ದೇಶದಲ್ಲಿ ಈಗ 5ಜಿ ಯುಗ ಆರಂಭವಾಗಿದೆ. ಈಗಾಗಲೇ 5ಜಿ ಸೇವೆ ಆರಂಭವಾಗಿದೆ. ವಿವಿಧ ಟೆಲಿಕಾಂ ಸಂಸ್ಥೆಗಳ ನಡುವೆ ಸ್ಪರ್ಧೆಯಂತಾಗಿದೆ ಈ 5ಜಿ. ಈ ನಡುವೆ ಕಳೆದ 12 ತಿಂಗಳಿನಲ್ಲಿ ದೇಶದಲ್ಲಿ ಟೆಲಿಕಾಂ ಉದ್ಯೋಗವು ಶೇಕಡ 33.7ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದಕ್ಕೆ ಮುಖ್ಯ ಕಾರಣ ಟೆಲಿಕಾಂ ದುನಿಯಾಕ್ಕೆ 5ಜಿ ಎಂಟ್ರಿ.
ಸೆಪ್ಟೆಂಬರ್ 2021ರಿಂದ ಸೆಪ್ಟೆಂಬರ್ 2022ರ ನಡುವೆ 5ಜಿಗಾಗಿ ಹಾಗೂ ಟೆಲಿಕಮ್ಯೂನಿಕೇಷನ್ ಕೆಲಸಕ್ಕಾಗಿ ನೇಮಕಾತಿಯು ಶೇಕಡ 33.7ರಷ್ಟು ಏರಿಕೆಯಾಗಿದೆ. ಹಲವಾರು ಪ್ರಮುಖ ಸಂಸ್ಥೆಗಳು 5ಜಿ ಸೇವೆ, ತಾಂತ್ರಿಕ ಕಾರ್ಯಕ್ಕಾಗಿ ಉದ್ಯೋಗಿಗಳ ನೇಮಕಾತಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಇಂಡಿಯಾ ಕೆರಿಯರ್ ಎಕ್ಸ್ಪರ್ಟ್ ಆದ ಸುಮಿತ್ರಾ ಚಂದ್, "5ಜಿ ಅಳವಡಿಕೆಗಾಗಿ ಕಾರ್ಯಗಳು ನಡೆಯುತ್ತಿದೆ. ಒಂದು ನಿಗದಿತ ಸಮಯದಲ್ಲಿ ದೇಶದಾದ್ಯಂತ 5ಜಿ ಸೇವೆ ಆರಂಭಕ್ಕಾಗಿ ಕೆಲಸಗಳು ನಡೆಯುತ್ತಿದೆ. ಆದ್ದರಿಂದಾಗಿ ಮುಂದಿನ ಕೆಲವು ತ್ರೈಮಾಸಿಕಗಳವರೆಗೆ ಟೆಲಿಕಾಂ ಕ್ಷೇತ್ರದಲ್ಲಿ ನೇಮಕಾತಿ ಹೆಚ್ಚಾಗುತ್ತ ಹೋಗುವ ನಿರೀಕ್ಷೆ ಇದೆ," ಎಂದು ತಿಳಿಸಿದ್ದಾರೆ.

ಇನ್ನು ನುರಿತ ತಂತ್ರಜ್ಞರಿಗಾಗಿ ಹುಡುಕಾಟ ಹೆಚ್ಚಾಗಬಹುದು. ಹೊಸ ತಂತ್ರಜ್ಞಾನದ ಅಳವಡಿಕೆಗೆ ತಜ್ಞರ ಸಹಾಯ ಎಲ್ಲ ಸಂಸ್ಥೆಗಳಿಗೆ ಅಗತ್ಯವಾಗಿದೆ ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಹೊಸ ತಂತ್ರಜ್ಞಾನದಲ್ಲಿ ಸುರಕ್ಷಿತ ಬಳಕೆಯ ಬಗ್ಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಕೂಡಾ ತಜ್ಞರು ವಿವರಿಸಿದ್ದಾರೆ.
ದೊಡ್ಡ ಹುದ್ದೆಗಳ ವೇತನ ನೋಡಿ!
ಇನ್ನು ಗ್ರಾಹಕ ಸೇವಾ ಪ್ರತಿನಿಧಿಗಳು ಹಾಗೂ ಆಪರೇಷನ್ ಅಸೋಸಿಯೇಟ್ಗಳ ಉದ್ಯೋಗದಲ್ಲಿ ಕಳೆದ ಒಂದು ತಿಂಗಳಿನಲ್ಲಿಯೇ ಕ್ರಮವಾಗಿ ಶೇಕಡ 13.91 ಹಾಗೂ ಶೇಕಡ 8.22ರಷ್ಟು ಬೇಡಿಕೆ ಹೆಚ್ಚಾಗಿದೆ. ಇನ್ನು ದೊಡ್ಡ ಹುದ್ದೆಗಳಾದ ಟೆಕ್ನಿಕಲ್ ಸಪೋರ್ಟ್, ಬಿಪಿಒ ಎಕ್ಸಿಕ್ಯೂಟಿವ್, ಕಸ್ಟಮರ್ ಸರ್ವಿಸ್ ಕಾರ್ಯಕ್ಕೆ ಕ್ರಮವಾಗಿ 3,53,298 ರೂಪಾಯಿ, 3,29,520 ರೂಪಾಯಿ ಹಾಗೂ 3,06,680 ರೂಪಾಯಿ ವೇತನ ಲಭ್ಯವಾಗಲಿದೆ. ಈ ವರದಿಯು ಕಳೆದ ಸೆಪ್ಟೆಂಬರ್ನಿಂದ ಈ ಸೆಪ್ಟೆಂಬರ್ವರೆಗಿನ ಅಂಕಿ ಅಂಶಗಳನ್ನು ಆಧಾರಿಸಿದೆ.
ಸೈಬರ್ ಸೆಕ್ಯುರಿಟಿ ಉದ್ಯೋಗ ಹೆಚ್ಚಳ
ಇನ್ನು ಹೆಚ್ಚಾಗಿ ಆನ್ಲೈನ್ ವಹಿವಾಟುಗಳು ನಡೆಯುತ್ತಿದೆ. ಡಿಜಿಟಲ್ ಪಾವತಿಗಳು ಹೆಚ್ಚುತ್ತಿವೆ. ಈ ನಡುವೆ ಭದ್ರತಾ ಸಮಸ್ಯೆಯೂ ಸಾರ್ವಕಾಲಿಕವಾಗಿ ಹೆಚ್ಚಾಗಿದೆ. ಇದಕ್ಕೆ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಆಗಿರುವ ಆನ್ಲೈನ್ ವಂಚನೆಗಳೇ ಸಾಕ್ಷಿಯಾಗಿದೆ. ಆಗಸ್ಟ್ 2019 ರಿಂದ ಆಗಸ್ಟ್ 2022 ರ ನಡುವೆ "ಸೈಬರ್ ಸೆಕ್ಯುರಿಟಿ" ಗಾಗಿ ಉದ್ಯೋಗ ಪೋಸ್ಟಿಂಗ್ಗಳು ಶೇಕಡಾ 81 ರಷ್ಟು ಬೆಳೆದಿದೆ.
ಆಗಸ್ಟ್ 2019 ರಿಂದ ಆಗಸ್ಟ್ 2022 ರ ನಡುವೆ ಭದ್ರತೆಯಲ್ಲಿ ಈಗಾಗಲೇ ಶೇಕಡಾ 25.5 ರಷ್ಟು ವ್ಯತ್ಯಾಸವಿದೆ. ಇದಕ್ಕೆ ಮುಖ್ಯ ಕಾರಣ 5ಜಿ ಸೇವೆಯಾಗಿದೆ. 5ಜಿಯಿಂದಾಗಿ ಟೆಲಿಕಾಂ ಉದ್ಯೋಗ ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications