ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಭಾರತದ ಬ್ಯಾಂಕ್ ಅಸೊಸೀಯೇಷನ್ಗೆ ಬ್ಯಾಂಕ್ ಸಂಬಂಧಿತ ಕಾರ್ಯಗಳಲ್ಲಿ ಮಾಡಬಹುದಾದ ಬದಲಾವಣೆಗಳ ಸಲಹಾ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಬ್ಯಾಂಕ್ನ ಕೆಲಸದ ಅವಧಿಯನ್ನು 30 ನಿಮಿಷಗಳ ಕಾಲ ವಿಸ್ತರಣೆ ಮಾಡುವುದನ್ನು ಕೂಡಾ ಉಲ್ಲೇಖ ಮಾಡಲಾಗಿದೆ.
ಬ್ಯಾಂಕ್ ಯೂನಿಯನ್ ಬ್ಯಾಂಕ್ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡಬಹುದು ಎಂದು ಹೇಳಿದೆ. ಬೆಳಗ್ಗೆಯೇ 30 ನಿಮಿಷ ಬೇಗನೇ ಬ್ಯಾಂಕ್ ಕೆಲಸ ಆರಂಭ ಮಾಡಬಹುದು ಎಂದು ಹೇಳಿದೆ. ಹಾಗೆಯೇ ಗ್ರಾಹಕರ ಸೇವೆಯ ಅವಧಿಯನ್ನು ಕೂಡಾ 30 ನಿಮಿಷ ವಿಸ್ತರಣೆ ಮಾಡಬಹುದು ಎಂದು ತಿಳಿಸಿದೆ.
ಬ್ಯಾಂಕ್ ಯೂನಿಯನ್ ಹೇಳಿರುವ ವಿಸ್ತೃತ ಕೆಲಸದ ಅವಧಿಯು ಬೆಳಗ್ಗೆ 9:15ರಿಂದ 4:45 ಆಗಿದೆ. ಪ್ರಸ್ತುತ ಬ್ಯಾಂಕ್ ಕೆಲಸದ ಅವಧಿ 9:45ರಿಂದ 4:45 ಆಗಿದೆ. ಇನ್ನು ಹಣಕಾಸು ವಹಿವಾಟು ನಡೆಸುವ ಅವಧಿಯನ್ನು 9:30ರಿಂದ ಮಧ್ಯಾಹ್ನ 1:30ವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 3:30ವರೆಗೆ ಬದಲಾವಣೆ ಮಾಡಬಹುದು ಎಂದು ಕೂಡಾ ಹೇಳಿದೆ. ಹಾಗೆಯೇ ಉಳಿದ ಕೆಲಸದ ಅವಧಿಯನ್ನು 3:30ರಿಂದ 4:45ರವರೆಗೆ ನಡೆಸಬಹುದು ಎಂದು ಹೇಳಿದೆ. ಆದರೆ ಈ ಬದಲಾವಣೆಗೆ ಬ್ಯಾಂಕ್ ಯೂನಿಯನ್ ಸಲಹೆ ನೀಡುತ್ತಿರುವುದು ಏಕಾಗಿ? ಇಲ್ಲಿದೆ ವಿವರ ಮುಂದೆ ಓದಿ...

ಈ ಕೆಲಸದ ಅವಧಿ ಬದಲಾವಣೆ ಸಲಹೆ ಯಾಕಾಗಿ?
ಪ್ರಮುಖವಾಗಿ ಬ್ಯಾಂಕ್ನ ಕೆಲಸದ ದಿನವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಲು ಬ್ಯಾಂಕ್ ಯೂನಿಯನ್ ಸಲಹೆ ನೀಡುತ್ತಿದೆ. ಪ್ರಸ್ತುತ ಬ್ಯಾಂಕ್ಗಳು ವಾರದಲ್ಲಿ ಆರು ದಿನಗಳ ಕಾಲ ಕಾರ್ಯ ನಿರ್ವಹಣೆ ಮಾಡುತ್ತದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಬರುವ ವಾರಗಳಲ್ಲಿ ಮಾತ್ರ ಬ್ಯಾಂಕ್ 5 ದಿನ ಕಾರ್ಯ ನಿರ್ವಹಣೆ ಮಾಡುತ್ತದೆ.
ಆದರೆ ಬ್ಯಾಂಕ್ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡುವ ಮೂಲಕ ಕೆಲಸದ ದಿನವನ್ನು ಆರರಿಂದ 5ಕ್ಕೆ ಇಳಿಕೆ ಮಾಡಬಹುದು ಎಂಬುವುದು ಬ್ಯಾಂಕ್ ಯೂನಿಯನ್ನ ಸಲಹೆಯಾಗಿದೆ ಎಂದು ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಚಲಂ ತಿಳಿಸಿದ್ದಾರೆ. ಈ ಕೆಲಸದ ಅವಧಿಯನ್ನು ಕಳೆದ ವರ್ಷ ವಿಮಾ ಸಂಸ್ಥೆ ಎಲ್ಐಸಿ ಪಾಲಿಸಲು ಆರಂಭ ಮಾಡಿದೆ.
ಈ ಮೂಲಕ ತಿಂಗಳ ರಜೆಯ ದಿನದಲ್ಲಿ ಇನ್ನು ಎರಡು ರಜೆ ದಿನವನ್ನು ಸೇರ್ಪಡೆ ಮಾಡಲು ಸಾಧ್ಯವಾಗಲಿದೆ ಎಂಬುವುದು ಯೂನಿಯನ್ನ ಕಣ್ಣೋಟವಾಗಿದೆ. ಇನ್ನು ಆರ್ಬಿಐ ಈ ಸಲಹೆಯನ್ನು ಒಪ್ಪಬಹುದು ಎಂದು ಭರವಸೆಯನ್ನು ಕೂಡಾ ಯೂನಿಯನ್ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ವಾರದಲ್ಲಿ 5 ದಿನ ಮಾತ್ರ ಕೆಲಸದ ಅವಧಿ ಇರಬೇಕು ಎಂದು ಬ್ಯಾಂಕ್ ಯೂನಿಯನ್ ಮನವಿ ಮಾಡಿತ್ತು. ಆದರೆ ಐಬಿಎ ಈ ಮನವಿಯನ್ನು ತಿರಸ್ಕರಿಸಿ ಬದಲಾಗಿ ಉದ್ಯೋಗಿಗಳಿಗೆ ಗರಿಷ್ಠ ಶೇಕಡ 19ರಷ್ಟು ಏರಿಕೆ ಮಾಡಿದೆ. ಪ್ರಸ್ತುತ ಎಲ್ಲ ಭಾನುವಾರ ಹಾಗೂ ಎರಡನೇ, ನಾಲ್ಕನೇ ಶನಿವಾರ ಬ್ಯಾಂಕ್ಗಳಿಗೆ ವಾರದ ರಜೆಯಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications