
ಈ ಪ್ರಶ್ನೆಗಳಿಗೆ ನಮ್ಮ ದೇಶದಲ್ಲಿರುವ ನಾಲ್ಕೂವರೆ ಕೋಟಿಗೂ ಅಧಿಕವಿರುವ ಎಷ್ಟು ಭವಿಷ್ಯನಿಧಿ ಚಂದಾದಾರರಿಗೆ ತಿಳಿದಿರುತ್ತದೆ? ಸರಳ ಉತ್ತರವೇನೆಂದರೆ, ಬಹುಪಾಲು ಜನರಿಗೆ ಇದು ತಿಳಿದಿರುವುದಿಲ್ಲ ಮತ್ತು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಹಾಗೆಯೆ, ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ಕಷ್ಟಕರವೆ.
ಭವಿಷ್ಯ ನಿಧಿಯನ್ನು ಹಿಂತೆಗೆದುಕೊಳ್ಳಬೇಕಿದ್ದರೆ ಫಾರಂ 19ರಲ್ಲಿ ಅರ್ಜಿ ಸಲ್ಲಿಸಬೇಕು. ನಾನಾ ಕಾರಣಗಳಿಂದ ವಾಪಸ್ ಬರುವ ಅರ್ಜಿಯನ್ನು ಮತ್ತೆ ಮತ್ತೆ ಸರಿಪಡಿಸಿ ಸಲ್ಲಿಸಬೇಕು. ಅವರಿವರನ್ನು ಹಿಡಿದ ನಂತರವೇ ಅರ್ಜಿ ಸ್ವೀಕೃತವಾಗುತ್ತದೆ. ಕೊನೆಗೆ ಹಣ ವಾಪಸ್ ಬರಲು ಏನಿಲ್ಲೆಂದರೂ 5-6 ತಿಂಗಳಾದರೂ ಬೇಕು. ಅಲ್ಲಿಯವರೆಗೆ, ಅರ್ಜಿಯ ಸ್ಥಿತಿಗತಿ ಏನೆಂದು ತಿಳಿದುಬರುವುದಿಲ್ಲ.
ಆದರೆ, ಇನ್ನು ಮುಂದೆ ಭವಿಷ್ಯ ನಿಧಿ(ಎಂಪ್ಲಾಯೀಸ್ ಪ್ಲಾವಿಡೆಂಟ್ ಫಂಡ್)ಯ ಬಗ್ಗೆ ತಿಳಿದುಕೊಳ್ಳಲು ಪಿಎಫ್ ಕಚೇರಿಗೆ ಎಡತಾಕುವ ಅಗತ್ಯವಿಲ್ಲ. ಇಂಟರ್ನೆಟ್ ಸಂಪರ್ಕವಿದ್ದರೆ ಇದ್ದಲ್ಲಿಂದಲೇ ಆನ್ ಲೈನ್ ಮುಖಾಂತರವೇ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. www.epfindia.com ಅಂತರ್ಜಾಲ ತಾಣ ಜಾಲಾಡಿ ನಮಗೆ ಅಗತ್ಯವಿರುವ ಸೇವೆಯ ಲಿಂಕ್ ಅನ್ನು ಕ್ಲಿಕ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.
ನಿಮ್ಮ ಖಾತೆಯಿರುವ ಪ್ರಾದೇಶಿಕ ಪಿಎಫ್ ಕಚೇರಿಯನ್ನು ಆಯ್ಕೆ ಮಾಡಿಕೊಂಡು, ಯಾವುದೇ ನೊಂದಾವಣೆ ಕೂಡ ಇಲ್ಲದೆ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಏನಾದರೂ ಕುಂದುಕೊರತೆಗಳಿದ್ದರೆ ವೆಬ್ ಸೈಟಿನಲ್ಲಿ ನೊಂದಾಯಿಸಿಕೊಂಡು ತೊಂದರೆಗಳನ್ನು ನಿವೇದಿಸಿಕೊಳ್ಳಬಹುದು.
ಮೊಬೈಲ್ ಸಂದೇಶ : ನಮ್ಮ ಖಾತೆಯಲ್ಲಿ ನಮೂದಿಸಲಾಗಿರುವ ಸರಿಯಾದ ಇಪಿಎಫ್ ನಂಬರ್ ತಿಳಿಸಿ ಮೊಬೈಲ್ ಮುಖಾಂತರವೂ ನೌಕರರ ಮತ್ತು ಮಾಲಿಕರ ಕೊಡುಗೆ ಎಷ್ಟು, ಮತ್ತು ಎಷ್ಟು ಜಮಾ ಆಗಿದೆ ಎಂಬ ವಿವರಗಳನ್ನು ಪಡೆಯಬಹುದು. ದೇಶದಲ್ಲಿರುವ 120 ಪಿಎಫ್ ಕಚೇರಿಗಳಲ್ಲಿ 112 ಕಚೇರಿಗಳು ಆನ್ ಲೈನ್ ಮೂಲಕ ಮಾಹಿತಿಯನ್ನು ನೌಕರರಿಗೆ ನೀಡುತ್ತಿವೆ. ಅದನ್ನು ಪಡೆಯುವ ಬಗೆ ನೌಕರರಿಗೆ ತಿಳಿದಿರಬೇಕು ಮತ್ತು ಅಂತರ್ಜಾಲ ಬಳಸುವ ಬಗೆ ಗೊತ್ತಿರಬೇಕು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications