ನವದೆಹಲಿ, ಅ. 17: ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಸಂಸ್ಥೆ ಸಾರ್ವಜನಿಕ ವಲಯ ಬ್ಯಾಂಕ್ಗಳಿಗೆ (ಪಿಎಸ್ಬಿ) ನೀಡುವ ಸಾಲ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ತುಸು ಏರಿಕೆ ಆಗಿದೆ. 59 ನಿಮಿಷದೊಳಗೆ ಸಾಲ ಅನುಮೋದನೆ ನೀಡುವ ಯೋಜನೆ ಇದು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪಿಎಸ್ಬಿ ಸಾಲಗಳ ಸಂಖ್ಯೆ ಏರಿರುವುದು ಸರಕಾರ ದತ್ತಾಂಶದಿಂದ ತಿಳಿದುಬಂದಿದೆ. 2020 ಅಕ್ಟೋಬರ್ 1ರಿಂದ 2021ರ ಸೆಪ್ಟೆಂಬರ್ವರೆಗೆ 2,34,905 ಸಾಲಗಳನ್ನು ಈ ಯೋಜನೆ ಅಡಿ ವಿತರಿಸಲಾಗಿತ್ತು. ಒಟ್ಟು 78,409 ಕೋಟಿ ರೂಪಾಯಿಯನ್ನು ಸಾಲವಾಗಿ ನೀಡಲಾಗಿತ್ತು. 2021 ಅಕ್ಟೋಬರ್ 1ರಿಂದ 2022 ಸೆಪ್ಟೆಂಬರ್ 20ರವರೆಗೆ 82,822 ಕೋಟಿ ರೂ ಮೊತ್ತದಷ್ಟು ಒಟ್ಟು 2,42,812 ಸಾಲಗಳನ್ನು ನೀಡಲಾಗಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 3.36ರಷ್ಟು ಹೆಚ್ಚಳವಾಗಿದೆ.
59 ನಿಮಿಷಗಳ ಈ ಸಾಲ ಅನುಮೋದನೆ ಯೋಜನೆಯನ್ನು ಆನ್ಲೈನ್ ಪಿಎಸ್ಬಿ ಲೋನ್ಸ್ (ಒಪಿಎಲ್) ಸಂಸ್ಥೆ ನಿಭಾಯಿಸುತ್ತದೆ. ಈ ಹಣಕಾಸು ವರ್ಷದಲ್ಲಿ (ಏಪ್ರಿಲ್ನಿಂದ ಮಾರ್ಚ್ವರೆಗೆ) ಒಂದು ಲಕ್ಷ ಕೋಟಿ ರೂ ಸಾಲ ವಿತರಣೆಯಾಗುವ ಸಾಧ್ಯತೆ ಇದೆ ಎಂದು ಒಪಿಎಲ್ ಸಂಸ್ಥೆಯ ಸಿಇಒ ಜಿನಂದ್ ಶಾ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಅಂದಾಜು ಪ್ರಕಾರ ಸೆಪ್ಟೆಂಬರ್ನಿಂದ ಮಾರ್ಚ್ವರೆಗೆ ಎಂಎಸ್ಎಂಇಗಳಿಗೆ ಹೆಚ್ಚು ಸಾಲ ವಿತರಣೆ ಆಗುತ್ತದೆ. ಈ ಅವಧಿಯಲ್ಲೇ ಶೇ. 50ರಷ್ಟು ಸಾಲ ವಿತರಣೆ ಆಗಬಹುದು ಎಂದಿದ್ದರು.

ಏನಿದು ಯೋಜನೆ?
ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೆ (ಎಂಎಸ್ಎಂಇ) 10 ಲಕ್ಷದಿಂದ ಹಿಡಿದು 5 ಕೋಟಿ ರೂವರೆಗೆ ಸಾಲ ನೀಡಲಾಗುತ್ತದೆ. ಈ ಯೋಜನೆಯ ಅಡಿ ಇಂಥ ಸಾಲಗಳಿಗೆ ಕೇವಲ 59 ನಿಮಿಷದಲ್ಲಿ ಅನುಮೋದನೆ ನೀಡಲಾಗುತ್ತದೆ. ಈ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 8.5ರಿಂದ ಪ್ರಾರಂಭವಾಗುತ್ತದೆ.
ಇನ್ನು, ಆಗಸ್ಟ್ವರೆಗಿನ ಒಂದು ವರ್ಷದ ಅವಧಿಯಲ್ಲಿ ಎಂಎಸ್ಎಂಇ ವಲಯಕ್ಕೆ ಬ್ಯಾಂಕ್ನಲ್ಲಿ ಕಾಯ್ದಿರಿಸಲಾಗಿದ್ದ ಸಾಲ 18.15 ಲಕ್ಷ ಕೋಟಿ ರೂ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 24ರಷ್ಟು ಹೆಚ್ಚಳ ಕಂಡಿದೆ. ಏಪ್ರಿಲ್ನಿಂದ ಆರಂಭಗೊಂಡು ಪ್ರತೀ ತಿಂಗಳೂ ಬ್ಯಾಂಕ್ ಕ್ರೆಡಿಟ್ನಲ್ಲಿ ಏರಿಕೆ ಕಂಡಿದೆ.

ಮುದ್ರಾ ಸಾಲದಲ್ಲೂ ಹೆಚ್ಚಳ
ಸಣ್ಣ ಉದ್ಯಮಗಳಿಗೆ ನೀಡಲಾಗುವ ಮುದ್ರಾ ಯೋಜನೆ ಅಡಿ ನೀಡಲಾಗುವ ಸಾಲದಲ್ಲೂ ಏರಿಕೆ ಆಗಿರುವುದು ಇತ್ತೀಚಿನ ದತ್ತಾಂಶದಿಂದ ತಿಳಿದುಬಂದಿದೆ.
ಈ ಬಾರಿಯ ಹಣಕಾಸು ವರ್ಷದಲ್ಲಿ ಅಕ್ಟೋಬರ್ 7ರವರೆಗೆ ಬರೋಬ್ಬರಿ 2.19 ಕೋಟಿ ಸಾಲಗಳನ್ನು ನೀಡಲಾಗಿದೆ. ವಿತರಣೆಯಾದ ಸಾಲದ ಮೊತ್ತ 1.58 ಲಕ್ಷ ಕೋಟಿ ರೂ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 8ರಷ್ಟು ಮುದ್ರಾ ಸಾಲದಲ್ಲಿ ಹೆಚ್ಚಳವಾಗಿದೆ.
2015ರಲ್ಲಿ ಕೇಂದ್ರ ಸರಕಾರ ಆರಂಭಿಸಿದ ಮುದ್ರಾ ಸಾಲ ಯೋಜನೆಯಲ್ಲಿ ಸಣ್ಣ ಉದ್ಯಮಗಳಿಗೆ 10 ಲಕ್ಷ ರೂವರೆಗೆ ಸಾಲ ಒದಗಿಸಲಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications