For Daily Alerts
ತೆರಿಗೆ ಭಯೋತ್ಪಾದನೆಯಿಂದ ಭಾರತದ ಆರ್ಥಿಕತೆಗೆ ಧಕ್ಕೆ: ಮನಮೋಹನ್ ಸಿಂಗ್
ಕೇಂದ್ರದ ಆರ್ಥಿಕ ನೀತಿಗಳು ಮತ್ತು ತೆರಿಗೆ ಭಯೋತ್ಪಾದನೆ ಭಾರತೀಯರ ವ್ಯವಹಾರಗಳ ವಿಶ್ವಾಸವನ್ನು ಅಲುಗಾಡಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ.
|
ಕೇಂದ್ರದ ಆರ್ಥಿಕ ನೀತಿಗಳು ಮತ್ತು ತೆರಿಗೆ ಭಯೋತ್ಪಾದನೆ ಭಾರತೀಯರ ವ್ಯವಹಾರಗಳ ವಿಶ್ವಾಸವನ್ನು ಅಲುಗಾಡಿಸಿದೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಾರೆ.
ತೆರಿಗೆ ಸುಧಾರಣೆಗಾಗಿ ಜಾರಿ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೀತಿಯಿಂದಾಗಿ ಸಣ್ಣ ವ್ಯವಹಾರಗಳ ಬೆನ್ನೆಲುಬು ಮುರಿದಿದೆ. ತೆರಿಗೆ ಭಯೋತ್ಪಾದನೆಯ ಭಯದಿಂದಾಗಿ ಭಾರತೀಯರ ಹೂಡಿಕೆಯ ವಿಶ್ವಾಸ ನಶಿಸಿದೆ. ಈ ಅವಳಿಗಳ (ಅನಾಣ್ಯೀಕರಣ ಮತ್ತು ಜಿಎಸ್ಟಿ) ಸ್ಪೋಟದಿಂದ ಭಾರತದ ಆರ್ಥಿಕತೆ ಛಿದ್ರಗೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ದುರ್ಬಲ ಆರ್ಥಿಕ ನೀತಿಗಳ ಕಾರಣದಿಂದಾಗಿ ಚೀನಾದಿಂದ ಆಮದು ಪ್ರಮಾಣ ಹೆಚ್ಚಳ ಕಂಡಿದ್ದು, ಉದ್ಯೋಗದ ಪ್ರಮಾಣದ ಮೇಲೂ ಪರಿಣಾಮ ಬೀರಿದೆ ಎಂದು ಸಿಂಗ್ ಹೇಳಿದ್ದಾರೆ.
English summary
Tax terrorism eroded confidence of Indian businesses: Manmohan Singh
Story first published: Tuesday, November 7, 2017, 17:16 [IST]