ಗ್ರಾಹಕರು ಕೆವೈಸಿ (know your customer) ಅಪ್ಡೇಟ್ ಮಾಡಿಕೊಳ್ಳಲು ತಮ್ಮ ಬ್ಯಾಂಕ್ ಕಚೇರಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ತಿಳಿಸಿದೆ. ಗ್ರಾಹಕರು ಸರಿಯಾದ ಮಾಹಿತಿಯನ್ನು ಈಗಾಗಲೇ ಸಬ್ಮಿಟ್ ಮಾಡಿದ್ದರೆ, ವಿಳಾಸವನ್ನು ಬದಲಾವಣೆ ಮಾಡಿಲ್ಲದಿದ್ದರೆ ಬ್ಯಾಂಕ್ನ ಬ್ರಾಂಚ್ಗೆ ಭೇಟಿ ನೀಡಿ ಕೆವೈಸಿ ಅಪ್ಡೇಟ್ ಮಾಡಬೇಕಾಗಿಲ್ಲ ಎಂದಿದೆ.
ಇದರ ಬದಲಾಗಿ ಗ್ರಾಹಕರು ಇಮೇಲ್, ಫೋನ್, ಎಟಿಎಂ, ನೆಟ್ ಬ್ಯಾಂಕಿಂಗ್ ಅಥವಾ ಪತ್ರದ ಮೂಲಕ ಕೆವೈಸಿ ಅಪ್ಡೇಟ್ ಮಾಹಿತಿ ಸಲ್ಲಿಸಬಹುದು. ಗ್ರಾಹಕರಿಗೆ ಕೆವೈಸಿ ಅಪ್ಡೇಟ್ ಪ್ರಕ್ರಿಯೆಯು ಕಷ್ಟವಾಗಬಾರದು ಎಂಬ ನಿಟ್ಟಿನಲ್ಲಿ ಆರ್ಬಿಐ ಈ ಪರಿಷ್ಕರಣೆಯನ್ನು ಮಾಡಿದೆ.
ಒಂದು ವೇಳೆ ಗ್ರಾಹಕರ ವಿಳಾಸದಲ್ಲಿ ಬದಲಾವಣೆಯಾಗಿದ್ದರೆ, ಗ್ರಾಹಕರು ಬೇರೆ ಬೇರೆ ಮೂಲಗಳಿಂದ ದಾಖಲೆಯನ್ನು ಸಲ್ಲಿಸಬಹುದು. ಬ್ಯಾಂಕ್ ಅದನ್ನು ಎರಡು ತಿಂಗಳಲ್ಲಿ ವೆರಿಫೈ ಮಾಡಲಿದೆ. ಸರಿಯಾದ ದಾಖಲೆಯನ್ನು ಸಲ್ಲಿಸದಿದ್ದರೆ ಬ್ಯಾಂಕ್ ಮತ್ತೊಮ್ಮೆ ಕೆವೈಸಿ ಪ್ರಕ್ರಿಯೆ ಮಾಡಿಸಿಕೊಳ್ಳುವಂತೆ ತಿಳಿಸಿದೆ.

ಮತ್ತೆ ಕೆವೈಸಿ ಯಾವಾಗ ಮಾಡುವುದು?
ಬ್ಯಾಂಕ್ನ ವಿಡಿಯೋ ಕಾಲ್ ಪ್ರಕ್ರಿಯೆ ಮೂಲಕ ಗ್ರಾಹಕರು ಕೆವೈಸಿ ಪ್ರಕ್ರಿಯೆಯನ್ನು ಮಾಡಬಹುದು. ಇದಕ್ಕಾಗಿ ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕ ಮಾಡಬಹುದು. ಬ್ಯಾಂಕ್ನಲ್ಲಿ ಇರುವ ದಾಖಲೆಗೂ ಪ್ರಸ್ತುತ ಗ್ರಾಹಕರ ದಾಖಲೆಯ ನಡುವೆ ವ್ಯತ್ಯಾಸಗಳು ಇದ್ದರೆ ಮಾತ್ರ ಮತ್ತೆ ಕೆವೈಸಿಯನ್ನು ಮಾಡುವಂತೆ ಬ್ಯಾಂಕ್ಗಳು ತಿಳಿಸುತ್ತದೆ.
ಪ್ರಸ್ತುತ ಎಲ್ಲ ಬ್ಯಾಂಕ್ಗಳಲ್ಲಿ ಕೆವೈಸಿ ಪ್ರಕ್ರಿಯೆಯು ಕಡ್ಡಾಯವಾಗಿದೆ. ವಿಮಾ ಸಂಸ್ಥೆಗಳಲ್ಲಿಯೂ ಇದನ್ನು ಮಾಡಲಾಗುತ್ತದೆ. ಇನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೂ ಈ ಕೆವೈಸಿ ಕಡ್ಡಾಯವಾಗಿದೆ.
ಕೆವೈಸಿ (know your customer) ಎಂದರೇನು?
ಕೆವೈಸಿ ಎಂಬುದು "ನೋ ಯುವರ್ ಕಸ್ಟಮರ್" (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಯಾವುದೇ ಹಣಕಾಸು ಸಂಬಂಧಿತ ಕಾರ್ಯಗಳಿಗೂ ಕೆವೈಸಿ ಕಡ್ಡಾಯವಾಗಿದೆ. ಇದಕ್ಕೆ ಪ್ರಮುಖ ದಾಖಲೆಗಳಾದ ಫೋಟೋ ಐಡಿ (ಉದಾ., ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್) ಮತ್ತು ವಿಳಾಸ ದಾಖಲೆ ಮತ್ತು ಇನ್ಪರ್ಸನ್ ಪರಿಶೀಲನೆ (ಐಪಿವಿ) ನೀಡಬೇಕಾಗುತ್ತದೆ. ಈ ದಾಖಲೆಗಳನ್ನು ಸಲ್ಲಿಸಿದರೆ ಕೆವೈಸಿ ಸಂಪೂರ್ಣವಾಗುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications