ನಿಮ್ಮ ಬೆಳೆ ಸಾಲ ಮನ್ನಾ ಆಗಿದೆಯೋ? ಇಲ್ಲವೋ? ಇಲ್ಲಿ ಚೆಕ್ ಮಾಡಿ..

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತೆಗೆದುಕೊಂಡ ಬಹುಮುಖ್ಯ ನಿರ್ಧಾರಗಳಲ್ಲಿ ಸಾಲ ಮನ್ನಾ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಕೆಲ ತಿಂಗಳುಗಳೇ ಕಳೆದಿವೆ.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದ ನಂತರ ತೆಗೆದುಕೊಂಡ ಬಹುಮುಖ್ಯ ನಿರ್ಧಾರಗಳಲ್ಲಿ ಸಾಲ ಮನ್ನಾ ಪ್ರಮುಖವಾದದ್ದು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಕೆಲ ತಿಂಗಳುಗಳೇ ಕಳೆದಿವೆ. ಹಾಗಿದ್ದರೆ ಬೆಳೆ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ? ಸಾಲ ಮನ್ನಾ ಆಗಿದೆಯೇ? ಇತ್ಯಾದಿ ಗೊಂದಲಗಳು ನಿಮ್ಮಲ್ಲಿರುವುದು ಸಹಜ. ಹಾಗಿದ್ದರೆ ಬನ್ನಿ ಇಲ್ಲಿ ಚೆಕ್ ಮಾಡೋಣ.. ಪಿಎಂ ಕಿಸಾನ್ ಯೋಜನೆ: ರೈತರು 6 ಸಾವಿರ ಸಹಾಯಧನ ಪಡೆಯುವುದು ಹೇಗೆ?

ಋಣಮುಕ್ತ ಪತ್ರ

ಋಣಮುಕ್ತ ಪತ್ರ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗಾಗಲೇ ರೈತರ ಬೆಳೆ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ದಾರೆ. ಆದರೆ, ಸಾಲ ಮನ್ನಾ ಮಾಡುವುದಾಗಿ ಘೋಷಣೆಯಾಗಿ ಐದಾರು ತಿಂಗಳುಗಳೇ ಕಳೆದರೂ ಸಾಲ ಮನ್ನಾ ಆಗಿರುವ ಹಣ ಸಿಕ್ಕಿಲ್ಲ. ಬ್ಯಾಂಕುಗಳಿಂದ ಇದುವರೆಗೂ ರೈತರಿಗೆ ಯಾವುದೇ ಋಣಮುಕ್ತ ಪತ್ರ ಸಿಕ್ಕಿಲ್ಲ. ಹೀಗಾಗಿ ರೈತರು ಸಾಲ ಮನ್ನಾ ಆಗಿದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ.

ವೆಬ್ಸೈಟ್ ನಲ್ಲಿ ಚೆಕ್ ಮಾಡಿ

ವೆಬ್ಸೈಟ್ ನಲ್ಲಿ ಚೆಕ್ ಮಾಡಿ

ಸಾಲ ಮನ್ನಾ ಹಾಗು ಋಣಮುಕ್ತ ಪತ್ರ ವಿಷಯವಾಗಿ ಮಾಹಿತಿ ನೀಡಲು ಸರ್ಕಾರ ವೆಬಸ್ಐಟ್ ನಲ್ಲಿ ಮಾಹಿತಿ ಪ್ರಕಟಿಸಿದೆ. ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು (http://clws.karnataka.gov.in/clws/pacs/pacsreports/)ಲಿಂಕ್​ ಮೂಲಕ ತಿಳಿದುಕೊಳ್ಳಬಹುದು.

ಮೊದಲ ಹಂತ

ಮೊದಲ ಹಂತ

ಮೊದಲು ಇಲ್ಲಿ ನೀಡಲಾಗಿರುವ ಲಿಂಕ್ ಮೇಲೆ​ ಕ್ಲಿಕ್​ ಮಾಡಿ. ನಿಮಗೆ ಸಂಬಂಧಿಸಿದ ಜಿಲ್ಲೆ, ತಾಲೂಕು, ಬ್ಯಾಂಕ್ ಹೆಸರು, ಬ್ರಾಂಚ್ ಆಯ್ಕೆ ಮಾಡಿ.  (http://clws.karnataka.gov.in/clws/pacs/pacsreports/BankVerified.aspx)

ಸಾಲ ಮನ್ನಾ ವೆರಿಫೀಕೆಶನ್ ಸ್ಟೇಟಸ್

ಸಾಲ ಮನ್ನಾ ವೆರಿಫೀಕೆಶನ್ ಸ್ಟೇಟಸ್

ಶಾಖೆಗಳಿಗನುಗುಣವಾಗಿ ಒಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಸಾಲ ಮನ್ನಾ ವೆರಿಫೀಕೆಶನ್ ಸ್ಟೇಟಸ್ ವರದಿಯನ್ನು ನೋಡಬಹುದು. (http://clws.karnataka.gov.in/clws/pacs/pacsreports/BranchWiseCropLoanVerificationStatus.aspx) ವರದಿ ನಂತರ ಎಕ್ಸ್​ಪೋರ್ಟ್ ಟು ಎಕ್ಸೆಲ್ ಮೇಲೆ ಕ್ಲಿಕ್ ಮಾಡಿ. ಆಗ ಯಾವ ಶಾಖೆಯಲ್ಲಿ ಯಾವೆಲ್ಲ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪಟ್ಟಿ ಕಾಣಿಸಿಕೊಳ್ಳುತ್ತದೆ. ಆನ್ಲೈನ್ ನಲ್ಲಿ ನಿಮ್ಮ ಸಾಲ ಮನ್ನಾ ಆಗಿರುವುದನ್ನು ಚೆಕ್ ಮಾಡಿಕೂಳ್ಳುವುದಕ್ಕೆ ಈ ಮೇಲಿನ ಹಂತಗಳನ್ನು ಅನುಸರಿಸಿ.

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಈಗಾಗಲೇ ಎಚ್ ಡಿ ಕುಮಾರಸ್ವಾಮಿಯವರು ರಾಷ್ಟ್ರೀಕೃತ ಬ್ಯಾಂಕುಗಳ ರೂ. 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.. ಇದರಿಂದ 17 ಲಕ್ಷ ಮಂದಿ ರೈತರು ಸುಸ್ತಿ ಸಾಲ ಮನ್ನಾದ ಲಾಭ ಪಡೆಯಲಿದ್ದಾರೆ.
ರೂ. 2 ಲಕ್ಷ ವರೆಗಿನ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಜೊತೆಗೆ ರೂ. 25 ಸಾವಿರದವರೆಗಿನ ಚಾಲ್ತಿ ಬೆಳೆ ಸಾಲ ಮನ್ನಾ ಮಾಡುವ ಬಗ್ಗೆ ಕೂಡ ಹೇಳಿದ್ದರು. ಇದರಿಂದ ಸರ್ಕಾರಕ್ಕೆ ರೂ. 32,000 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+