೇಶದ ಅಭಿವೃದ್ಧಿ ಪರಿಸರ, ಅರಣ್ಯ, ವನ್ಯಜೀವಿ ಸಂರಕ್ಷಣೆ ಸೇರಿದಂತೆ ಸಾಕಷ್ಟು ಯೋಜನೆಗಳಿಗೆ 2021-22ನೇ ಸಾಲಿನಗಿಂತಲೂ ಈ ಬಾರಿ ಅಧಿಕ ಅನುದಾನ ಘೋಷಣೆ ಆಗಿದೆ.

ಇದುವರೆಗೆ ಸ್ಮಾರ್ಟ್ ಸಿಟಿ ಯೋಜನೆಗೆಂದು 2021-22ರಲ್ಲಿ ಅನುದಾನ ಘೋಷಣೆ ಮಾಡಿರಲಿಲ್ಲ. ಹಿಂದಿನ ವರ್ಷ ಈ ವರ್ಷ ಆ ಯೋಜನೆಗೆ ಒಟ್ಟು 7425 ಕೋಟಿ ರೂ. ಹಣ ನೀಡುವುದಾಗಿ ಕೇಂದ್ರ ಹೇಳಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಎರಡು ವರ್ಷದ ಹಿಂದೆ 2021-22ರಲ್ಲಿ 13,992 ಕೋಟಿ ರೂಪಾಯಿ, 2022-23ರಲ್ಲಿ 19,000 ಕೋಟಿ ರೂಪಾಯಿ ಹಾಗೂ ಈ ವರ್ಷ 2023-24ರಲ್ಲಿ 19,000 ಕೋಟಿ ರೂಪಾಯಿ ಘೋಷಣೆ ಆಗಿದೆ. ನಂತರ 2022-23ರಲ್ಲಿ 6572 ಕೋಟಿ ರೂ. ಮತ್ತು ಈವರ್ಷ 7425 ಕೋಟಿ ರೂಪಾಯಿ ಒದಗಿಸಲಾಗುವುದಾಗಿ ವಿತ್ತ ಸಚಿವರು ತಿಳಿಸಿದರು.

ಇನ್ನಿತರ ಯೋಜನೆಗಳನ್ನು ನೋಡುವುದಾದರೆ ಮಿಷನ್ ಶಕ್ತಿ (ಮಹಿಳಾ ಸಬಲೀಕರಣ) ಯೋಜನೆಗೆ 2021-22ರಲ್ಲಿ 1912 ಕೋಟಿ ರೂಪಾಯಿ, 2022-23ರಲ್ಲಿ 2280 ಕೋಟಿ ರೂಪಾಯಿ ಹಾಗೂ 2023-24ರಲ್ಲಿ ಒಟ್ಟು 3144 ಕೋಟಿ ರೂಪಾಯಿ ಘೋಷಣೆ ಆಗಿದೆ. ಅಲ್ಲದೇ ಆರೋಗ್ಯ ಇಲಾಖೆಯಲ್ಲಿ ಮುಖ್ಯ ಪಾತ್ರವಹಿಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಗೆ 3116 ಕೋಟಿ ರೂಪಾಯಿ (2021-22ರಲ್ಲಿ), 6427 ಕೋಟಿ ರೂಪಾಯಿ (2022-23ರಲ್ಲಿ) ಮತ್ತು ಪ್ರಸ್ತಕ ಆರ್ಥಿಕ ವರ್ಷದಲ್ಲಿ ಒಟ್ಟು 7,200 ಕೋಟಿ ರೂಪಾಯಿ (2023-24) ನೀಡುವುದಾಗಿ ಕೇಂದ್ರ ತಿಳಿಸಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications