ಅದು ಹತ್ತು ರೈತರನ್ನು ಒಳಗೊಂಡ ಕುಟುಂಬ. ಅವರ ವಾರ್ಷಿಕ ಆದಾಯ ಎಷ್ಟು ಅಂತ ತಿಳಿದರೆ, "ಏನು ನೋಟು ಪ್ರಿಂಟ್ ಮಾಡ್ತಾರಾ?" ಎಂದು ನೀವು ಅಚ್ಚರಿ ಪಡಬಹುದು. ಆದರೂ ಇದು ಸತ್ಯ ಈ ಕುಟುಂಬದ ವಾರ್ಷಿಕ ವರಮಾನ ಇಪ್ಪತ್ತೈದು ಕೋಟಿ ರುಪಾಯಿ. ಒಂದು ವರ್ಷಕ್ಕೆ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಆಲೂಗಡ್ಡೆ ಬೆಳೆದು, ಗಳಿಸುವ ಆದಾಯ ಇದು.
ಗುಜರಾತ್ ನ ಅರವಳಿ ಜಿಲ್ಲೆಯ ದೋಲ್ಪುರ್ ಕಂಪಾ ಹಳ್ಳಿಯ ಜಿತೇಶ್ ಪಟೇಲ್ ಮತ್ತು ಅವರ ಕುಟುಂಬ ಅದೃಷ್ಟವೇ ಬದಲಾಗಿದ್ದು ಕೃಷಿ ವಿಜ್ಞಾನವನ್ನು ಲೇಡಿ ರೊಸೆಟ್ಟ (ಎಲ್ ಆರ್) ಬೆಳೆಯಲು ಬಳಸಿಕೊಂಡಾಗ. ಈ ತಳಿಯ ಆಲೂಗಡ್ಡೆಯನ್ನು ಚಿಪ್ಸ್ ಮತ್ತು ವೇಫರ್ಸ್ ಗಾಗಿ ಬಳಸಲಾಗುತ್ತದೆ.
ಇಪ್ಪತ್ತಾರು ವರ್ಷದಿಂದ ಅಲೂಗಡ್ಡೆ ಬೆಳೆಯಲಾಗುತ್ತಿದೆ
ಬಾಲಾಜಿ ಮತ್ತು ಐಟಿಸಿಯಂಥ ಮುಂಚೂಣಿ ಚಿಪ್ಸ್ ತಯಾರಿಕೆ ಸಂಸ್ಥೆಗಳಿಗೆ ಈ ಕುಟುಂಬ ಆಲೂಗಡ್ದೆ ಪೂರೈಸುತ್ತದೆ. ಅಂದ ಹಾಗೆ ಕಳೆದ ಇಪ್ಪತ್ತಾರು ವರ್ಷದಿಂದ ಈ ಕುಟುಂಬ ಆಲೂಗಡ್ಡೆ ಬೆಳೆಯುತ್ತಿದೆ. "2005ರಲ್ಲಿ ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮುಗಿಸಿದ ಮೇಲೆ ಕೃಷಿಗೆ ಹಿಂತಿರುಗುವುದು ನನ್ನ ಗುರಿಯಾಗಿತ್ತು. ಅದಕ್ಕೂ ಮುನ್ನ ನನ್ನ ಕುಟುಂಬ ಟೇಬಲ್ ತಳಿಯ ಆಲೂಗಡ್ಡೆ ಬೆಳೆಯುತ್ತಿದ್ದರು. ಅದರಲ್ಲಿ ವಿಭಿನ್ನತೆ ತರಲು ನಾನು ನಿರ್ಧರಿಸಿದೆ" ಎನ್ನುತ್ತಾರೆ ಪಟೇಲ್.
ಶೇಕಡಾ ನೂರರಷ್ಟು ಎಲ್ ಆರ್ ಆಲೂಗಡ್ಡೆ
ಹದಿಮೂರು ವರ್ಷಗಳ ಹಿಂದೆ ಪಟೇಲ್ ಅವರು ಹತ್ತು ಎಕರೆ ಭೂಮಿಯಲ್ಲಿ ಎಲ್ ಆರ್ ತಳಿಯ ಆಲೂಗಡ್ಡೆ ಬೆಳೆಯಲು ಆರಂಭಿಸಿದ್ದಾರೆ. ಆ ನಂತರ ಇಳುವರಿ ಅದ್ಭುತವಾಗಿ ಬಂದಿದೆ. ಆಗ ಕುಟುಂಬದವರನ್ನೂ ಇದರಲ್ಲಿ ತೊಡಗಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಈ ವರೆಗೆ ನೂರರಷ್ಟು ಪ್ರಮಾಣದಲ್ಲಿ ಎಲ್ ಆರ್ ಆಲೂಗಡ್ಡೆಯನ್ನೇ ಬೆಳೆಯುತ್ತಿದ್ದಾರೆ.
ಇಂಡೋನೇಷ್ಯಾ, ಕುವೈತ್, ಒಮನ್ ಗೆ ರಫ್ತು
ಕಳೆದ ಒಂದು ವರ್ಷದಲ್ಲಿ ಎಲ್ ಆರ್ ತಳಿಯ ಒಂದು ಲಕ್ಷ ಟನ್ ಆಲೂಗಡ್ಡೆಯನ್ನು ಗುಜರಾತ್ ನಿಂದ ಇಂಡೋನೇಷ್ಯಾ, ಕುವೈತ್ ಮತ್ತು ಒಮನ್ ಗೆ ರಫ್ತು ಮಾಡಲಾಗಿದೆ. ಆಲೂಗಡ್ಡೆ ಚಿಪ್ಸ್ ತಯಾರಿಕರಿಗೆ ಉತ್ತಮ ಗುಣಮಟ್ಟದ ಎಲ್ ಆರ್ ತಳಿಯ ಆಲೂಗಡ್ಡೆ ಅಗತ್ಯವು ನಿರಂತರವಾಗಿ ಇರುತ್ತದೆ.
ವಿವಿಧ ಕ್ಷೇತ್ರದಲ್ಲಿ ತಜ್ಞರಿದ್ದಾರೆ
ಪಟೇಲ್ ಹೇಳುವ ಪ್ರಕಾರ, ಅವರ ಕುಟುಂಬದ ಒಬ್ಬೊಬ್ಬ ಸದಸ್ಯರು ಒಂದೊಂದು ಕ್ಷೇತ್ರದಲ್ಲಿ ತಜ್ಞರು. ಮೈಕ್ರೋಬಯಾಲಜಿ, ಎಂಟೋಮಾಲಜಿ, ಪಾಥಾಲಜಿ, ತೋಟಗಾರಿಕೆ ಹೀಗೆ ನಾನಾ ಕ್ಷೇತ್ರದಲ್ಲಿ ತಜ್ಞರಿದ್ದಾರೆ. ಚಿಪ್ಸ್ ಮತ್ತು ವೇಫರ್ ಉತ್ಪಾದಕರ ಜತೆಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡು, ಕೇಜಿಗೆ ಹದಿನೇಳು ರುಪಾಯಿಗಳಂತೆ ಪೂರೈಸಲಾಗುತ್ತಿದೆ.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications