ಕೋವಿಡ್: ಕರ್ನಾಟಕ ಸಿಎಂ ಪರಿಹಾರ ನಿಧಿಗೆ ಬಂದಿರುವ ಹಣ ಎಷ್ಟು?
ಬೆಂಗಳೂರು, ಜೂನ್ 8: ಕೊರೊನಾವೈರಸ್ ಮಹಾಮಾರಿ ಕರ್ನಾಟಕದಲ್ಲೂ ಅಲ್ಲೋಲ ಕಲ್ಲೋಲ ಹುಟ್ಟಿಹಾಕಿದೆ. ಕರ್ನಾಟಕ ಸರ್ಕಾರ ಸೋಂಕು ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು, ಪರಿಸ್ಥಿತಿ ಕೈ ಮೀರಿ ಹೋಗದಂತೆ ನೋಡಿಕೊಳ್ಳುತ್ತಿದೆ.
4,759 ಕೋಟಿ ರುಪಾಯಿಯ ಕೊರತೆ ಬಜೆಟ್ ಮಂಡಿಸಿದ ಯಡಿಯೂರಪ್ಪ
ಇಂತಹ ದೊಡ್ಡ ಬಿಕ್ಕಟ್ಟು ಎದುರಿಸಲು ಸರ್ಕಾರ ಬಳಿ ಹಣಕಾಸಿನ ಹೊರತೆಯೂ ಕಾಡುತ್ತಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾರ್ವಜನಿಕರಿಂದ ದೇಣಿಗೆ, ಹಣಕಾಸಿನ ನೆರವು ಸ್ವೀಕರಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಅನೇಕ ಸಂಘ ಸಂಸ್ಥೆಗಳು, ದಾನಿಗಳು ಉದಾರ ನೆರವು ನೀಡಿದ್ದರು.
ಮಾರ್ಚ್ 25 ರಿಂದ ಮೇ 15 ರವರೆಗೆ ಕರ್ನಾಟಕ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಟ್ಟು 267 ಕೋಟಿ ರುಪಾಯಿ ಹಣ ಜಮಾವಣೆ ಆಗಿದೆ ಎಂಬುದು ತಿಳಿದು ಬಂದಿದೆ. ಟಿ ನರಸಿಂಹ ಮೂರ್ತಿ ಎನ್ನುವರು ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಈ 267 ಕೋಟಿ ರುಪಾಯಿಯನ್ನು ಕೊರೊನಾ ರೋಗ ನಿಯಂತ್ರಣದಲ್ಲಿ ತುರ್ತು ಆಪತ್ ನಿಧಿಯಾಗಿ ಬಳಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.