ತೆರಿಗೆ ಕಟ್ಟಲು ನಿಮಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ. ನಿಮ್ಮ ಆದಾಯ ತೆರಿಗೆ ಕಟ್ಟುವಷ್ಟು ಅಂದರೆ ವಾರ್ಷಿಕವಾಗಿ 2.5 ಲಕ್ಷಗಳಿಗಿಂತ ಹೆಚ್ಚಿದ್ದಲ್ಲಿ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಒಂದು ವೇಳೆ ಜುಲೈ 31 ರ ಒಳಗಾಗಿ ನೀವು ತೆರಿಗೆ ಕಟ್ಟದಿದ್ದಲ್ಲಿ ಏನಾಗುತ್ತದೆಂಬುದನ್ನು ತಿಳಿಯಲು ಈ ಕೆಳಗಿನ 7 ಅಂಶಗಳನ್ನು ನೋಡಿ.
1. ಫೆನಾಲ್ಟಿಸ್ (ದಂಡಗಳು)
ಒಂದು ವೇಳೆ ನೀವು ಜುಲೈ 31 ರ ಒಳಗಾಗಿ ತೆರಿಗೆ ಕಟ್ಟದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಮೊತ್ತ ಮತ್ತು ದಂಡವನ್ನು ಎಷ್ಟು ವಿಧಿಸಬೇಕು ಎಂಬುದು ತೆರಿಗೆ ಅಧಿಕಾರಿಗಳನ್ನು ಅವಲಂಬಿಸಿರುತ್ತದೆ.
2. ನೀವು ತೆರಿಗೆ ಆದಾಯವನ್ನು ಬದಲಾಯಿಸಲು ಸಾಧ್ಯವಿಲ್ಲ
ಜುಲೈ 31 ಕಡೆಯ ದಿನಾಂಕವಾಗಿದ್ದು, ಅದರ ಒಳಗಾಗಿ ತೆರಿಗೆಯನ್ನು ಪಾವತಿಸಿದರೆ ನಿಮ್ಮ ತೆರಿಗೆ ಆದಾಯದ ಮೇಲೆ ನೀವು ಬದಲಾವಣೆ ತರಬಹುದು. ಇದರ ನಂತರ ತೆರಿಗೆ ಆದಾಯದ ಮೇಲೆ ಬದಲಾವಣೆ ತರಲು ಸಾಧ್ಯವಿರುವುದಿಲ್ಲ.
3. ಸೂಚನೆ ಜಾರಿ
ವಾರ್ಷಿಕವಾಗಿ ನಿಮ್ಮ ಆದಾಯ 2.5 ಲಕ್ಷಕ್ಕಿಂತಲೂ ಹೆಚ್ಚಿದ್ದು, ತೆರಿಗೆ ಪಾವತಿಸದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯವರು ನಿಮಗೆ ಸೂಚನೆ ಜಾರಿ ಮಾಡುತ್ತಾರೆ.
4. 1% ಶುಲ್ಕ
ಒಂದು ವೇಳೆ ಇಲಾಖೆಯವರು ತೆರಿಗೆ ಬೇಡಿಕೆ ಇಟ್ಟಲ್ಲಿ ಅದನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹಾಗಾಗಿ ನೀವು ತೆರಿಗೆ ಕಟ್ಟುವವರೆಗೂ ಪ್ರತಿ ತಿಂಗಳಿಗೆ 1% ನಂತೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.
5. ನಷ್ಟವನ್ನು ಮುಂದಕ್ಕೆ ಹಾಕಲು ಬಯಸಿದ್ದಲ್ಲಿ
ನಿಮಗೆ ಬಂಡವಾಳ ಗಳಿಕೆಗಳಲ್ಲಿ ನಷ್ಟವಾಗಿ ತೆರಿಗೆ ಕಟ್ಟಲು ಆಗದಿದ್ದಲ್ಲಿ ಅದನ್ನು ಮುಂದಿನ ವರ್ಷಕ್ಕೆ ಮುಂದುಡಬಹುದು. ವಿಶೇಷವಾಗಿ ನಿಮಗೆ ಷೇರುಗಳ ಮಾರಾಟದ ಮೇಲೆ ಲಾಭವಿದ್ದರೆ ಮಾತ್ರ ಇದು ಸಾಧ್ಯ.
6.ನೋಟಿಸ್ ಬಂದಲ್ಲಿ ವೃತ್ತಿಪರರನ್ನು ಬೇಟಿಯಾಗಿ
ಇದು ಕೇವಲ ಸಲಹೆ ಆಗಿದೆ. ನೀವು ತೆರಿಗೆ ಪಾವತಿಸುವಲ್ಲಿ ತಡವಾದಲ್ಲಿ ವೃತ್ತಿಪರ ವ್ಯಕ್ತಿಯನ್ನು ವಿಶೇಷವಾಗಿ ಚಾರ್ಟೆಡ್ ಅಕೌಂಟಂಟ್ ರನ್ನು ಬೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು. ಜೊತೆಗೆ ಅವರು ತೆರಿಗೆ ಅಧಿಕಾರಿಗಳೊಂದಿಗೆ ವಿಷಯಗಳನ್ನು ಉತ್ತಮವಾಗಿ ಚರ್ಚಿಸಲು ಸಹಾಯಕವಾಗಬಹುದು.
7. ಆದಾಯ ತೆರಿಗೆ ಕಟ್ಟುವ ಕೊನೆ ದಿನ
ಜುಲೈ 31, 2016 ತೆರಿಗೆ ಪಾವತಿಸಲು ಕೊನೆಯ ದಿನಾಂಕ ಎಂಬುದನ್ನು ನೆನಪಿಡಿ. ಇದರ ಕುರಿತು ಈಗಾಗಲೆ ಸೂಚನೆ ಹೊರಡಿಸಲಾಗಿದೆ. ಹಿಂದಿನ ವರ್ಷ ಆದಾಯ ತೆರಿಗೆ ಇಲಾಖೆಯವರು ಸಮಯದ ಮಿತಿಯನ್ನು ಹೆಚ್ಚಿಸಿದ್ದರು. ಆದರೆ ಕಳೆದ ವರ್ಷ ಹೆಚ್ಚಿಸಿರಲಿಲ್ಲ. ಇಲ್ಲಿಯ ತನಕ 2015-16 ರ ಹಣಕಾಸಿನ ವರ್ಷದ ಸಮಯದ ಮಿತಿ ಹೆಚ್ಚಳದ ಕುರಿತು ಯಾವುದೆ ಸೂಚನೆ ಹೊರಡಿಸಿಲ್ಲ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications