ಕೇಂದ್ರ ಸಚಿವ ಪಿಯೂಷ್ ಗೋಯಲ್ ರೈಲ್ವೆ ಬಜೆಟ್ ನಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಹೀಗಿವೆ.
* 2019-20ನೇ ಸಾಲಿಗೆ ರೈಲ್ವೆ ಬಜೆಟ್ ಗೆ 64,587 ಕೋಟಿ ಘೋಷಣೆ
* ಸದ್ಯಕ್ಕೆ ಇರುವ ಕಾರ್ಯ ನಿರ್ವಹಣಾ ಪ್ರಮಾಣ 96.2%ರಿಂದ 95%ಗೆ ಗುರಿ ಇರಿಸಲಾಗಿದೆ.
* ಸ್ವದೇಶಿ ತಂತ್ರಜ್ಞಾನಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ದೊಡ್ಡ ಗರಿ .
* ಬ್ರಾಡ್ ಗೇಜ್ ನೆಟ್ ವರ್ಕ್ ನಲ್ಲಿ ಇನ್ನು ಮುಂದೆ ಎಲ್ಲ ಲೆವೆಲ್ ಕ್ರಾಸಿಂಗ್ ಗಳಲ್ಲೂ ಸಿಬ್ಬಂದಿ ನೇಮಕ .

* ಹಳಿಗಳಲ್ಲಿ ದೋಷಗಳನ್ನು ಕಂಡು ಹಿಡಿಯುವುದಕ್ಕೆ ಕೃತಿಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಬಳಕೆ. ಈಚೆಗಷ್ಟೇ ಸ್ಮಾರ್ಟ್ ಕೃತಕ ಬುದ್ಧಿಮತ್ತೆ ಇರುವ ಎಲ್ ಎಚ್ ಬಿ ಬೋಗಿ ಜಾರಿಗೆ ತರಲಾಗಿತ್ತು. ಇನ್ನು ಮುಂದೆ ಎಲ್ಲ ರೈಲುಗಳಲ್ಲೂ ಈ ತಂತ್ರಜ್ಞಾನ ಬಳಕೆ.
* ಹೊಸದಾಗಿ ಐಆರ್ಸಿಟಿಸಿ ವೆಬ್ ಸೈಟ್ ರಚನೆ. ಅದರಲ್ಲಿ ಹೆಚ್ಚು ಫೀಚರ್.
* ಬಿಲ್ ಕೊಡದಿದ್ದರೆ ರೈಲುಗಳಲ್ಲಿ ಯಾವುದೇ ಆಹಾರ ಖರೀದಿಸದಂತೆ ಸೂಚನೆ. ಜಿಎಸ್ ಟಿ ಒಳಗೊಂಡಂತೆ ದರವನ್ನು ಟಿನ್ ಪ್ಲೇಟ್ ಮೇಲೆ ಮುದ್ರಿಸಿರಬೇಕು. ಇದರಿಂದ ಹೆಚ್ಚಿನ ಬೆಲೆ ಆಹಾರ ಮಾರಾಟ ಮಾಡುವುದನ್ನು ತಡೆಯಬಹುದಾಗಿದೆ.
* ಉತ್ಕೃಷ್ಟ ಯೋಜನೆಯಡಿ 140 ಎಕ್ಸ್ಪ್ರೆಸ್ ರೈಲುಗಳನ್ನು ಈ ಹಣಕಾಸು ವರ್ಷದಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಮುಂದಿನ ಕೆಲ ವರ್ಷಗಳಲ್ಲಿ 640 ರೈಲುಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ರೈಲ್ವೆ ಪ್ರಯಾಣ ಸೌಲಭ್ಯವನ್ನು ಹೆಚ್ಚಿಸುವುದು ಇದರ ಉದ್ದೇಶ.
* ಮುಂದಿನ ಎರಡು ವರ್ಷದಲ್ಲಿ 2.30 ಲಕ್ಷ ಉದ್ಯೋಗಗಳನ್ನು ರೈಲ್ವೆ ಇಲಾಖೆಯಲ್ಲಿ ಸೃಷ್ಟಿಸುವುದು. ಸಾಮಾನ್ಯ ವರ್ಗದ 10% ಮೀಸಲಾತಿಯೂ ಇದರಲ್ಲಿ ಸೇರಿರುತ್ತದೆ.
* ವಿಮಾನ ನಿಲ್ದಾಣ ಮಾದರಿಯಲ್ಲಿ ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವುದು. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಸಂಸ್ಥೆಯು ಈ ಕಾರ್ಯವನ್ನು ಮಾಡುತ್ತಿದ್ದು, ಮಧ್ಯಪ್ರದೇಶದ ಹಬೀಬ್ಗಂಜ್ ರೈಲ್ವೆ ನಿಲ್ದಾಣ ಮತ್ತು ಗುಜರಾತ್ನ ಗಾಂಧಿನಗರ ರೈಲ್ವೆ ನಿಲ್ದಾಣಗಳು ಕೆಲವೇ ದಿನಗಳಲ್ಲಿ ಸಂಪೂರ್ಣ ಚಹರೆ ಬದಲಾಯಿಸಿ ವಿಮಾನ ನಿಲ್ದಾಣದಂತೆ ಕಂಗೊಳಿಸಲಿವೆ. ನಿಧಾನವಾಗಿ ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಹೀಗೆಯೇ ಬದಲಾಯಿಸಲಾಗುವುದು.
* ಎಲ್ಲಾ ರೈಲ್ವೆ ಲೆವೆಲ್ ಕ್ರಾಸಿಂಗ್ಗಳಿಗೂ ಭದ್ರತೆ ನೀಡಲಾಗಿದ್ದು, ಭದ್ರತೆ ಇಲ್ಲದೆ ಯಾವುದೇ ಲೆವೆಲ್ ಕ್ರಾಸಿಂಗ್ ದೇಶದಲ್ಲಿ ಇಲ್ಲ ಎಂದು ಗೋಯಲ್ ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications