ಬಾಂಬೆ ಷೇರುವಿನಿಮಯ ಕೇಂದ್ರದ ಹೆಗ್ಗುರುತಾದ ಸೆನ್ಸೆಕ್ಸ್ ಸೋಮವಾರದಂದು ಸುಮಾರು 453 ಪಾಯಿಂಟುಗಳಷ್ಟು ಕುಸಿತಕಂಡು ದಿನದ ಅಂತ್ಯದಲ್ಲಿ 362 ಪಾಯಿಂಟುಗಳಷ್ಟು ಇಳಿಕೆಯಲ್ಲಿ ಕೊನೆಗೊಂಡಿದೆ.
ಎಂದಿನಂತೆ ಈ ಭಾರಿ ಕುಸಿತದ ಹಿಂದೆ ಹೆಚ್ಚಿನ ಪ್ರಭಾವ ಬೀರಿರುವ ಕಂಪೆನಿಗಳೆಂದರೆ ಯೆಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ ಡಿ ಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಸ್ ಬಿ ಐ, ಐಸಿಐಸಿಐ ಬ್ಯಾಂಕ್ ಗಳು ಹೆಚ್ಚಿನ ಒತ್ತಡದಿಂದ ಸೆನ್ಸೆಕ್ಸ್ ನ ಈ ಕುಸಿತಕ್ಕೆ ಮುಖ್ಯ ಕಾರಣವಾಗಿವೆ. ಈ ಒಂಬತ್ತು ಸಂಸ್ಥೆಗಳು ವಿತ್ತೀಯ ವಲಯಕ್ಕೆ ಸೇರಿವೆ. ಹಾಗೆಯೇ ಸೆನ್ಸೆಕ್ಸ್ ಏರಿಕೆ ಕಂಡಾಗ ಇದೆ ವಲಯದ ಕಂಪನಿಗಳು ಹೆಚ್ಚಿನ ಕೊಡುಗೆ ನೀಡುವುದು ಸಾಮಾನ್ಯ.
ಇಂತಹ ವಾತಾವರಣದಲ್ಲಿ ಮಿಂಚಿದ ಕಂಪನಿ ಎಂದರೆ ದೀಪಕ್ ನೈಟ್ರೇಟ್ ಷೇರಿನ ಬೆಲೆ ರೂ.304 ರವರೆಗೂ ಏರಿಕೆ ಕಂಡು ನಂತರ ರೂ.286ರ ಸಮೀಪ ಕೊನೆಗೊಂಡಿದೆ. ಇಂದು, ಅಂದರೆ ಅಕ್ಷಯ ತೃತೀಯಾದಂದು ಮತ್ತೆ ರೂ.290ರ ಸಮೀಪವಿದೆ.

ಆಕರ್ಷಕ ಫಲಿತಾಂಶದೊಂದಿಗೆ ಪ್ರತಿ ಷೇರಿಗೆ ರೂ.12.50 ಯಂತೆ ಲಾಭಾಂಶ ಪ್ರಕಟಿಸಿರುವ ಟಾಟಾ ಕೆಮಿಕಲ್ಸ್ ಸುಮಾರು ರೂ.49ರಷ್ಟು ಏರಿಕೆ ಕಂಡುಕೊಂಡಿತು. ಇಂದು ಸಹ ಏರಿಕೆ ಮುಂದುವರೆದಿದೆ. ರೇಮಾಂಡ್, ಪಿ ಸಿ ಜ್ಯೂವೆಲ್ಲರ್ಸ್, ಬಿರ್ಲಾ ಕಾರ್ಪೊರೇಷನ್, ಅಲೆಂಬಿಕ್ ಫಾರ್ಮ ಗಳು ಏರಿಕೆ ಕಂಡುಕೊಂಡವು.
ಆದರೆ 1:1ರ ಅನುಪಾತದ ಬೋನಸ್ ಪ್ರಕಟಿಸಿದ ನಂತರ ರೂ.625 ಅನ್ನು ದಾಟಿದ್ದಂತಹ ಬಯೋಕಾನ್ ಷೇರಿನ ಬೆಲೆ ರೂ.539.95ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ರೂ.544.55 ರಲ್ಲಿ ಕೊನೆಗೊಂಡಿದೆ. ಇಂದು ಚುರುಕಾದ ಏರಿಕೆಯತ್ತ ತಿರುಗಿದೆ.
ಪ್ರತಿ ಷೇರಿಗೆ ರೂ.9ರ ಲಾಭಾಂಶದೊಂದಿಗೆ ಉತ್ತಮ ಫಲಿತಾಂಶ ಪ್ರಕಟಿರುವ ಸಯಂಟ್ ಲಿಮಿಟೆಡ್ ರೂ.564.90ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ರೂ.568ರಲ್ಲಿ ಕೊನೆಗೊಂಡಿದೆ. ಇಂದು ಮತ್ತಷ್ಟು ಇಳಿಕೆ ಕಂಡಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್ ಕಂಪನಿ 22ರಂದು ಕಂಪನಿಯ ಷೇರಿನ ಮುಖಬೆಲೆಯನ್ನು ರೂ.2 ರಿಂದ ರೂ.1ಕ್ಕೆ ಸೀಳಲು ಪರಿಶೀಲಿಸಲಿದೆ.
ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಇಂದಿನಿಂದ ಪ್ರತಿ ಷೇರಿಗೆ ರೂ.10ರ ಲಾಭಾಂಶ ರಹಿತ ವಹಿವಾಟು ಆರಂಭವಾಗಿದ್ದು ಷೇರಿನ ಬೆಲೆ ರೂ.675 ಸಮೀಪಕ್ಕೆ ಕುಸಿತ ಕಂಡಿದೆ.
ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಬುಧವಾರ 8ರಂದು ಫಲಿತಾಂಶ ಮತ್ತು ಲಾಭಾಂಶಗಳನ್ನು ಪ್ರಕಟಿಸಲಿದ್ದು, ಷೇರಿನ ಬೆಲೆ ಕುಸಿತಕಂಡಿರುವುದು ಸೋಜಿಗವಾಗಿದೆ.
ಇದು ಸರಿಯಾಗಬಹುದೇ?
ರೂ. 5ರ ಮುಖಬೆಲೆಯ ಕೋಟಕ್ ಮಹಿಂದ್ರಾ ಬ್ಯಾಂಕ್ ಸುಮಾರು ರೂ.1,400ರ ಸಮೀಪ ವಹಿವಾಟಾಗುತ್ತಿದ್ದು, ಪ್ರತಿ ಷೇರಿಗೆ ರೂ.0.80ರ ಲಾಭಾಂಶ ಪ್ರಕಟಿಸಿದೆ.
ರೂ.10ರ ಮುಖಬೆಲೆಯ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸುಮಾರು ರೂ.1,370ರ ಸಮೀಪ ವಹಿವಾಟಾಗುತ್ತಿದ್ದು, ಪ್ರತಿ ಷೇರಿಗೆ ರೂ.6.50ರ ಲಾಭಾಂಶ ಪ್ರಕಟಿಸಿದೆ.
ಅಂದರೆ ಕೋಟಕ್ ಬ್ಯಾಂಕ್ ಷೇರನ್ನು ರಿಲಯನ್ಸ್ ಇಂಡಸ್ಟ್ರೀಸ್ ಷೇರಿಗೆ ಪರಿವರ್ತಿಸಿಕೊಂಡಲ್ಲಿ ಹೂಡಿಕೆ ಮೌಲ್ಯವರ್ಧನೆಯಾಗಬಹುದೇ ಪರಿಶೀಲಿಸಿ ನಿರ್ಧರಿಸಿರಿ.
ವಿ.ಸೂ. : ಇದು ಲೇಖಕರ ಅಭಿಪ್ರಾಯ. ಪೇಟೆಯ ಚಲನೆಯು ಸ್ವತಂತ್ರವಾಗಿದ್ದು ಯಾವುದೇ ನಿರ್ದಿಷ್ಟ ರೀತಿಯಲ್ಲಿ ಚಲಿಸುವುದೆಂದು ಪೂರ್ವ ನಿರ್ಧರಿಸಲಾಗದು. ಸಂದರ್ಭವನ್ನರಿತು, ಸ್ವಂತ ನಿರ್ಧಾರದಿಂದ ಚಟುವಟಿಕೆ ನಡೆಸಿರಿ.
More From GoodReturns

Stock Market Crash: ವಾರಾಂತ್ಯದಲ್ಲೂ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರ ನಿದ್ದೆಗೆಡಿಸಿದ ಮಧ್ಯಪ್ರಾಚ್ಯದ ಯುದ್ಧ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications