ಅಟಲ್ ಪಿಂಚಣಿ ಯೋಜನೆಯ ನಿಯಮಗಳು ಮತ್ತು ಷರತ್ತುಗಳನ್ನು ಸರ್ಕಾರವು ಬದಲಾಯಿಸಿದೆ. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ಈ ಯೋಜನೆಯು 60 ವರ್ಷ ವಯಸ್ಸಿನ ನಂತರ ಚಂದಾದಾರರಿಗೆ ತಿಂಗಳಿಗೆ ರೂ 1000 ರಿಂದ ರೂ 5000 ವರೆಗೆ ಕನಿಷ್ಠ ಪಿಂಚಣಿಯನ್ನು ನೀಡುವ ಯೋಜನೆಯಾಗಿದೆ.
ನಮ್ಮ ನಿವೃತ್ತಿ ಜೀವನಕ್ಕೆ ಪಿಂಚಣಿಯು ಒಂದು ಸುರಕ್ಷಿತ ಹಣಕಾಸು ಮೂಲವಾಗಿದೆ. ಭವಿಷ್ಯದಲ್ಲಿ ಪಿಂಚಣಿ ಪಡೆಯಬೇಕಾದರೆ ನಾವು ಅದಕ್ಕೆ ಈಗಲೇ ತಯಾರಿ ಮಾಡುವುದು ಅತೀ ಮುಖ್ಯವಾಗಿದೆ. ಸರ್ಕಾರವು ಇದಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಆ ಯೋಜನೆಗಳ ಪೈಕಿ ಪ್ರಮುಖವಾದುದು ಅಟಲ್ ಪಿಂಚಣಿ ಯೋಜನೆಯಾಗಿದೆ.
ಇತ್ತೀಚೆಗೆ ಸರ್ಕಾರವು ಈ ಯೋಜನೆಯ ಹೂಡಿಕೆ ಸಂಬಂಧಿತ ನಿಯಮದಲ್ಲಿ ಬದಲಾವಣೆಯನ್ನು ಮಾಡಿದೆ. ಪ್ರಮುಖವಾಗಿ ಖಾತೆಯನ್ನು ಯಾರು ತೆರೆಯಬಹುದು ಎಂಬ ಮಾನದಂಡದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಪಿಂಚಣಿ ಮೊತ್ತವು ಚಂದಾದಾರರು ನೀಡಿದ ಕೊಡುಗೆಯನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಶೀಘ್ರದಲ್ಲೇ ಎಲ್ಲರಿಗೂ ಚಂದಾದಾರಿಕೆಗಾಗಿ ಖಾತೆಯನ್ನು ತೆರೆಯಲಾಗುವುದಿಲ್ಲ. ಈ ಹೊಸ ನಿಯಮದ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿದೆ ಮುಂದೆ ಓದಿ...
ತೆರಿಗೆದಾರರಿಗೆ ನಿರ್ಬಂಧ
ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಥವಾ ತೆರಿಗೆ ಪಾವತಿಸುವ ವ್ಯಕ್ತಿಗಳು ಅಕ್ಟೋಬರ್ 1, 2022ರಿಂದ ಅಟಲ್ ಪಿಂಚಣಿ ಯೋಜನೆ ಖಾತೆಯನ್ನು ತೆರೆಯಲು ಅವಕಾಶವಿಲ್ಲ. "1 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿದಾರರಾಗಿರುವ ಅಥವಾ ಹೊಂದಿರುವ ಯಾವುದೇ ನಾಗರಿಕರು ಎಪಿವೈಗೆ ಸೇರಲು ಅರ್ಹರಾಗಿರುವುದಿಲ್ಲ," ಎಂದು ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯು 10 ಆಗಸ್ಟ್ 2022 ದಿನಾಂಕದ ಅಧಿಸೂಚನೆಯಲ್ಲಿ ತಿಳಿಸಿದೆ.
ಅಕ್ಟೋಬರ್ 1 ಅಥವಾ ನಂತರ ಖಾತೆ ತೆರೆದರೆ ಏನಾಗುತ್ತದೆ?
ಅಧಿಸೂಚನೆಯ ಪ್ರಕಾರ, ಚಂದಾದಾರರು 1 ಅಕ್ಟೋಬರ್ 2022 ರಂದು ಅಥವಾ ನಂತರ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾದರೆ, ಈ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರ ಖಾತೆಯನ್ನು ಮುಚ್ಚಲಾಗುತ್ತದೆ. ಅಂತಹ ಚಂದಾದಾರರ ಖಾತೆಯಲ್ಲಿ ಇರುವ ಹಣವನ್ನು ಹಿಂದಕ್ಕೆ ನೀಡಲಾಗುತ್ತದೆ.
ತೆರಿಗೆದಾರರು ಏನು ಮಾಡಬೇಕು?
ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಲು ಬಯಸುವ ತೆರಿಗೆದಾರರು ಅಕ್ಟೋಬರ್ 1, 2022 ರ ಮೊದಲು ಯೋಜನೆಗೆ ಸೇರ್ಪಡೆಯಾಗಬಹುದು. ಆದ್ದರಿಂದ ನೀವು 30 ಸೆಪ್ಟೆಂಬರ್ 2022 ರವರೆಗೆ ಎಪಿವೈ ಚಂದಾದಾರರಾಗಬಹುದು. ಈ ದಿನಾಂಕದ ನಂತರ, ನಿಮ್ಮ ಖಾತೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಆವರೆಗಿನ ಮೊತ್ತ ನಿಮಗೆ ಲಭ್ಯವಾಗಲಿದೆ.
ತೆರಿಗೆದಾರರು ಎಪಿವೈ ಖಾತೆ ತೆರೆಯಬೇಕೇ?
ಎಪಿವೈ ಖಾತೆಯು ಪ್ರಾಥಮಿಕವಾಗಿ ಕಡಿಮೆ ಆದಾಯವನ್ನು ಹೊಂದಿರುವ ಜನರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ. ಕಡಿಮೆ ಆದಾಯವನ್ನು ಹೊಂದಿರುವವರು ತಮ್ಮ ನಿವೃತ್ತಿಯ ಬಳಿಕ ಪಿಂಚಣಿಯನ್ನು ನೀಡುವ ದೊಡ್ಡ ಯೋಜನೆಗಳ ಚಂದಾದಾರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಜನರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆಯಲ್ಲಿ ಮಾಸಿಕವಾಗಿ ಕನಿಷ್ಠ 5 ಸಾವಿರ ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ಇನ್ನು ತೆರಿಗೆದಾರರು ಎಪಿವೈಗೆ ಸೇರ್ಪಡೆಯಾಗಲು ಸಾಧ್ಯವಿಲ್ಲದ ಕಾರಣ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ನಂತಹ ಯೋಜನೆಗೆ ಸೇರ್ಪಡೆಯಾಗಬಹುದು. ತೆರಿಗೆದಾರರು ಹೆಚ್ಚಿನ ಖಾತರಿ ಮತ್ತು ತೆರಿಗೆ-ಮುಕ್ತ ಆದಾಯಕ್ಕಾಗಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ನಂತಹ ಯೋಜನೆಗಳಲ್ಲೂ ಚಂದಾದಾರರಾಗಬಹುದು.
ಎಪಿವೈಗೆ ಯಾರು ಸೇರ್ಪಡೆಯಾಗಬಹುದು?
ಪ್ರಸ್ತುತ, 18-40 ವಯಸ್ಸಿನ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಾಗಿದ್ದಾರೆ. ನಿಮ್ಮ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗಳ ಮೂಲಕ ನೀವು ಯೋಜನೆಗೆ ಚಂದಾದಾರರಾಗಬಹುದು. ಅಧಿಕೃತ ಮಾಹಿತಿಯ ಪ್ರಕಾರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಎಪಿವೈ ಚಂದಾದಾರರ ಒಟ್ಟು ಸಂಖ್ಯೆ 4.01 ಕೋಟಿ ಆಗಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!



Click it and Unblock the Notifications