For Quick Alerts
For Daily Alerts
ಕೆನರಾ ಬ್ಯಾಂಕ್ಗೆ 174 ಕೋಟಿ ರು ವಂಚನೆ: ಪಂಜಾಬ್ ಬಾಸುಮತಿ ರೈಸ್ ಮೇಲೆ ಸಿಬಿಐ ದಾಳಿ
|
ಅಮೃತಸರ್, ಜುಲೈ 3: ಕೆನರಾ ಬ್ಯಾಂಕ್ಗೆ 174 ಕೋಟಿ ರುಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಪಂಜಾಬ್ ಬಾಸುಮತಿ ರೈಸ್ ಲಿಮಿಟೆಡ್ ಮೇಲೆ ಧಿಡೀರ್ ದಾಳಿ ನಡೆಸಿದೆ.
ಅಮೃತಸರ್ದ ಪಂಜಾಬ್ ಬಾಸುಮತಿ ರೈಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಿಬಿಐ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣ ಹಗರಣ: ಜಿವಿಕೆ ಗ್ರುಪ್ ಮೇಲೆ ಸಿಬಿಐ ಪ್ರಕರಣ
ಕಂಪೆನಿ ಕಚೇರಿಯ ಆವರಣದಲ್ಲಿ ಶೋಧಗಳು ನಡೆದಿದ್ದು, ನಿರ್ದೇಶಕರಾದ ಪಂಜಾಬ್ನ ಕುಲ್ವಿಂದರ್ ಸಿಂಗ್ ಮಖಾನಿ, ಜಸ್ಮೀತ್ ಕೌರ್ ಮತ್ತು ಮಂಜೀತ್ ಸಿಂಗ್ ಮಖಾನಿ ಪ್ರಕರಣದಲ್ಲಿ ಆರೋಪಿತರಾಗಿ ಇದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಐಡಿಬಿಐ ಬ್ಯಾಂಕ್, ಯುಕೋ ಬ್ಯಾಂಕ್ ಒಳಗೊಂಡ ಕೆನರಾ ಬ್ಯಾಂಕ್ ನೇತೃತ್ವದ ಒಕ್ಕೂಟವನ್ನು 350.84 ಕೋಟಿ ರೂ.ಗೆ (174.89 ಕೋಟಿ ರೂ. ಕೆನರಾ ಬ್ಯಾಂಕ್) ಬಾಸ್ಮತಿ ರೈಸ್ ಲಿಮಿಟೆಡ್ ವಂಚಿಸಿದೆ.
English summary